ಪ್ರಧಾನಿ ಮೋದಿ ಅವರ ‘ಗ್ಯಾರಂಟಿ’ಗಳೆಲ್ಲವೂ ಸುಳ್ಳು. ಅವರು ಕೊಟ್ಟಿರುವ ಯಾವುದೇ ಭರವಸೆಯೂ ಈಡೇರಿಲ್ಲ. ಬೆಲೆಯೇರಿಕೆ ನಿಯಂತ್ರಿಸಲು ಬಿಜೆಪಿ ಪ್ರಯತ್ನವನ್ನೇ ಮಾಡಿಲ್ಲ. ಮುಂಬರುವ ಲೋಕಸಭಾ ಚುನಾವಣೆಯು ‘ಇಂಡಿಯಾ’ ಮೈತ್ರಿಕೂಟವನ್ನು ಬೆಂಬಲಿಸಲು ಮತ್ತು ಮೂಲಭೂತ ಹಕ್ಕುಗಳು ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಜನರಿಗೆ ಲಭಿಸುವ ಒಂದು ಅವಕಾಶವಾಗಿದೆ - ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಬಿಜೆಪಿ ಪ್ರಣಾಳಿಕೆಯು ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸುವ ನೀಲನಕ್ಷೆಯಾಗಿದೆ. ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿರುವವರು ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಈ ವಿಚಾರದಲ್ಲಿ ಒಗ್ಗಟ್ಟು ತೋರಿಸಲು ಆಗದವರು, ದೇಶದ ಅಭಿವೃದ್ಧಿಗೆ ಏನು ಮಾಡಲು ಸಾಧ್ಯ? ಅವರಿಗೆ (ಇಂಡಿಯಾ ಮೈತ್ರಿಕೂಟಕ್ಕೆ) ಜನರ ಹಿತ ಬೇಕಾಗಿಲ್ಲ. ತಮ್ಮ ಹಾಗೂ ಕುಟುಂಬದವರ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ - ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