ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲುಮರದ ತಿಮ್ಮಕ್ಕ, ತುಳಸಿ ಗೌಡರನ್ನು ಭೇಟಿಯಾಗಿದ್ದು ನನ್ನ ಪುಣ್ಯ –ನಟಿ ಆಶಾ ಭಟ್‌

Last Updated 8 ಜನವರಿ 2022, 11:46 IST
ಅಕ್ಷರ ಗಾತ್ರ

ಚಂದನವನದ ’ರಾಬರ್ಟ್‌’ ಬೆಡಗಿ ಆಶಾ ಭಟ್‌ ಅವರು ಪರಿಸರ ದಂತಕತೆ ಖ್ಯಾತಿಯ ಸಾಲುಮರದ ತಿಮ್ಮಕ್ಕ ಹಾಗೂ ತುಳಸಿ ಗೌಡ ಅವರನ್ನು ಭೇಟಿಯಾಗಿರುವಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ನಟ ದರ್ಶನ್‌ ಅಭಿನಯದ ’ರಾಬರ್ಟ್‌’ ಸಿನಿಮಾದ ಮೂಲಕ ಆಶಾ ಭಟ್‌ ಚಂದನವನಕ್ಕೆ ಕಾಲಿಟ್ಟರು. ಈ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು.

ಆಶಾ ಭಟ್‌ ಇತ್ತೀಚೆಗೆ ಸಾಲುಮರದ ತಿಮ್ಮಕ್ಕ ಹಾಗೂ ತುಳಸಿ ಗೌಡ ಅವರನ್ನು ಭೇಟಿ ಮಾಡಿದ್ದರು. ಅವರ ಜೊತೆ ಪರಿಸರದ ಬಗ್ಗೆ ಮಾತುಕತೆ ನಡೆಸಿ ಅವರೊಟ್ಟಿಗೆ ಕೆಲ ಹೊತ್ತು ಕಾಲ ಕಳೆದಿದ್ದರು.

ಇವರ ಮಾದರಿ ಜೀವನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಆಶಾ ಭಟ್‌ ಅವರ ನಡುವೆ ನಾನಿರುವುದು ಪುಣ್ಯ ಎಂದು ಹೇಳಿದ್ದಾರೆ.

ಭದ್ರಾವತಿ ಮೂಲದವರಾದ ಆಶಾ ಭಟ್ ರೂಪದರ್ಶಿ ಕೂಡ ಆಗಿದ್ದಾರೆ. ಜಂಗ್ಲಿ ಚಿತ್ರದ ಮೂಲಕ ಅವರು ಬಾಲಿವುಡ್‌ ಪ್ರವೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT