ಚೈತ್ರಾ ಅವರು ಇತ್ತೀಚೆಗೆ ಮಂಡ್ಯ ಮೂಲದ ಉದ್ಯಮಿ ನಾಗಾರ್ಜುನ್ ಅವರನ್ನು ಬೆಂಗಳೂರಿನ ಬ್ಯಾಟರಾಯನಪುರದ ಗಣಪತಿ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಮರುದಿನವೇ ಅದು ವಿವಾದವಾಗಿ ಕೋಲಾರದ ಮಹಿಳಾ ಠಾಣೆ ಮೆಟ್ಟಿಲೇರಿತ್ತು. ನನ್ನನ್ನು ಚೈತ್ರಾ ಬಲವಂತವಾಗಿ ಮದುವೆ ಆಗಿದ್ದಾರೆ ಎಂದು ನಾಗಾರ್ಜುನ್ ಹೇಳಿದರೆ, ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ನಾಗಾರ್ಜುನ್ ನನಗೆ ಇಷ್ಟ. ಅವರೊಂದಿಗೇ ಬಾಳುತ್ತೇನೆ ಎಂದು ಚೈತ್ರಾ ಹೇಳಿದ್ದರು.