<p>‘ಬಾಹುಬಲಿ’ ಚಿತ್ರದ ಶಿವಗಾಮಿ ಪಾತ್ರದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಬಹುಭಾಷಾ ನಟಿ ರಮ್ಯಾಕೃಷ್ಣ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದೂ ಮದ್ಯದ ಬಾಟಲಿಗಳ ಕಾರಣದಿಂದ ಎನ್ನುವುದು ವಿಶೇಷ!</p>.<p>ರಮ್ಯಾಕೃಷ್ಣ ಅವರ ಐಷಾರಾಮಿ ಕಾರಿನಲ್ಲಿ 104 ಮದ್ಯದ ಬಾಟಲಿಗಳು ಪತ್ತೆಯಾಗಿವೆ.ಈ ಘಟನೆ ಕಳೆದ ಗುರುವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಪೊಲೀಸರು ಕಾರಿನಲ್ಲಿದ್ದ ಬಾಟಲಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.ಕಾರು ಚಾಲಕ ಸೆಲ್ವಕುಮಾರ್ನನ್ನು ಪೊಲೀಸರು ವಶಕ್ಕೆ ಪಡೆದು, ನಂತರ ವೈಯಕ್ತಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಈ ವೇಳೆ ರಮ್ಯಾಕೃಷ್ಣ ಕಾರಿನಲ್ಲೇ ಇದ್ದರು ಎನ್ನಲಾಗಿದೆ.</p>.<p>ಅಂದು ನಡೆಡದ್ದು ಏನು?</p>.<p>ತಮಿಳುನಾಡಿನ ಮಹಾಬಲಿಪುರಂ ಕಡೆಯಿಂದ ಬರುತ್ತಿದ್ದ ವಾಹನಗಳನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದರು.ಆ ವೇಳೆ ಪೂರ್ವ ಕರಾವಳಿಯ ಮುತ್ತುಕಾಡು ಚೆಕ್ಪೋಸ್ಟ್ ಬಳಿ ರಮ್ಯಾಕೃಷ್ಣ ಅವರ ಟೊಯೊಟಾ ಇನ್ನೋವಾ ಕಾರನ್ನು ಪೊಲೀಸರು ತಡೆದು ನಿಲ್ಲಿಸಿ ಪರಿಶೀಲಿಸಿದರು.</p>.<p>ಪೊಲೀಸರು ಗಾಡಿಯನ್ನು ಪರಿಶೀಲನೆ ಮಾಡಬೇಕು ಎಂದಾಗ ರಮ್ಯಾಕೃಷ್ಣ ಮರುಮಾತನಾಡದೆ ಒಪ್ಪಿದ್ದರು. ಕಾರಿನ ಡಿಕ್ಕಿ ತೆರೆದಾಗ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಅಲ್ಲಿ ಬಿಯರ್ ಬಾಟಲ್ಗಳ ಕ್ರೇಟ್ ಅಲ್ಲಿತ್ತು. ಅವುಗಳ ಜತೆಗೆ ಹಾಟ್ಡ್ರಿಂಕ್ಸ್ ಬಾಟಲ್ ಕೂಡ ಇದ್ದವು.</p>.<p>ಚೆನ್ನೈನಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲದ ಕಾರಣ ಸಿಟಿಯಲ್ಲಿ ಮದ್ಯ ಮಾರಾಟ ಹಾಗೂ ಸಾಗಣೆ ಕಾನೂನು ಬಾಹಿರ. ಲಾಕ್ಡೌನ್ ನಿರ್ಬಂಧಕ್ಕೆ ವಿರುದ್ಧವಾಗಿ ಮದ್ಯ ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ವಿವಾದಕ್ಕೆ ಸಂಬಂಧಿಸಿದಂತೆ ರಮ್ಯಾಕೃಷ್ಣ ಅಧಿಕೃತವಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಬಾಹುಬಲಿ’ ಚಿತ್ರದ ಶಿವಗಾಮಿ ಪಾತ್ರದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಬಹುಭಾಷಾ ನಟಿ ರಮ್ಯಾಕೃಷ್ಣ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದೂ ಮದ್ಯದ ಬಾಟಲಿಗಳ ಕಾರಣದಿಂದ ಎನ್ನುವುದು ವಿಶೇಷ!</p>.<p>ರಮ್ಯಾಕೃಷ್ಣ ಅವರ ಐಷಾರಾಮಿ ಕಾರಿನಲ್ಲಿ 104 ಮದ್ಯದ ಬಾಟಲಿಗಳು ಪತ್ತೆಯಾಗಿವೆ.ಈ ಘಟನೆ ಕಳೆದ ಗುರುವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಪೊಲೀಸರು ಕಾರಿನಲ್ಲಿದ್ದ ಬಾಟಲಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.ಕಾರು ಚಾಲಕ ಸೆಲ್ವಕುಮಾರ್ನನ್ನು ಪೊಲೀಸರು ವಶಕ್ಕೆ ಪಡೆದು, ನಂತರ ವೈಯಕ್ತಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಈ ವೇಳೆ ರಮ್ಯಾಕೃಷ್ಣ ಕಾರಿನಲ್ಲೇ ಇದ್ದರು ಎನ್ನಲಾಗಿದೆ.</p>.<p>ಅಂದು ನಡೆಡದ್ದು ಏನು?</p>.<p>ತಮಿಳುನಾಡಿನ ಮಹಾಬಲಿಪುರಂ ಕಡೆಯಿಂದ ಬರುತ್ತಿದ್ದ ವಾಹನಗಳನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದರು.ಆ ವೇಳೆ ಪೂರ್ವ ಕರಾವಳಿಯ ಮುತ್ತುಕಾಡು ಚೆಕ್ಪೋಸ್ಟ್ ಬಳಿ ರಮ್ಯಾಕೃಷ್ಣ ಅವರ ಟೊಯೊಟಾ ಇನ್ನೋವಾ ಕಾರನ್ನು ಪೊಲೀಸರು ತಡೆದು ನಿಲ್ಲಿಸಿ ಪರಿಶೀಲಿಸಿದರು.</p>.<p>ಪೊಲೀಸರು ಗಾಡಿಯನ್ನು ಪರಿಶೀಲನೆ ಮಾಡಬೇಕು ಎಂದಾಗ ರಮ್ಯಾಕೃಷ್ಣ ಮರುಮಾತನಾಡದೆ ಒಪ್ಪಿದ್ದರು. ಕಾರಿನ ಡಿಕ್ಕಿ ತೆರೆದಾಗ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಅಲ್ಲಿ ಬಿಯರ್ ಬಾಟಲ್ಗಳ ಕ್ರೇಟ್ ಅಲ್ಲಿತ್ತು. ಅವುಗಳ ಜತೆಗೆ ಹಾಟ್ಡ್ರಿಂಕ್ಸ್ ಬಾಟಲ್ ಕೂಡ ಇದ್ದವು.</p>.<p>ಚೆನ್ನೈನಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲದ ಕಾರಣ ಸಿಟಿಯಲ್ಲಿ ಮದ್ಯ ಮಾರಾಟ ಹಾಗೂ ಸಾಗಣೆ ಕಾನೂನು ಬಾಹಿರ. ಲಾಕ್ಡೌನ್ ನಿರ್ಬಂಧಕ್ಕೆ ವಿರುದ್ಧವಾಗಿ ಮದ್ಯ ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈ ವಿವಾದಕ್ಕೆ ಸಂಬಂಧಿಸಿದಂತೆ ರಮ್ಯಾಕೃಷ್ಣ ಅಧಿಕೃತವಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>