‘ವಿಶ್ವಕಪ್ ಗೆದ್ದ ತಂಡದಲ್ಲಿ ಎಲ್ಲರೂ ಇದ್ದರು’
1983ರಲ್ಲಿ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ಕೀರ್ತಿ ಆಜಾದ್ ಕೋಮು ಸಾಮರಸ್ಯವೇ ಆಗ ತಂಡದ ಬೆನ್ನೆಲುಬಾಗಿತ್ತು ಎಂದು ಅಭಿಪ್ರಾಯಪಟ್ಟರು.
‘ನಾವು ಕಪ್ ಗೆದ್ದಾಗ ತಂಡದಲ್ಲಿ ಹಿಂದೂ ಆಟಗಾರರಿದ್ದರು ಮುಸ್ಲಿಂ ಆಗಿದ್ದ ಸೈಯದ್ ಕಿರ್ಮಾನಿ ಸಿಖ್ ಆಗಿದ್ದ ಬಲ್ವಿಂದರ್ ಸಂಧು ಮತ್ತು ಕ್ರಿಶ್ಚಿಯನ್ ಆಗಿದ್ದ ರೋಜರ್ ಬಿನ್ನಿ ಇದ್ದರು. ನಾವೆಲ್ಲ ಒಟ್ಟಿಗೇ ಹೋರಾಡಿದೆವು ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದೆವು. ಈ ಎಲ್ಲ ಸಮುದಾಯಗಳು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದವು. ಬಿಜೆಪಿ ನೋಡಿದರೆ ಹಿಂದೂಗಳು ಬೆದರಿಕೆ ಎದುರಿಸುತ್ತಿದ್ದಾರೆ ಎನ್ನುತ್ತಿದೆ’ ಎಂದು ಹೇಳಿದರು.