<p id="thickbox_headline"><strong>ಮುಂಬೈ: </strong>ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ಸರ್ಕಾರಕ್ಕೆ ಕೈಜೋಡಿಸಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್,ಪ್ರಧಾನಿ ನರೇಂದ್ರ ಮೋದಿ ಅವರ ‘ಪಿಎಂ–ಕೇರ್ಸ್’ ನಿಧಿಗೆ ₹25 ಕೋಟಿ ನೀಡುವುದಾಗಿ ಶನಿವಾರ ಘೋಷಿಸಿದ್ದಾರೆ.</p>.<p>ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿಪ್ರಧಾನ ಮಂತ್ರಿ –ಸಿಟಿಜನ್ ಅಸಿಸ್ಟೆನ್ಸ್ ಆ್ಯಂಡ್ ರಿಲೀಫ್ ಇನ್ ಎಮರ್ಜೆನ್ಸಿ ಸಿಚ್ಯುಯೇಷನ್ ಫಂಡ್ (ಕೇರ್ಸ್) ರಚಿಸಿರುವ ಕುರಿತು ಮೋದಿ ಶನಿವಾರ ತಿಳಿಸಿದ್ದರು. ಈ ನಿಧಿಗೆ ದೇಣಿಗೆ ನೀಡುವ ಮುಖಾಂತರ ಜನರೂ ಈ ಹೋರಾಟಕ್ಕೆ ಕೈಜೋಡಿಸಬಹುದು ಎಂದು ಅವರು ತಿಳಿಸಿದ್ದರು.</p>.<p>‘ಪ್ರಸ್ತುತ ನಮ್ಮ ಜನರ ಜೀವನವೇ ಮುಖ್ಯವಾಗಿದೆ. ಪಿಎಂ–ಕೇರ್ಸ್ ನಿಧಿಗೆ ₹25 ಕೋಟಿ ನೀಡುವ ಪ್ರಮಾಣ ಮಾಡುತ್ತಿದ್ದೇನೆ. ಜೀವ ಉಳಿಸೋಣ, ಜೀವವಿದ್ದರೆ ಜಗತ್ತು ಇರಲಿದೆ’ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.</p>.<p>ಇದೇ ರೀತಿ ದಿನಗೂಲಿ ನೌಕರರಿಗಾಗಿ ₹50 ಲಕ್ಷ ದೇಣಿಗೆಯನ್ನು ನಟ ರಜನೀಕಾಂತ್ ಇತ್ತೀಚೆಗೆ ಘೋಷಿಸಿದ್ದರು. ಜೊತೆಗೆ ನಟರಾದ ಹೃತಿಕ್ ರೋಶನ್, ಕಪಿಲ್ ಶರ್ಮಾ, ಪ್ರಭಾಸ್, ಮಹೇಶ್ ಬಾಬು, ಪವಲ್ ಕಲ್ಯಾಣ್, ರಾಮ್ ಚರಣ್ ಸೇರಿದಂತೆ ಹಲವು ನಟರೂ ದೇಣಿಗೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p id="thickbox_headline"><strong>ಮುಂಬೈ: </strong>ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ಸರ್ಕಾರಕ್ಕೆ ಕೈಜೋಡಿಸಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್,ಪ್ರಧಾನಿ ನರೇಂದ್ರ ಮೋದಿ ಅವರ ‘ಪಿಎಂ–ಕೇರ್ಸ್’ ನಿಧಿಗೆ ₹25 ಕೋಟಿ ನೀಡುವುದಾಗಿ ಶನಿವಾರ ಘೋಷಿಸಿದ್ದಾರೆ.</p>.<p>ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿಪ್ರಧಾನ ಮಂತ್ರಿ –ಸಿಟಿಜನ್ ಅಸಿಸ್ಟೆನ್ಸ್ ಆ್ಯಂಡ್ ರಿಲೀಫ್ ಇನ್ ಎಮರ್ಜೆನ್ಸಿ ಸಿಚ್ಯುಯೇಷನ್ ಫಂಡ್ (ಕೇರ್ಸ್) ರಚಿಸಿರುವ ಕುರಿತು ಮೋದಿ ಶನಿವಾರ ತಿಳಿಸಿದ್ದರು. ಈ ನಿಧಿಗೆ ದೇಣಿಗೆ ನೀಡುವ ಮುಖಾಂತರ ಜನರೂ ಈ ಹೋರಾಟಕ್ಕೆ ಕೈಜೋಡಿಸಬಹುದು ಎಂದು ಅವರು ತಿಳಿಸಿದ್ದರು.</p>.<p>‘ಪ್ರಸ್ತುತ ನಮ್ಮ ಜನರ ಜೀವನವೇ ಮುಖ್ಯವಾಗಿದೆ. ಪಿಎಂ–ಕೇರ್ಸ್ ನಿಧಿಗೆ ₹25 ಕೋಟಿ ನೀಡುವ ಪ್ರಮಾಣ ಮಾಡುತ್ತಿದ್ದೇನೆ. ಜೀವ ಉಳಿಸೋಣ, ಜೀವವಿದ್ದರೆ ಜಗತ್ತು ಇರಲಿದೆ’ ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.</p>.<p>ಇದೇ ರೀತಿ ದಿನಗೂಲಿ ನೌಕರರಿಗಾಗಿ ₹50 ಲಕ್ಷ ದೇಣಿಗೆಯನ್ನು ನಟ ರಜನೀಕಾಂತ್ ಇತ್ತೀಚೆಗೆ ಘೋಷಿಸಿದ್ದರು. ಜೊತೆಗೆ ನಟರಾದ ಹೃತಿಕ್ ರೋಶನ್, ಕಪಿಲ್ ಶರ್ಮಾ, ಪ್ರಭಾಸ್, ಮಹೇಶ್ ಬಾಬು, ಪವಲ್ ಕಲ್ಯಾಣ್, ರಾಮ್ ಚರಣ್ ಸೇರಿದಂತೆ ಹಲವು ನಟರೂ ದೇಣಿಗೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>