ತಿರುನಲ್ವೇಲಿ (ತಮಿಳುನಾಡು): ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೋಮವಾರ) ತಮಿಳುನಾಡಿನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಜಿಲ್ಲೆಯ ಅಂಬಾಸಮುದ್ರದಲ್ಲಿ ನಡೆಯಲಿರುವ ಸಭೆಯಲ್ಲಿ ಮೋದಿ ಅವರು ತಿರುನಲ್ವೇಲಿ , ಕನ್ಯಾಕುಮಾರಿ ಮತ್ತು ತೆಂಕಾಶಿ ಕ್ಷೇತ್ರದ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ.
ಕನ್ಯಾಕುಮಾರಿಯಿಂದ ಪೊನ್ ರಾಧಾಕೃಷ್ಣನ್, ತಿರುನಲ್ವೇಲಿಯಿಂದ ನೈನಾರ್ ನಾಗೇಂದ್ರನ್, ಮಿತ್ರಪಕ್ಷ ತಮಿಳಗ ಮಕ್ಕಳ್ ಮುನ್ನೇತ್ರ ಕಳಗಂನ ಜಾನ್ ಪಾಂಡಿಯನ್ ಅವರು ಬಿಜೆಪಿ ಚಿಹ್ನೆಯಿಂದ ತೆಂಕಾಶಿ (ಎಸ್ಸಿ)ಯಿಂದ ಸ್ಪರ್ಧಿಸಿದ್ದಾರೆ.
ತಮಿಳುನಾಡಿನ 39 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಚುನಾವಣೆ ನಡೆಯಲಿದೆ.