ಈ ಕುರಿತು ಪ್ರತಿಕ್ರಿಯಿಸಿದ ಗುರುಪ್ರಸಾದ್, ‘ಪುನೀತ್ ಎಂದರೆ ನಮಗೆ ತುಂಬಾ ಅಭಿಮಾನ. ನಾವು ಮದುವೆಯಾಗುತ್ತಿರುವುದು ನಮ್ಮ ಕುಟುಂಬದವರಿಗೂ ಗೊತ್ತಿದೆ. ಪುನೀತ್ ಬದುಕಿದಿದ್ದರೆ ಮದುವೆ ಬಳಿಕ ಅವರ ಮನೆಗೆ ತೆರಳಿ ಆಶೀರ್ವಾದ ಪಡೆದುಕೊಳ್ಳಬೇಕು ಎಂದುಕೊಂಡಿದ್ದೆವು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಅವರ ಸಮಾಧಿ ಎದುರು ಮದುವೆ ಆಗುತ್ತೇವೆ. ಪುನೀತ್ ಸಹೋದರರಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ ಅವರನ್ನು ಸಂಪರ್ಕಿಸಿದ್ದೇವೆ. ಅವರೂ ಒಪ್ಪಿಗೆ ಕೊಟ್ಟಿದ್ದಾರೆ’ ಹಾಗಾಗಿ ಸಮಾಧಿ ಮುಂದೆಯೇ ಮದುವೆಯಾಗುತ್ತಿದ್ದೇವೆ’ ಎಂದರು.