<p><strong>ಮುಂಬೈ</strong>: ಬಿಡುಗಡೆಗೆ ಸಿದ್ದವಾಗಿರುವ ಬಾಲಿವುಡ್ನ ಛಾವಾ ಸಿನಿಮಾದಲ್ಲಿನ ವಿವಾದಿತ ಲೇಜಿಮ್ ನೃತ್ಯದ ಹಾಡನ್ನು ತೆಗೆದುಹಾಕಲಾಗುವುದು ಎಂದು ನಿರ್ದೇಶಕ ಲಕ್ಷ್ಮಣ ಉಟೇಕರ್ ತಿಳಿಸಿದ್ದಾರೆ.</p><p>ಲೇಜಿಮ್ ನೃತ್ಯದಲ್ಲಿ ಸಂಭಾಜಿ ಹಾಗೂ ಯಶುಭಾಯಿಗೆ ಅವಮಾನ ಮಾಡಲಾಗಿದೆ, ಇತಿಹಾಸ ತಿರುಚಲಾಗಿದೆ ಎಂದು ಹಲವು ಮರಾಠಾ ರಾಜಕಾರಣಿಗಳು, ಮರಾಠಾ ಸಂಘಟನೆಗಳು ಟ್ರೇಲರ್ ಬಿಡುಗಡೆಯಾದ ಮರುದಿನ ಉಟೇಕರ್ ಮನೆ ಮುಂದೆ ಧರಣಿ ಮಾಡಿದ್ದವು.</p><p>ಅಲ್ಲದೇ ಚಿತ್ರದಲ್ಲಿನ ವಿವಾದಿತ ಹಾಡನ್ನು ತೆಗೆದುಹಾಕದಿದ್ದರೆ ಸಿನಿಮಾ ಬಿಡುಗಡೆ ಮಾಡಲು ಬಿಡೆವು ಎಂದು ಎಚ್ಚರಿಕೆ ನೀಡಿದ್ದವು.</p><p>ಎಂಎನ್ಎಸ್ನ ರಾಜ್ ಠಾಕ್ರೆ ಜೊತೆಗಿನ ಸಭೆಯ ನಂತರ ಲಕ್ಷ್ಮಣ ಉಟೇಕರ್ ಈ ಘೋಷಣೆ ಮಾಡಿದರು. ಪರ ವಿರೋಧ ಏನೇ ಇರಬಹುದು. ಆದರೆ, ಪ್ರತಿಭಟನೆಗಳಿಗೆ ಗೌರವ ಕೊಟ್ಟು ಈ ನಿರ್ಧಾರ ಮಾಡಿದ್ದೇನೆ. ನಾಲ್ಕು ವರ್ಷ ಶ್ರಮ ಹಾಕಿ ಸಿನಿಮಾ ಮಾಡಿದ್ದೇನೆ ಎಂದಿದ್ದಾರೆ.</p><p>ಮರಾಠಿ ಕಾದಂಬರಿಕಾರ ಶಿವಾಜಿ ಸಾವಂತ್ ಬರೆದಿರುವ ‘ಛಾವಾ’ ಕೃತಿಯನ್ನು ಆಧರಿಸಿ ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಕುರಿತ ಚಿತ್ರ ಇದಾಗಿದೆ.</p><p>ಸಂಭಾಜಿ ಪಾತ್ರದಲ್ಲಿ ವಿಕ್ಕಿ ಕೌಶಲ್ ಅವರು ಅಭಿನಯಿಸಿದ್ದು, ಸಂಭಾಜಿ ಪತ್ನಿ ‘ಯಶುಬಾಯಿ’ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಇದ್ದಾರೆ. ಬಾಲಿವುಡ್ ನಟ ಅಕ್ಷಯ್ ಖನ್ನಾ ಪ್ರಮುಖ ಪಾತ್ರದಲ್ಲಿದ್ದಾರೆ.</p><p>ಮಡ್ಡೊಕ್ ಫಿಲ್ಮ್ಸ್ನ ದಿನೇಶ್ ವಿಜನ್ ನಿರ್ಮಾಣ ಮಾಡಿದ್ದಾರೆ. ಎ.