‘ಕಡ್ಡಿಪುಡಿ’ ಚಿತ್ರದ ಮೂಲಕ ಕನ್ನಡ ವೀಕ್ಷಕರ ಮನಸ್ಸಿನಲ್ಲಿ ಪುಟ್ಟದೊಂದು ಜಾಗ ಪಡೆದುಕೊಂಡ ನಟ ಬಾಲು ನಾಗೇಂದ್ರ. ಆ ಚಿತ್ರದ ‘ರೆಕ್ಕೆ ವೆಂಕ್ಟೇಶ’ನ ಪಾತ್ರ ಸಣ್ಣದಾಗಿದ್ದರೂ, ಅಷ್ಟು ಸುಲಭಕ್ಕೆ ಮರೆಯುವಂಥದ್ದಲ್ಲ. ಅದಾದ ನಂತರ, ‘ಹುಲಿರಾಯ’ ಸಿನಿಮಾದ ಸುರೇಶ ಅಲಿಯಾಸ್ ‘ಸುರೇಸ’ನ ಪಾತ್ರ ನಿಭಾಯಿಸಿದ ನಾಗೇಂದ್ರ, ತಾವು ಸಂಪಾದಿಸಿದ್ದ ಜಾಗವನ್ನು ತುಸು ಹಿರಿದಾಗಿಸಿಕೊಂಡರು.