ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಯಾರೊಬ್ಬರೂ ಸೂಕ್ತ ಅಲ್ಲ ಎಂಬ ಭಾವನೆ ಇದ್ದರೂ ಮತದಾನಕ್ಕೆ ಗೈರು ಹಾಜರಾಗಬಾರದು. ಮತಗಟ್ಟೆಗೆ ಹೋಗಿ ‘ನೋಟಾ’ ಆಯ್ಕೆಗೆ ಮತ ಚಲಾಯಿಸಬೇಕು. ಯಾವಾಗಲೂ ನಮ್ಮ ದೇಶದಲ್ಲಿ ಚುನಾವಣೆಗಳು ನಡೆದಾಗ ಗ್ರಾಮೀಣ ಪ್ರದೇಶದ ಜನರು ಮತ ಚಲಾಯಿಸುವುದನ್ನು ಕರ್ತವ್ಯ ಎಂದು ಭಾವಿಸಿ ಸಂಭ್ರಮಿಸುತ್ತಾರೆ. ಆದರೆ, ನಗರ ಪ್ರದೇಶಗಳ ಜನರು ಮತದಾನಕ್ಕೂ ತಮಗೂ ಸಂಬಂಧ ಇಲ್ಲ ಎಂಬಂತೆ ವರ್ತಿಸಿ, ಮತಗಟ್ಟೆಯಿಂದ ದೂರ ಉಳಿಯುತ್ತಾರೆ.