ಬಿಜೆಪಿ ಅಭ್ಯರ್ಥಿ ಘೋಷಣೆ: ಬಿಜೆಪಿಯು ಮಂಗಳವಾರ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಕೇಂದ್ರ ಸಚಿವ ರಾಜಕುಮಾರ್ ರಂಜನ್ ಸಿಂಗ್ (ಮಣಿಪುರ ಇನ್ನರ್ ಕ್ಷೇತ್ರ) ಸೇರಿದಂತೆ ಮೂರೂ ಕಡೆ ಹಾಲಿ ಸಂಸದರಿಗೆ ಕೊಕ್ ನೀಡಿದೆ. ರಂಜನ್ ಬದಲು ಬಸಂತ್ ಕುಮಾರ್ ಸಿಂಗ್ ಅವರಿಗೆ ಅವಕಾಶ ನೀಡಿದೆ. ರಾಜಸ್ಥಾನದ ಕರೌಲಿ–ಧೋಲಾಪುರ ಕ್ಷೇತ್ರದಿಂದ ಇಂದು ದೇವಿ ಜಾಟವ್ ಹಾಗೂ ದೌಸಾ ಕ್ಷೇತ್ರದಿಂದ ಕನ್ನಯ್ಯ ಲಾಲ್ ಮೀನಾ ಅವರನ್ನು ಕಣಕ್ಕಿಳಿಸಿದೆ.