ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ | ಚಂದ್ರಶೇಖರ ಹೆಸರಲ್ಲಿದೆ ದಾಖಲೆ

ಹಿಂದಿನ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಆರು ಸಲ ಗೆದಿದ್ದ ಕಾಂಗ್ರೆಸ್ ಕಟ್ಟಾಳು
Published : 20 ಏಪ್ರಿಲ್ 2024, 4:58 IST
Last Updated : 20 ಏಪ್ರಿಲ್ 2024, 4:58 IST
ಫಾಲೋ ಮಾಡಿ
Comments
ಸೋಲಿನ ರುಚಿ ತೋರಿಸಿದ್ದ ಎಚ್‌ಡಿಕೆ
ಸತತ ಐದು ಚುನಾವಣೆಯಲ್ಲಿ ಜಯಿಸಿ ಸೋಲಿಲ್ಲದ ಸರದಾರನಾಗಿದ್ದ ಚಂದ್ರಶೇಖರ ಮೂರ್ತಿ ಅವರಿಗೆ ಸೋಲಿನ ರುಚಿ ತೋರಿಸಿದ್ದು ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ. 1996ರ ಲೋಕಸಭಾ ಚುನಾವಣೆ ಮೂಲಕ ರಾಜಕೀಯ ಪ್ರವೇಶಿಸಿದ ಕುಮಾರಸ್ವಾಮಿ ಅವರು ಮೊದಲ ಚುನಾವಣೆಯಲ್ಲೇ ಅನುಭವಿ ಚಂದ್ರಶೇಖರ ಅವರನ್ನು ಸೋಲಿಸುವುದರೊಂದಿಗೆ ‘ಕೈ’ ಕೋಟೆಯನ್ನು ಬೇಧಿಸಿದ್ದರು. 440444 ಮತಗಳನ್ನು ಪಡೆದಿದ್ದ ಕುಮಾರಸ್ವಾಮಿ ಅವರು 107404 (ಶೇ10.27) ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಚಂದ್ರಶೇಖರ ಅವರು 333040 ಮತಗಳನ್ನು ಪಡೆದಿದ್ದರು. ಸೋಲಿನಿಂದ ಕುಗ್ಗದೆ 1999ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಕಣಕ್ಕಿಳಿದ ಚಂದ್ರಶೇಖರ ಅವರು 532910 ಮತಗಳನ್ನು ಪಡೆದು ಹಿಂದಿನ ಚುನಾವಣೆ ಸೋಲಿನ ಸೇಡು ತೀರಿಸಿಕೊಂಡಿದ್ದರು. ಈ ಚುನಾವಣೆಯಲ್ಲಿ ಬಿಜೆಪಿಯ ಎಂ. ಶ್ರೀನಿವಾಸ್ ಎರಡನೇ ಸ್ಥಾನ ಪಡೆದರೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿ ಅವರು ಕೇವಲ 19661 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದು ಠೇವಣಿ ಕಳೆದುಕೊಂಡಿದ್ದರು. 6ನೇ ಗೆಲುವು ಸಾಧಿಸಿದ್ದ ಚಂದ್ರಶೇಖರ ಅವರ ಖುಷಿ ಹೆಚ್ಚು ಕಾಲ ಇರಲಿಲ್ಲ. ಅನಾರೋಗ್ಯದಿಂದಾಗಿ 2001ರಲ್ಲಿ ಅವರು ನಿಧನರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT