ಸಿಡಿ ಲೇಡಿ ಹೆಸರಿನ ಚಿತ್ರದ ಶೀರ್ಷಿಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿಯಾಗಿದೆ. ಸಂದೇಶ್ ನಾಗರಾಜ್ ಬ್ಯಾನರ್ ಅಡಿ ಈ ಶೀರ್ಷಿಕೆ ನೋಂದಣಿ ಆಗಿದೆ.
ರಾಜ್ಯ ರಾಜಕಾರಣದಲ್ಲಿ ಅತಿ ಹೆಚ್ಚು ಸುದ್ದಿಯಾದ ಸಿಡಿ ಪ್ರಕರಣ ಸಂಬಂಧಿಸಿದ ಸುದ್ದಿಗಳು ಟಿವಿ ವಾಹಿನಿಗಳಲ್ಲಿ ಸಿಡಿ ಲೇಡಿ ಶೀರ್ಷಿಕೆಯಲ್ಲೇ ಪ್ರಸಾರವಾಗಿದ್ದವು. ಹಾಗಾಗಿ ಈ ಶಬ್ದಗಳು ಹೆಚ್ಚು ಜನಪ್ರಿಯತೆ ಪಡೆದಿದ್ದವು. ಅದನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಶೀರ್ಷಿಕೆ ನೋಂದಣಿ ಮಾಡಲಾಗಿದೆ ಎಂಬ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿವೆ.
ಆದರೆ, ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಮಾತ್ರ ಈ ಶೀರ್ಷಿಕೆಯ ಹಿನ್ನೆಲೆಯ ಗುಟ್ಟು ಬಿಟ್ಟುಕೊಡಲಿಲ್ಲ. ಕಥೆ, ವಸ್ತು ಏನು? ಚಿತ್ರ ಶೀಘ್ರ ಸೆಟ್ಟೇರಲಿದೆಯೇ ಇಲ್ಲವೇ ಎಂಬ ಪ್ರಶ್ನೆಗಳೂ ಹಾಗೇ ಉಳಿದಿವೆ.