ಜಯನಗರದಲ್ಲಿ ಶಾಸಕ ಸಿ.ಕೆ. ರಾಮಮೂರ್ತಿ ಅವರು ಬೆಂಬಲಿಗರೊಂದಿಗೆ ಬೈಕ್ ರ್ಯಾಲಿ ನಡೆಸಿದರು. ‘ದೇಶಕ್ಕೆ ಮೋದಿ ದಕ್ಷಿಣಕ್ಕೆ ಸೂರ್ಯ’ ಎಂಬ ಘೋಷಣೆಯೊಂದಿಗೆ ಶಾಕಾಂಬರಿ ನಗರ ವಾರ್ಡ್, ಜಯನಗರ 8ನೇ ಬಡಾವಣೆ, ಸಿಆರ್ ಲೇಔಟ್, ವೈಶ್ಯ ಬ್ಯಾಂಕ್ ಕಾಲೊನಿ, ಗುರುಮೂರ್ತಪ್ಪ ಗಾರ್ಡನ್ ಸುತ್ತಮುತ್ತ ರಾಜ್ಯ ಒಬಿಸಿ ಪ್ರಧಾನ ಕಾರ್ಯದರ್ಶಿ ಬಿ. ಸೋಮಶೇಖರ್ ಅವರ ನೇತೃತ್ವದಲ್ಲಿ ಪಾದಯಾತ್ರೆ ಮುಖಾಂತರ ಮನೆ ಮನೆಗೆ ತೆರಳಿ ಮತಯಾಚಿಸಿದರು.