ದಶಕಗಳ ಕಾಲ ಉತ್ತರಕನ್ನಡವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ಅನಂತಕುಮಾರ ಹೆಗಡೇರು, ಸಂವಿಧಾನ ಬದಲಿಸಲು ಹೋಗಿ ಸಚಿವ ಸ್ಥಾನ ಕಳೆದುಕೊಂಡಿದ್ದರು. ಹಿಂದುತ್ವದ ಹಾದಿಯಿಂದ ಹೆಜ್ಜೆ ಹೊರಗಿಟ್ಟಿರುವ ಮೋದಿ, ಅಮಿತ್ ಶಾ ಜೋಡಿ, ಹೆಗಡೇರಿಗೆ ಟಿಕೆಟ್ ಕೊಡದೇ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ಕೊಟ್ಟಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ಸ್ಪೀಕರ್’ ಆಗಿದ್ದಾಗಲೇ, ಕೆಲವು ಶಾಸಕರು ಕಾಗೇರಿಯವರ ಎಚ್ಚರಿಕೆಗೆ ಬಗ್ಗುತ್ತಿರಲಿಲ್ಲ. ಇನ್ನು ಕಾಗೇರಿ ಬಾವನ ‘ಧ್ವನಿ’ ಉತ್ತರಕನ್ನಡದಲ್ಲಿ ಮೊಳಗ್ತದಾ ಎಂಬ ಚರ್ಚೆ ಶುರುವಾಗಿದೆಯಂತೆ.