<p>ಮಾಗಡಿ: ‘ವಿನಾಶದ ಅಂಚಿನಲ್ಲಿರುವ ಮೂಲ ಜಾನಪದ ಕಲೆ ಮತ್ತು ಕಲಾವಿದರನ್ನು ಬೆಳೆಸಲು ಸರ್ಕಾರ ಮತ್ತು ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಬೇಕು’ ಎಂದು ಕೆಪಿಸಿಸಿ ಸದಸ್ಯ ಎ.ಮಂಜುನಾಥ ಹೇಳಿದರು.<br /> <br /> ತಾಲ್ಲೂಕಿನ ತೂಬಿನಕೆರೆ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ತಾಲ್ಲೂಕು ಮಟ್ಟದ ಜಾನಪದ ಮತ್ತು ಸಾಂಸ್ಕೃತಿಕ ಕಲಾ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ‘ಸಾಂಸ್ಕೃತಿಕ ಕಲಾ ಪ್ರಕಾರವಾಗಿರುವ ಜನಪದದ ಉಳಿವಿಗೆ ಕಲಾವಿದರ ಸಹಕಾರ ಕೂಡ ಅವಶ್ಯ’ ಎಂದು ತಿಳಿಸಿದರು. ‘ಹಿರಿಯ ಜಾನಪದ ಕಲಾವಿದೆ ಗಂಗನರಸಿಂಹಯ್ಯಸಿದ್ದಲಿಂಗಯ್ಯ ಮಾತನಾಡಿ, ‘ಇಂದು ಜಾನಪದ ಕಲಾ ಪ್ರಕಾರಗಳು ಅಳಿವಿನ ಅಂಚಿನಲ್ಲಿದೆ. ಮಕ್ಕಳಿಗೆ ಜಾನಪದದ ಕುರಿತು ಅರಿವು ಬೆಳೆಸಬೇಕು’ ಎಂದರು. ಪುರಸಭಾ ಸದಸ್ಯರಾದ ಎಂ.ಎನ್.ಮಂಜುನಾಥ, ಕೆ.ವಿ.ಬಾಲು, ಗ್ರಾ.ಪಂ ಮಾಜಿ ಸದಸ್ಯ ಈಶ್ವರಪ್ಪ, ನಿವೃತ್ತ ಶಿಕ್ಷಕ ಲಂಕಪ್ಪ, ಹಿರಿಯ ಕಲಾವಿದ ಚಂದ್ರಯ್ಯ, ಮುನಿಭೈರಯ್ಯ, ಕಮಲಮ್ಮನಿಂಗಪ್ಪ, ಅಶ್ವತ್ಥನಾರಾಯಣ ಮಾತನಾಡಿದರು.<br /> <br /> ಗಜಾನನ ಜಾನಪದ ಕಲಾ ಸಂಘದ ವತಿಯಿಂದ ಪಟದ ಕುಣಿತ, ಗಂಗಯ್ಯ ತಂಡದವರಿಂದ ಸೋಮನ ಕುಣಿತ, ಅಮೂಲ್ಯ ತಂಡದವರಿಂದ ಕೋಲಾಟ, ಗಂಗಾಪರಮೇಶ್ವರಿ ಜಾನಪದ ಕಲಾ ಸಂಘದವರಿಂದ ಚಿಲಿಪಿಲಿ ಗೊಂಬೆ, ರವಿ ತಂಡದವರಿಂದ ಪೂಜಾ ಕುಣಿತ, ವಿ.ಸಿ. ಮಾದಯ್ಯ ವೀರಗಾಸೆ ಕುಣಿತ, ಶಿವಣ್ಣ ತಮಟೆ ಮೇಳ, ಅರಸಯ್ಯ ತಂಡದವರ ರಾಮಭಜನೆ, ನರಸಿಂಹಯ್ಯ ತಂಡದಿಂದ ತತ್ವಪದ, ಜಯಲಕ್ಷ್ಮಮ್ಮ ತಂಡದವರಿಂದ ಸೋಬಾನೆ ಪದ, ಗಂಗನರಸಮ್ಮ ತಂಡದಿಂದ ಬೀಸೊಕಲ್ಲಿನ ಪದ, ಕೃಷ್ಣಪ್ಪ ತಂಡದವರು ಜಾನಪದ ಗೀತ ಗಾಯನ ನಡೆಸಿಕೊಟ್ಟರು .