ಕೆ.ಆರ್.ಪುರ: 85 ವರ್ಷ ಮೀರಿದವರಿಗೆ ಮನೆಯಲ್ಲೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದ್ದು, ಶತಾಯುಷಿ ಕಮಲಮ್ಮ ನಾರಾಯಣಸ್ವಾಮಿ ಅವರು ಮನೆಯಲ್ಲಿ ಶನಿವಾರ ಮತದಾನ ಮಾಡಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಂಡೂರು ನಿವಾಸಿ ಕಮಲಮ್ಮ ಅವರಿಗೆ 103 ವಯಸ್ಸಾಗಿದೆ.
‘ಶತಾಯುಷಿ ನಮ್ಮ ಕುಟುಂಬದಲ್ಲಿ, ಮಂಡೂರಿನಲ್ಲಿರುವುದು ಗ್ರಾಮದ ಹೆಮ್ಮೆ. ಪ್ರತಿಯೊಬ್ಬ ಮತದಾರರು ಇವರನ್ನು ಪ್ರೇರಣೆಯಾಗಿಟ್ಟುಕೊಂಡು, ಕಡ್ಡಾಯವಾಗಿ ಮತದಾನ ಮಾಡಬೇಕು’ ಎಂದು ಕಮಲಮ್ಮ ಪುತ್ರ ಶ್ರೀನಿವಾಸ್ ಗೌಡ ಮನವಿ ಮಾಡಿದರು.