ಅಭ್ಯರ್ಥಿ ನಿರ್ಮಲಾ ಮಾತನಾಡಿ, ‘ನಮ್ಮನ್ನು ಬಂಡವಾಳಶಾಹಿ ಪಕ್ಷಗಳೇ ಆಳುತ್ತಿವೆ. ದೇಶದಲ್ಲಿ ಶಿಕ್ಷಣದ ವ್ಯಾಪಾರೀಕರಣವಾಗಿದೆ, ನಿರುದ್ಯೋಗ ಸಮಸ್ಯೆ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣ, ರೈತರ ಆತ್ಮಹತ್ಯೆ ಹೆಚ್ಚುತ್ತಾ ಹೋಗಿದೆ. ಜನ ವಿರೋಧಿ, ಬಂಡವಾಳಶಾಹಿಗಳನ್ನು ಸೋಲಿಸಬೇಕು. ಜನಪರ ಹೋರಾಟದ ಅಭ್ಯರ್ಥಿಯನ್ನು ಆರಿಸಬೇಕು’ ಎಂದು ಮನವಿ ಮಾಡಿದರು.