ಕಾಂಗ್ರೆಸ್ ಪಕ್ಷವು ಹತಾಶೆಗೊಂಡಿದ್ದು, ಸುಳ್ಳು ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿದೆ. ಮತಕ್ಕಾಗಿ ಆ ಪಕ್ಷವು ಓಲೈಕೆಯ ರಾಜಕಾರಣದ ಮೊರೆ ಹೋಗಿದೆ. ತಮ್ಮ ಸೇವೆ ಮಾಡಲು ಜನರು ಕಾಂಗ್ರೆಸ್ಗೆ ಹಲವು ಬಾರಿ ಅವಕಾಶಗಳನ್ನು ನೀಡಿದ್ದರು. ಆದರೆ ಆ ಪಕ್ಷವು ಜನರ ನಂಬಿಕೆಗೆ ದ್ರೋಹ ಎಸಗಿದೆ. ಸಂವಿಧಾನವನ್ನು ಬದಲಿಸುವ ಸಲುವಾಗಿ ಬಿಜೆಪಿಯು 400 ಕ್ಷೇತ್ರಗಳಲ್ಲಿ ಗೆಲ್ಲಲು ಬಯಸುತ್ತಿದೆ ಎಂದು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