‘ಜೂನ್ 7ರಂದು ನಮಗೆ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಿದೆ. ಕಾನೂನಿನ ಪ್ರಕಾರ ವಿಚ್ಛೇದನ ಪಡೆದಿದ್ದೇವೆ. ಕೆಲವು ವರ್ಷಗಳಿಂದ ನನ್ನ ಜೀವನ ಶೈಲಿ ಒಂದು ಆಯಾಮದಲ್ಲಿ ಹೋದರೆ, ನಿವೇದಿತಾ ಅವರ ಜೀವನಶೈಲಿ ಇನ್ನೊಂದು ಆಯಾಮದಲ್ಲಿತ್ತು. ನಮ್ಮ ಜೀವನ, ಜೀವನಶೈಲಿ ವ್ಯಾಖ್ಯಾನಗಳು ಹೊಂದಾಣಿಕೆ ಆಗಲೇ ಇಲ್ಲ. ಒಬ್ಬರಿಗೊಬ್ಬರು ಸಮಯ ಕೊಡಲು ಆಗಲಿಲ್ಲ. ಮಾನಸಿಕವಾಗಿ ನೋವು ಅನುಭವಿಸಿಕೊಂಡು ಒಟ್ಟಿಗಿರುವುದಕ್ಕಿಂತ ಬೇರೆಯಾಗುವುದು ಒಳ್ಳೆಯದು ಎಂದು ಒಮ್ಮತದಿಂದ ನಿರ್ಧಾರ ಮಾಡಿದೆವು. ನಮ್ಮಿಬ್ಬರ ನಡುವೆ ದ್ವೇಷ, ವೈಮನಸ್ಸು ಇಲ್ಲ. ನಾವಿಬ್ಬರೂ ಒಬ್ಬರಿಂದೊಬ್ಬರು ಜೀವನಾಂಶ ಪಡೆದುಕೊಂಡಿಲ್ಲ. ಮಗುವಿನ ವಿಚಾರದಲ್ಲೂ ಯಾವುದೇ ಒತ್ತಡ ಹಾಕಿಲ್ಲ. ನಿವೇದಿತಾ ಸ್ವತಂತ್ರ ಮಹಿಳೆ. ಅವರ ಖರ್ಚುಗಳನ್ನು ಅವರು ನೋಡಿಕೊಳ್ಳುತ್ತಿದ್ದರು. ಮೂರನೇ ವ್ಯಕ್ತಿಯ ಜೊತೆ ನಿವೇದಿತಾ ಅವರ ಸಂಬಂಧ ಕಲ್ಪಿಸುತ್ತಿರುವುದರಿಂದ ಮನಸ್ಸಿಗೆ ಬೇಸರವಾಗುತ್ತಿದೆ. ಇಂತಹ ವಿಕೃತ ಮನಃಸ್ಥಿತಿ ಶೋಭೆ ತರುವುದಿಲ್ಲ’ ಎಂದು ಚಂದನ್ ಹೇಳಿದರು.