ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಚುನಾವಣೆ 2023 | ಜವಾಬ್ದಾರಿಯಿಂದ ಮತ ಚಲಾಯಿಸಿ: ಮಂಸೋರೆ

Last Updated 10 ಏಪ್ರಿಲ್ 2023, 3:09 IST
ಅಕ್ಷರ ಗಾತ್ರ

ಪ್ರಜಾತಂತ್ರ ವ್ಯವಸ್ಥೆಯಲ್ಲಿ, ತನ್ನ ಸಮಾಜದ ಒಳಿತಿಗಾಗಿ, ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಂವಿಧಾನ ಕೊಟ್ಟಿರುವ ಅತ್ಯಂತ ಪ್ರಬಲ ಅಸ್ತ್ರ ಮತದಾನ. ಮೂಲ ಸೌಲಭ್ಯಗಳ ಆದಿಯಾಗಿ, ಸಮಾಜದ ಪ್ರತಿಯೊಂದು ಅಗತ್ಯಗಳನ್ನು ಪೂರೈಸಬೇಕಾದ, ಅದಕ್ಕೆ ಪೂರಕವಾದ ಶಾಸನಗಳನ್ನು ರೂಪಿಸಲು ‘ಮಾನವೀಯ’ ಗುಣವುಳ್ಳ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ.

ನಮ್ಮೆಲ್ಲರ ಹಕ್ಕಿನ ಮತವನ್ನು ಜವಾಬ್ದಾರಿಯುತವಾಗಿ ಚಲಾಯಿಸಿ ಉತ್ತಮ, ಸೌಹಾರ್ದಯುತ ಸಮಾಜ ಕಟ್ಟಲು ಪ್ರತಿಯೊಬ್ಬರೂ ಮತದಾನ ಮಾಡಬೇಕಿದೆ‌. ಒಂದು ವೇಳೆ ನಿಮ್ಮ ಕ್ಷೇತ್ರದ ಯಾವ ಅಭ್ಯರ್ಥಿಯೂ ನಿಮಗೆ ಸೂಕ್ತ ಅಲ್ಲ ಎಂದು ಎನಿಸಿದರೆ, ನಿಮಗೆ N.O.T.A ಆಯ್ಕೆ ಇದೆಯಲ್ಲವೇ. ಆ ಮೂಲಕ ನಿಮ್ಮ ಅಭಿಪ್ರಾಯವನ್ನು ನಿಮ್ಮ ಹಕ್ಕಿನ ಮೂಲಕವೇ ದಾಖಲಿಸಿ.
ಸಿನಿಕತನ ಬಿಟ್ಟು, ಆಶಾವಾದಿಗಳಾಗೋಣ. ಪ್ರಜಾಪ್ರಭುತ್ವ ಉಳಿಯಲು ಎಲ್ಲರೂ ಮತದಾನ ಮಾಡೋಣ.

-ಮಂಸೋರೆ, ಚಿತ್ರನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT