ತಾವು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ‘ಬಯಲಾಟದ ಭೀಮಣ್ಣ’ ಎಂಬ ಸಿನಿಮಾವನ್ನು ಸಮುದಾ ಯದ ನಡುವೆಯೇ ಬಿಡುಗಡೆ ಮಾಡಿಸಿ, ಜನರ ಬಳಿಗೇ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ‘ಸಮುದಾಯದತ್ತ ಸಿನಿಮಾ’ ಎಂಬ ಪರಿಕಲ್ಪನೆ ರೂಪಿಸಿ, ‘ಚಿತ್ರಯಾತ್ರೆ’ಯ ಮೂಲಕ ರಾಜ್ಯದಾದ್ಯಂತ ಪ್ರೇಕ್ಷಕರ ಬಳಿಗೆ ಸಿನಿಮಾ ಕೊಂಡೊಯ್ಯುತ್ತಿದ್ದಾರೆ. ಇದಕ್ಕೆ ‘ಪರ್ಯಾಯ ಬಿಡುಗಡೆ’ ಪ್ರಯೋಗ ಎಂದು ಹೆಸರಿಸಿದ್ದಾರೆ.