ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಸಂದರ್ಶನ | ಬದುಕು ಕಟ್ಟಿಕೊಡುವ ‘ಮೋದಿ ಗ್ಯಾರಂಟಿ’ಗೆ ಜನಬೆಂಬಲ: ಬಸವರಾಜ ಬೊಮ್ಮಾಯಿ

Published : 2 ಮೇ 2024, 23:18 IST
Last Updated : 2 ಮೇ 2024, 23:18 IST
ಫಾಲೋ ಮಾಡಿ
Comments
ಬಸವರಾಜ ಬೊಮ್ಮಾಯಿ 
ಬಸವರಾಜ ಬೊಮ್ಮಾಯಿ 
ನೀವು ಅಧಿಕಾರದಲ್ಲಿದ್ದಾಗ ಮುಸ್ಲಿಮರ ಶೇ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿದ್ದೀರಿ. ಈ ವಿಷಯ ರಾಷ್ಟ್ರವ್ಯಾಪಿ ಚರ್ಚೆಯಾಗುತ್ತಿದೆಯಲ್ಲ?
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಮುಸ್ಲಿಂ ಸಮುದಾಯದಲ್ಲಿರುವ ಪಿಂಜಾರ ನದಾಫ ಸೇರಿದಂತೆ 24 ಜಾತಿಗಳು ಈಗಾಗಲೇ ‘2ಎ’ ನಲ್ಲಿವೆ. ಬಡ ಮುಸ್ಲಿಮರ ಮೀಸಲಾತಿಯನ್ನು ನಾವು ತೆಗೆದಿಲ್ಲ. ಜಾತಿ ಆಧಾರಿತ ಮೀಸಲಾತಿ ಈಗಾಗಲೇ ಕರ್ನಾಟಕದಲ್ಲಿದೆ. ಧರ್ಮ ಆಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ. ಇದರಿಂದ ದೇಶದಲ್ಲಿ ದೊಡ್ಡ ಅನಾಹುತವಾಗುತ್ತದೆ ಅಂತ ಅಂಬೇಡ್ಕರ್‌ ಅವರೇ ಹೇಳಿದ್ದರು. ಆಂಧ್ರದಲ್ಲಿ ಎರಡು ಮೂರು ಬಾರಿ ಮಾಡಿದ್ದ ಪ್ರಯೋಗಗಳನ್ನು ನ್ಯಾಯಾಲಯ ರದ್ದುಪಡಿಸಿದೆ.
‘ಚುನಾವಣಾ ಬಾಂಡ್’ ವಿಷಯ ಕಾಂಗ್ರೆಸ್ಸಿಗೆ ಬ್ರಹ್ಮಾಸ್ತ್ರವಾಗಿದೆಯಲ್ಲ?
ಇ.ಡಿ ಐ.ಟಿ ಪ್ರಕರಣಗಳಿರುವ ಕಂಪನಿಗಳಿಂದ ಶೇ 66ರಷ್ಟು ಪಾಲನ್ನು ವಿರೋಧ ಪಕ್ಷಗಳೇ ಪಡೆದಿವೆ. ಇದಕ್ಕೆ ಅವರೇ ಉತ್ತರ ಕೊಡಬೇಕು. ಚುನಾವಣಾ ಬಾಂಡ್‌ನಲ್ಲಿ ಎಲ್ಲ ಪಕ್ಷಗಳು ಪಾಲುದಾರರು. ಬಾಂಡ್‌ ಇರುವುದರಿಂದ ಯಾರು ಯಾರಿಗೆ ಎಷ್ಟು ಕೊಟ್ಟರು ಎಂಬುದು ಗೊತ್ತಾಗಿದೆ. ಬಾಂಡ್‌ ಇಲ್ಲದಿದ್ದರೆ ಗೊತ್ತೇ ಆಗುತ್ತಿರಲಿಲ್ಲ. ಕಾಂಗ್ರೆಸ್‌ಗೆ ನಂ.2 ದಂಧೆ ಮತ್ತು ಹಣದ ಮೇಲೆ ಆಸೆ. ‘ನೋಟ್‌ ಬ್ಯಾನ್‌’ ಮಾಡಿದಾಗಲೂ ಕಾಂಗ್ರೆಸ್‌ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲು ಹೆಣಗಾಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT