<p>ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ‘ಪುಷ್ಪಾ’. ಈ ಸಿನಿಮಾದ ಶೂಟಿಂಗ್ ಕೊರೊನಾ ಕಾರಣದಿಂದ ನಿಂತಿತ್ತು. ಈಗ ಶೂಟಿಂಗ್ ಪುನಾರಾಂಭಿಸಲು ಬನ್ನಿ ರೆಡಿಯಾಗಿದ್ದಾರೆ. ಆದರೆ ಕಾಡಿನ ಹಿನ್ನೆಲೆಯಲ್ಲಿ ಶೂಟಿಂಗ್ ಮಾಡಬೇಕಾಗಿದ್ದು ಹಾಗೂ ಕೋವಿಡ್ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಕಾರಣದಿಂದ ಸಿನಿಮಾ ತಂಡಕ್ಕೆ ಶೂಟಿಂಗ್ ಮುಂದುವರಿಸುವುದು ಕಷ್ಟಸಾಧ್ಯವಾಗಿದೆ.</p>.<p>ಮೊದಲು ಕೇರಳದ ಕಾಡಿನಲ್ಲಿ ಶೂಟಿಂಗ್ ಮಾಡುವುದು ಎಂಬ ಯೋಜನೆ ಹಾಕಿಕೊಂಡಿತ್ತು ಚಿತ್ರತಂಡ. ಆದರೆ ಕೊರೊನಾ ಕಾರಣದಿಂದ ಆಂಧ್ರಪ್ರದೇಶ ಮಾರೇಡುಮಿಲ್ಲಿಗೆ ಚಿತ್ರೀಕರಣದ ಸ್ಥಳವನ್ನು ಸ್ಥಳಾಂತರಿಸಲಾಗಿತ್ತು. ಆದರರೂ ಸಿನಿಮಾ ನಿರ್ಮಾಪಕರು ಇನ್ನೂ ಈ ವಿಷಯದಲ್ಲಿ ಗೊಂದಲದಲ್ಲಿದ್ದಾರೆ. ಸದ್ಯ ಕೇರಳದಲ್ಲಿ ಕೊರೊನಾ ನಿಯಂತ್ರಣದಲ್ಲಿರುವ ಕಾರಣದಿಂದ ಶೂಟಿಂಗ್ ಅಲ್ಲೇ ಮುಂದುವರಿಸುವುದಾ ಅಥವಾ ಮಾರೇಡುಮಿಲ್ಲಿನಲ್ಲಿ ನಡೆಸುವುದಾ? ಎಂಬ ಗೊಂದಲ ಚಿತ್ರತಂಡದ್ದು.</p>.<p>ಅದೇನೇ ಇದ್ದರೂ ನಿರ್ದೇಶಕ ಸುಕುಮಾರ್ ಈ ಸಮಯದಲ್ಲಿ ಶೂಟಿಂಗ್ ಪುನರಾರಂಭಗೊಳಿಸುವ ಬಗ್ಗೆ ಒಲವು ತೋರುತ್ತಿಲ್ಲ. ಅಲ್ಲದೇ ಸಿನಿಮಾಟೊಗ್ರಾಫರ್ ಮೈರೋಲಾ ಬ್ರೋಝೆಕ್ ಲಾಕ್ಡೌನ್ಗೂ ಮೊದಲು ಪೋಲೆಂಡ್ಗೆ ತೆರಳಿದ್ದರು. ಅವರು ಭಾರತಕ್ಕೆ ಬರಬೇಕಾಗಿದೆ. ಶೂಟಿಂಗ್ ಜಾಗವನ್ನು ಅಂತಿಮಗೊಳಿಸುವ ಮೊದಲು ಸಿನಿಮಾಟೊಗ್ರಾಫರ್ ಹಾಗೂ ನಿರ್ದೇಶಕರು ಆ ಜಾಗವನ್ನು ನೋಡಿ ಒಪ್ಪಿಗೆ ಸೂಚಿಸಬೇಕಿದೆ.</p>.<p>ಎಲ್ಲಾ ಪ್ರಕ್ರಿಯೆಗಳು ನಡೆಯಲು ತುಂಬಾ ದಿನಗಳು ಬೇಕು. ಆ ಕಾರಣಕ್ಕೆ ಪುಷ್ಪಾ ಶೂಟಿಂಗ್ ಆರಂಭವಾಗಲು ಇನ್ನೂ ಕೆಲವು ವಾರ ಅಥವಾ ತಿಂಗಳುಗಳು ಮುಂದೆ ಹೋಗಬಹುದು. ಈ ನಡುವೆ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸಿನಿಮಾದ ಎಲ್ಲಾ ಹಾಡುಗಳ ಕಂಪೋಸಿಂಗ್ ಕೆಲಸವನ್ನು ಮುಗಿಸಿದ್ದಾರೆ ಎಂಬ ಸುದ್ದಿಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ‘ಪುಷ್ಪಾ’. ಈ ಸಿನಿಮಾದ ಶೂಟಿಂಗ್ ಕೊರೊನಾ ಕಾರಣದಿಂದ ನಿಂತಿತ್ತು. ಈಗ ಶೂಟಿಂಗ್ ಪುನಾರಾಂಭಿಸಲು ಬನ್ನಿ ರೆಡಿಯಾಗಿದ್ದಾರೆ. ಆದರೆ ಕಾಡಿನ ಹಿನ್ನೆಲೆಯಲ್ಲಿ ಶೂಟಿಂಗ್ ಮಾಡಬೇಕಾಗಿದ್ದು ಹಾಗೂ ಕೋವಿಡ್ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಕಾರಣದಿಂದ ಸಿನಿಮಾ ತಂಡಕ್ಕೆ ಶೂಟಿಂಗ್ ಮುಂದುವರಿಸುವುದು ಕಷ್ಟಸಾಧ್ಯವಾಗಿದೆ.</p>.<p>ಮೊದಲು ಕೇರಳದ ಕಾಡಿನಲ್ಲಿ ಶೂಟಿಂಗ್ ಮಾಡುವುದು ಎಂಬ ಯೋಜನೆ ಹಾಕಿಕೊಂಡಿತ್ತು ಚಿತ್ರತಂಡ. ಆದರೆ ಕೊರೊನಾ ಕಾರಣದಿಂದ ಆಂಧ್ರಪ್ರದೇಶ ಮಾರೇಡುಮಿಲ್ಲಿಗೆ ಚಿತ್ರೀಕರಣದ ಸ್ಥಳವನ್ನು ಸ್ಥಳಾಂತರಿಸಲಾಗಿತ್ತು. ಆದರರೂ ಸಿನಿಮಾ ನಿರ್ಮಾಪಕರು ಇನ್ನೂ ಈ ವಿಷಯದಲ್ಲಿ ಗೊಂದಲದಲ್ಲಿದ್ದಾರೆ. ಸದ್ಯ ಕೇರಳದಲ್ಲಿ ಕೊರೊನಾ ನಿಯಂತ್ರಣದಲ್ಲಿರುವ ಕಾರಣದಿಂದ ಶೂಟಿಂಗ್ ಅಲ್ಲೇ ಮುಂದುವರಿಸುವುದಾ ಅಥವಾ ಮಾರೇಡುಮಿಲ್ಲಿನಲ್ಲಿ ನಡೆಸುವುದಾ? ಎಂಬ ಗೊಂದಲ ಚಿತ್ರತಂಡದ್ದು.</p>.<p>ಅದೇನೇ ಇದ್ದರೂ ನಿರ್ದೇಶಕ ಸುಕುಮಾರ್ ಈ ಸಮಯದಲ್ಲಿ ಶೂಟಿಂಗ್ ಪುನರಾರಂಭಗೊಳಿಸುವ ಬಗ್ಗೆ ಒಲವು ತೋರುತ್ತಿಲ್ಲ. ಅಲ್ಲದೇ ಸಿನಿಮಾಟೊಗ್ರಾಫರ್ ಮೈರೋಲಾ ಬ್ರೋಝೆಕ್ ಲಾಕ್ಡೌನ್ಗೂ ಮೊದಲು ಪೋಲೆಂಡ್ಗೆ ತೆರಳಿದ್ದರು. ಅವರು ಭಾರತಕ್ಕೆ ಬರಬೇಕಾಗಿದೆ. ಶೂಟಿಂಗ್ ಜಾಗವನ್ನು ಅಂತಿಮಗೊಳಿಸುವ ಮೊದಲು ಸಿನಿಮಾಟೊಗ್ರಾಫರ್ ಹಾಗೂ ನಿರ್ದೇಶಕರು ಆ ಜಾಗವನ್ನು ನೋಡಿ ಒಪ್ಪಿಗೆ ಸೂಚಿಸಬೇಕಿದೆ.</p>.<p>ಎಲ್ಲಾ ಪ್ರಕ್ರಿಯೆಗಳು ನಡೆಯಲು ತುಂಬಾ ದಿನಗಳು ಬೇಕು. ಆ ಕಾರಣಕ್ಕೆ ಪುಷ್ಪಾ ಶೂಟಿಂಗ್ ಆರಂಭವಾಗಲು ಇನ್ನೂ ಕೆಲವು ವಾರ ಅಥವಾ ತಿಂಗಳುಗಳು ಮುಂದೆ ಹೋಗಬಹುದು. ಈ ನಡುವೆ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸಿನಿಮಾದ ಎಲ್ಲಾ ಹಾಡುಗಳ ಕಂಪೋಸಿಂಗ್ ಕೆಲಸವನ್ನು ಮುಗಿಸಿದ್ದಾರೆ ಎಂಬ ಸುದ್ದಿಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>