‘ಬೆಂಗಳೂರಿಗೆ ದಿನಕ್ಕೆ 35 ಹೆಲಿಕಾಪ್ಟರ್ಗಳು ವಿವಿಧೆಡೆಯಿಂದ ಬರುತ್ತಿವೆ. ಇವುಗಳ ಬಾಡಿಗೆ ಹಣವನ್ನೂ ಅಭ್ಯರ್ಥಿಗಳ ಲೆಕ್ಕದಲ್ಲಿ ತೋರಿಸಿ, ಅನರ್ಹ ಮಾಡಬೇಕು. ಚುನಾವಣೆಯನ್ನು ಶುದ್ಧಗೊಳಿಸುವ ಕೆಲಸ ತುರ್ತಾಗಿ ನಡೆಯಬೇಕು. ಅಭ್ಯರ್ಥಿಗಳು ಜೆಸಿಬಿಯ ಮೂಲಕ ಹಾರ ಹಾಕಿಸಿಕೊಳ್ಳುತ್ತಿದ್ದಾರೆ. ಇದು ನಮ್ಮ ಸಂಸ್ಕೃತಿಯೇ? ಹೆಣಗಳಿಗೂ ಆ ರೀತಿ ಹಾರವನ್ನು ಹಾಕುವುದಿಲ್ಲ. ಆಯೋಗಕ್ಕೆ ಚುನಾವಣೆ ವ್ಯವಸ್ಥೆ ಸುಧಾರಿಸಲು ಸಾಧ್ಯವಾಗದಿದ್ದರೆ ಕ್ಷೇತ್ರಗಳನ್ನು ಟೆಂಡರ್ ಕರೆದು, ಅಭ್ಯರ್ಥಿಗಳಿಗೆ ಹಂಚಲಿ. ಈ ರೀತಿಯ ವ್ಯವಸ್ಥೆಯಲ್ಲಿ ಸಾಮಾನ್ಯರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.