ಇತ್ತೀಚೆಗೆ ಟಿಡಿಪಿ ತೊರೆದು ವೈಎಸ್ಆರ್ಸಿಪಿ ಸೇರಿರುವ ಸಂಸದ ಕೆ. ಶ್ರೀನಿವಾಸ್ (ನಾನಿ) ವಿಜಯವಾಡದಿಂದ ವೈಎಸ್ಆರ್ಸಿಪಿ ಅಭ್ಯರ್ಥಿ. ಇವರ ಎದುರು ಇವರ ಕಿರಿಯ ಸಹೋದರ ಕೆ. ಶಿವನಾಥ್ (ಚಿನ್ನಿ) ಟಿಡಿಪಿ ಅಭ್ಯರ್ಥಿ.
ಸುಮಾರು ವರ್ಷಗಳಿಂದ ರಾಜಕಾರಣದಲ್ಲಿರುವ ಕೆ. ಶ್ರೀನಿವಾಸ್ ಅವರು ಟಿಡಿಪಿಯಿಂದ ಎರಡು ಬಾರಿ ಸಂಸದ ಆಗಿದ್ದರು. ಅಲ್ಲದೇ ಉದ್ಯಮಿಯೂ ಆಗಿ ಗುರುತಿಸಿಕೊಂಡಿರುವ ಇವರು ಕೇಸಿನೇನಿ ಟ್ರಾವೆಲ್ಸ್ ಕಂಪನಿ ಮಾಲೀಕರೂ ಹೌದು.
ಕೆ. ಶಿವನಾಥ್ ಇಲ್ಲಿ ಅಚ್ಚರಿ ಅಭ್ಯರ್ಥಿ. ಅವರ ಸಹೋದರ ಕೆ.ಶ್ರೀನಿವಾಸ್ ಟಿಡಿಪಿ ತೊರೆದಿದ್ದರಿಂದ ಟಿಡಿಪಿ ಶಿವನಾಥ್ ಅವರನ್ನೇ ಅವರ ಎದುರು ಕಣಕ್ಕಳಿಸಿದೆ. ಹೀಗಾಗಿ ಈ ಕ್ಷೇತ್ರ ಹೈ ವೋಲ್ಟೆಜ್ ಕ್ಷೇತ್ರವಾಗಿ ಮಾರ್ಪಟ್ಟಿದ್ದೆ. ಇಬ್ಬರ ಸಹೋದರರ ನಡುವೆಯೂ ತೀವ್ರ ಪೈಪೋಟಿ ಏರ್ಪಟ್ಟಿದೆ.
ಕೆ. ಶಿವನಾಥ್ ಕೂಡ ಉದ್ಯಮಿಯಾಗಿದ್ದು, ರಾಜಕಾರಣದಿಂದ ದೂರ ಉಳಿದ್ದರು. ಆದರೆ, ಬದಲಾದ ಸನ್ನಿವೇಶದಲ್ಲಿ ಅವರು ಅಣ್ಣನ ವಿರುದ್ಧವೇ ಕಣಕ್ಕಿಳಿದಿದ್ದಾರೆ.
ಜೂನ್ 4ರಂದು ಚುನಾವಣಾ ಫಲಿತಾಂಶ ಬರಲಿದೆ.