</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾಗಡಿ: ‘ವಿನಾಶದ ಅಂಚಿನಲ್ಲಿರುವ ಮೂಲ ಜಾನಪದ ಕಲೆ ಮತ್ತು ಕಲಾವಿದರನ್ನು ಬೆಳೆಸಲು ಸರ್ಕಾರ ಮತ್ತು ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಬೇಕು’ ಎಂದು ಕೆಪಿಸಿಸಿ ಸದಸ್ಯ ಎ.ಮಂಜುನಾಥ ಹೇಳಿದರು.<br /> <br /> ತಾಲ್ಲೂಕಿನ ತೂಬಿನಕೆರೆ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ತಾಲ್ಲೂಕು ಮಟ್ಟದ ಜಾನಪದ ಮತ್ತು ಸಾಂಸ್ಕೃತಿಕ ಕಲಾ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ‘ಸಾಂಸ್ಕೃತಿಕ ಕಲಾ ಪ್ರಕಾರವಾಗಿರುವ ಜನಪದದ ಉಳಿವಿಗೆ ಕಲಾವಿದರ ಸಹಕಾರ ಕೂಡ ಅವಶ್ಯ’ ಎಂದು ತಿಳಿಸಿದರು. ‘ಹಿರಿಯ ಜಾನಪದ ಕಲಾವಿದೆ ಗಂಗನರಸಿಂಹಯ್ಯಸಿದ್ದಲಿಂಗಯ್ಯ ಮಾತನಾಡಿ, ‘ಇಂದು ಜಾನಪದ ಕಲಾ ಪ್ರಕಾರಗಳು ಅಳಿವಿನ ಅಂಚಿನಲ್ಲಿದೆ. ಮಕ್ಕಳಿಗೆ ಜಾನಪದದ ಕುರಿತು ಅರಿವು ಬೆಳೆಸಬೇಕು’ ಎಂದರು. ಪುರಸಭಾ ಸದಸ್ಯರಾದ ಎಂ.ಎನ್.ಮಂಜುನಾಥ, ಕೆ.ವಿ.ಬಾಲು, ಗ್ರಾ.ಪಂ ಮಾಜಿ ಸದಸ್ಯ ಈಶ್ವರಪ್ಪ, ನಿವೃತ್ತ ಶಿಕ್ಷಕ ಲಂಕಪ್ಪ, ಹಿರಿಯ ಕಲಾವಿದ ಚಂದ್ರಯ್ಯ, ಮುನಿಭೈರಯ್ಯ, ಕಮಲಮ್ಮನಿಂಗಪ್ಪ, ಅಶ್ವತ್ಥನಾರಾಯಣ ಮಾತನಾಡಿದರು.<br /> <br /> ಗಜಾನನ ಜಾನಪದ ಕಲಾ ಸಂಘದ ವತಿಯಿಂದ ಪಟದ ಕುಣಿತ, ಗಂಗಯ್ಯ ತಂಡದವರಿಂದ ಸೋಮನ ಕುಣಿತ, ಅಮೂಲ್ಯ ತಂಡದವರಿಂದ ಕೋಲಾಟ, ಗಂಗಾಪರಮೇಶ್ವರಿ ಜಾನಪದ ಕಲಾ ಸಂಘದವರಿಂದ ಚಿಲಿಪಿಲಿ ಗೊಂಬೆ, ರವಿ ತಂಡದವರಿಂದ ಪೂಜಾ ಕುಣಿತ, ವಿ.ಸಿ. ಮಾದಯ್ಯ ವೀರಗಾಸೆ ಕುಣಿತ, ಶಿವಣ್ಣ ತಮಟೆ ಮೇಳ, ಅರಸಯ್ಯ ತಂಡದವರ ರಾಮಭಜನೆ, ನರಸಿಂಹಯ್ಯ ತಂಡದಿಂದ ತತ್ವಪದ, ಜಯಲಕ್ಷ್ಮಮ್ಮ ತಂಡದವರಿಂದ ಸೋಬಾನೆ ಪದ, ಗಂಗನರಸಮ್ಮ ತಂಡದಿಂದ ಬೀಸೊಕಲ್ಲಿನ ಪದ, ಕೃಷ್ಣಪ್ಪ ತಂಡದವರು ಜಾನಪದ ಗೀತ ಗಾಯನ ನಡೆಸಿಕೊಟ್ಟರು .</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>