<p>‘ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ’ ಎಂಬ ಸುದ್ದಿ ಹರಡುತ್ತಿದ್ದಂತೆ, ಮದ್ದೂರು ಶಾಸಕ ಕದಲೂರು ಉದಯ್ ‘ಮಂಡ್ಯ ಜೆಡಿಎಸ್ನಲ್ಲಿ ಗಂಡಸರಿಲ್ವೇ’ ಎಂದು ಪ್ರಶ್ನಿಸಿದ್ದಾರೆ. ಅದರಿಂದ ಕೆಂಡಾಮಂಡಲರಾಗಿರುವ ಸ್ಥಳೀಯ ಜೆಡಿಎಸ್ ನಾಯಕರು ‘ಗಂಡಸುತನ ರುಜುವಾತು ಮಾಡೋದು ಹೇಗೆ’ ಎಂದು ಚರ್ಚಿಸುತ್ತಿದ್ದಾರಂತೆ.</p><p>ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಕೆಲ ಜೆಡಿಎಸ್ ನಾಯಕರು ಇಲ್ಲಿಯವರೆಗೂ ಮನೆಯಿಂದ ಹೊರಗೇ ಬಂದಿರಲಿಲ್ಲ. ಈಗ ಉದಯ್ ಮಾತಿನಿಂದ ಕೋಪೋದ್ರಿಕ್ತರಾಗಿರುವ ಅವರು ಮನೆಯಿಂದ ಹೊರಗೆ ಬಂದು ‘ಸ್ಥಳೀಯ ನಾಯಕರಿಗೆ ಟಿಕೆಟ್ ಕೊಡಿ’ ಎಂದು ಕೇಳಲು ನಿರ್ಧರಿಸಿದ್ದರಂತೆ. ಆ ಮೂಲಕವಾದರೂ ತಮ್ಮ ಗಂಡುಸುತನ ತೋರಿಸುವ ಪ್ರಯತ್ನ ಪಟ್ಟಿದ್ದರಂತೆ.</p><p>ಆದರೆ, ಅದಕ್ಕೆಲ್ಲಾ ಸೊಪ್ಪು ಹಾಕದ ಕುಮಾರಸ್ವಾಮಿ ‘ನನ್ನ ಹಳೇ ಗೆಳೆಯ ಚೆಲುವಣ್ಣ ಹಾಗೂ ಅವರ ಹುರಿಯಾಳು ಸ್ಟಾರ್ ಚಂದ್ರು ವಿರುದ್ಧ ಗೆಲ್ಲೋದು ನಿಮಗೆಲ್ಲಾ ಕಷ್ಟವಾಗಬಹುದು, ಜೊತೆಗೆ, ನಿಮ್ಮಲ್ಲೇ ಒಗ್ಗಟ್ಟಿಲ್ಲದೆ ಕಿತ್ತಾಡುತ್ತೀರಿ. ನಾನೇ ಬರ್ತೇನೆ’ ಎಂದು ಸ್ಪಷ್ಟವಾಗಿ ತಿಳಿಸಿದ್ದಾರಂತೆ.</p><p>ಈಗ ಮತ್ತೆ ಗಂಡಸುತನದ ಪ್ರಶ್ನೆ ಎದುರಾಗಿದ್ದು, ಈ ನಾಯಕರು ಹೊಸ ಉಪಾಯ ಕಂಡುಕೊಂಡಿದ್ದಾರಂತೆ. ‘ಕುಮಾರಣ್ಣನನ್ನು 4 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ, ನರೇಂದ್ರ ಮೋದಿ ಸಂಪುಟದಲ್ಲಿ ಕೃಷಿ ಸಚಿವರನ್ನಾಗಿ ಮಾಡಬೇಕು’ ಎಂದು ಶಪಥ ಮಾಡಿದ್ದಾರಂತೆ. ಆ ಮೂಲಕ ತಮ್ಮ ಗಂಡುಸುತನವನ್ನು ತೋರಿಸಲು ನಿರ್ಧರಿಸಿದ್ದಾರಂತೆ.