ಮೋದಿ ಅವರು ಮೂರನೇ ಸಲ ಪ್ರಧಾನಿಯಾದರೆ, ತಮ್ಮ ಕೈಗೆ ಚೊಂಬೇ ಗತಿ ಎಂಬ ಭಯ ಕಾಂಗ್ರೆಸ್ನವರಿಗೆ ಕಾಡುತ್ತಿದೆ. ಅವರಿಗೆ ರಾತ್ರಿ ಗಾಢ ನಿದ್ರೆಯಲ್ಲೂ ಚೊಂಬಿನ ಕನಸು ಬೀಳುತ್ತಿದೆ. ಅದಕ್ಕೆ ಚೊಂಬು ಹಿಡಿದೇ ಪತ್ರಿಕಾಗೋಷ್ಠಿ ಮಾಡುತ್ತಾರೆ. ಚುನಾವಣೆ ಬಳಿಕ ಕಾಂಗ್ರೆಸ್ನವರು ಚೊಂಬು ಹಿಡಿದು ಹೊರಗೆ ಹೋಗಲಾಗದು. ಮೋದಿ ಅವರು ಎಲ್ಲಾ ಕಡೆ ಶೌಚಾಲಯ ಕಟ್ಟಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಶಾಸಕ
ಹಲವು ಬಾರಿ ಮಂತ್ರಿಯಾಗಿದ್ದ ಜಗದೀಶ ಶೆಟ್ಟರ್. ಮುಖ್ಯಮಂತ್ರಿಯೂ ಆಗಿದ್ದರು. ಇಷ್ಟು ದೊಡ್ಡ ಅನುಭವಿ ರಾಜಕಾರಣಿ ‘ಮೋದಿ ನೋಡಿ ಮತ ನೀಡಿ’ ಎಂದು ಕೇಳುತ್ತಿದ್ದಾರೆ. ಇದು ಜನರಿಗೆ ಮಾಡುತ್ತಿರುವ ದ್ರೋಹ. 20 ವರ್ಷಗಳ ಅಧಿಕಾರದಲ್ಲಿ ಹೇಳಿಕೊಳ್ಳುವಂಥದ್ದು ಏನೂ ಮಾಡಿಲ್ಲವೇ? ನಿಮ್ಮ ಸಾಧನೆ ಹೇಳಿ ಮತ ಕೇಳಿ ನೋಡೋಣ.
ಮೃಣಾಲ್ ಹೆಬ್ಬಾಳಕರ, ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