ಇದೇ ಮೊದಲ ಬಾರಿ ಚುನಾವಣಾ ಕಣಕ್ಕೆ ಇಳಿದಿರುವ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಅವರು ಎದುರಾಳಿಗಳ ರಾಜಕೀಯ ಪಟ್ಟುಗಳನ್ನು ಕಂಡು ಬೆರಗಾಗುತ್ತಿದ್ದಾರಂತೆ. ತಮ್ಮದೇ ಹೆಸರಿನ ಮತ್ತೊಬ್ಬರು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವುದು ನಿಮ್ಮ ಮತಗಳನ್ನು ಕಸಿಯಲು ಮಾಡುತ್ತಿರುವ ತಂತ್ರ ಎಂದು ಜತೆಗಿರುವವರು ಪದೇಪದೆ ಹೇಳುತ್ತಿರುವುದನ್ನು ಕೇಳಿ ಮಂಜುನಾಥ್ ರೋಸಿ ಹೋಗಿದ್ದಾರಂತೆ. ಕಾಂಗ್ರೆಸ್ನ ತಂತ್ರಗಾರಿಕೆ ಕಂಡ ಅವರು, ‘ಮಂತ್ರ, ಯಂತ್ರ, ತಂತ್ರ, ಕುತಂತ್ರ’ದ ಕುರಿತು ಮಾತುಗಳನ್ನು ಆಡಿದ್ದಂತೆ...