</p><p>ಜೊತೆಗೆ, ‘ಬೆಟ್ಟಿಂಗ್ ಆಡಿಸುವವರು, ರಿಯಲ್ ಎಸ್ಟೇಟ್ ದಂಧೆಕೋರರೆಲ್ಲರೂ ಗಂಡಸರಾ’ ಎಂದು ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಲೂ ನಿರ್ಧರಿಸಿದ್ದಾರಂತೆ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ’ ಎಂಬ ಸುದ್ದಿ ಹರಡುತ್ತಿದ್ದಂತೆ, ಮದ್ದೂರು ಶಾಸಕ ಕದಲೂರು ಉದಯ್ ‘ಮಂಡ್ಯ ಜೆಡಿಎಸ್ನಲ್ಲಿ ಗಂಡಸರಿಲ್ವೇ’ ಎಂದು ಪ್ರಶ್ನಿಸಿದ್ದಾರೆ. ಅದರಿಂದ ಕೆಂಡಾಮಂಡಲರಾಗಿರುವ ಸ್ಥಳೀಯ ಜೆಡಿಎಸ್ ನಾಯಕರು ‘ಗಂಡಸುತನ ರುಜುವಾತು ಮಾಡೋದು ಹೇಗೆ’ ಎಂದು ಚರ್ಚಿಸುತ್ತಿದ್ದಾರಂತೆ.</p><p>ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಕೆಲ ಜೆಡಿಎಸ್ ನಾಯಕರು ಇಲ್ಲಿಯವರೆಗೂ ಮನೆಯಿಂದ ಹೊರಗೇ ಬಂದಿರಲಿಲ್ಲ. ಈಗ ಉದಯ್ ಮಾತಿನಿಂದ ಕೋಪೋದ್ರಿಕ್ತರಾಗಿರುವ ಅವರು ಮನೆಯಿಂದ ಹೊರಗೆ ಬಂದು ‘ಸ್ಥಳೀಯ ನಾಯಕರಿಗೆ ಟಿಕೆಟ್ ಕೊಡಿ’ ಎಂದು ಕೇಳಲು ನಿರ್ಧರಿಸಿದ್ದರಂತೆ. ಆ ಮೂಲಕವಾದರೂ ತಮ್ಮ ಗಂಡುಸುತನ ತೋರಿಸುವ ಪ್ರಯತ್ನ ಪಟ್ಟಿದ್ದರಂತೆ.</p><p>ಆದರೆ, ಅದಕ್ಕೆಲ್ಲಾ ಸೊಪ್ಪು ಹಾಕದ ಕುಮಾರಸ್ವಾಮಿ ‘ನನ್ನ ಹಳೇ ಗೆಳೆಯ ಚೆಲುವಣ್ಣ ಹಾಗೂ ಅವರ ಹುರಿಯಾಳು ಸ್ಟಾರ್ ಚಂದ್ರು ವಿರುದ್ಧ ಗೆಲ್ಲೋದು ನಿಮಗೆಲ್ಲಾ ಕಷ್ಟವಾಗಬಹುದು, ಜೊತೆಗೆ, ನಿಮ್ಮಲ್ಲೇ ಒಗ್ಗಟ್ಟಿಲ್ಲದೆ ಕಿತ್ತಾಡುತ್ತೀರಿ. ನಾನೇ ಬರ್ತೇನೆ’ ಎಂದು ಸ್ಪಷ್ಟವಾಗಿ ತಿಳಿಸಿದ್ದಾರಂತೆ.</p><p>ಈಗ ಮತ್ತೆ ಗಂಡಸುತನದ ಪ್ರಶ್ನೆ ಎದುರಾಗಿದ್ದು, ಈ ನಾಯಕರು ಹೊಸ ಉಪಾಯ ಕಂಡುಕೊಂಡಿದ್ದಾರಂತೆ. ‘ಕುಮಾರಣ್ಣನನ್ನು 4 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ, ನರೇಂದ್ರ ಮೋದಿ ಸಂಪುಟದಲ್ಲಿ ಕೃಷಿ ಸಚಿವರನ್ನಾಗಿ ಮಾಡಬೇಕು’ ಎಂದು ಶಪಥ ಮಾಡಿದ್ದಾರಂತೆ. ಆ ಮೂಲಕ ತಮ್ಮ ಗಂಡುಸುತನವನ್ನು ತೋರಿಸಲು ನಿರ್ಧರಿಸಿದ್ದಾರಂತೆ.</p><p>ಜೊತೆಗೆ, ‘ಬೆಟ್ಟಿಂಗ್ ಆಡಿಸುವವರು, ರಿಯಲ್ ಎಸ್ಟೇಟ್ ದಂಧೆಕೋರರೆಲ್ಲರೂ ಗಂಡಸರಾ’ ಎಂದು ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಲೂ ನಿರ್ಧರಿಸಿದ್ದಾರಂತೆ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>