ಶಿಕಾರಿಪುರ: ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರ ರಾಷ್ಟ್ರಭಕ್ತರ ಬಳಗದ ಕಚೇರಿ ಮುಂಭಾಗ ವಾಮಾಚಾರ ನಡೆದಿರುವುದು ಗುರುವಾರ ಕಂಡು ಬಂದಿದೆ.
‘ಕಚೇರಿಯ ಬಾಗಿಲಿನ ಮುಂದೆ ನಿಂಬೆಹಣ್ಣು, ಅರಿಸಿನ, ಕುಂಕುಮ ಸೇರಿ ಹಲವು ವಸ್ತು ಪತ್ತೆಯಾಗಿವೆ. ಬುಧವಾರ ರಾತ್ರಿ ವಾಮಾಚಾರ ಮಾಡಿಸಲಾಗಿದೆ. ರಾಜಕೀಯ ವಿರೋಧಿಗಳು ಈ ಕೃತ್ಯ ಮಾಡಿದ್ದಾರೆ’ ಎಂದು ರಾಷ್ಟ್ರ ಭಕ್ತ ಬಳಗದ ಸದಸ್ಯ ಮುರುಗೇಶ್ ಆರೋಪಿಸಿದರು.