ಆರ್. ರೆಹಮಾನ್ ಅವರು ಸಂಗೀತ ನೀಡಿದ್ದಾರೆ.</p><p>ಲುಕಾ ಚುಪ್ಪಿ, ಮಿಮಿ ಅಂತಹ ಕಲಾತ್ಮಕ ಸಿನಿಮಾಗಳನ್ನು ನಿರ್ದೇಶಿಸಿದ್ದ ಲಕ್ಷ್ಮಣ ಉಟೇಕರ್ ಅವರು ಇದೀಗ ಐತಿಹಾಸಿಕ ಕಥೆ ಹೊಂದಿರುವ ಬಿಗ್ ಬಜೆಟ್ ಸಿನಿಮಾ ಮೂಲಕ ಬಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.</p><p>ಫೆಬ್ರುವರಿ 14 ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲು ತಯಾರಾಗಿದೆ.</p>.ನಟ ಶಿವರಾಜ್ಕುಮಾರ್ ಆರೋಗ್ಯ ವಿಚಾರಿಸಲು ಬಂದ ನಟ, ನಟಿಯರ, ಗಣ್ಯರ ದಂಡು.VIDEO: ನಟ ಶಿವರಾಜ್ ಕುಮಾರ್ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಬಿಡುಗಡೆಗೆ ಸಿದ್ದವಾಗಿರುವ ಬಾಲಿವುಡ್ನ ಛಾವಾ ಸಿನಿಮಾದಲ್ಲಿನ ವಿವಾದಿತ ಲೇಜಿಮ್ ನೃತ್ಯದ ಹಾಡನ್ನು ತೆಗೆದುಹಾಕಲಾಗುವುದು ಎಂದು ನಿರ್ದೇಶಕ ಲಕ್ಷ್ಮಣ ಉಟೇಕರ್ ತಿಳಿಸಿದ್ದಾರೆ.</p><p>ಲೇಜಿಮ್ ನೃತ್ಯದಲ್ಲಿ ಸಂಭಾಜಿ ಹಾಗೂ ಯಶುಭಾಯಿಗೆ ಅವಮಾನ ಮಾಡಲಾಗಿದೆ, ಇತಿಹಾಸ ತಿರುಚಲಾಗಿದೆ ಎಂದು ಹಲವು ಮರಾಠಾ ರಾಜಕಾರಣಿಗಳು, ಮರಾಠಾ ಸಂಘಟನೆಗಳು ಟ್ರೇಲರ್ ಬಿಡುಗಡೆಯಾದ ಮರುದಿನ ಉಟೇಕರ್ ಮನೆ ಮುಂದೆ ಧರಣಿ ಮಾಡಿದ್ದವು.</p><p>ಅಲ್ಲದೇ ಚಿತ್ರದಲ್ಲಿನ ವಿವಾದಿತ ಹಾಡನ್ನು ತೆಗೆದುಹಾಕದಿದ್ದರೆ ಸಿನಿಮಾ ಬಿಡುಗಡೆ ಮಾಡಲು ಬಿಡೆವು ಎಂದು ಎಚ್ಚರಿಕೆ ನೀಡಿದ್ದವು.</p><p>ಎಂಎನ್ಎಸ್ನ ರಾಜ್ ಠಾಕ್ರೆ ಜೊತೆಗಿನ ಸಭೆಯ ನಂತರ ಲಕ್ಷ್ಮಣ ಉಟೇಕರ್ ಈ ಘೋಷಣೆ ಮಾಡಿದರು. ಪರ ವಿರೋಧ ಏನೇ ಇರಬಹುದು. ಆದರೆ, ಪ್ರತಿಭಟನೆಗಳಿಗೆ ಗೌರವ ಕೊಟ್ಟು ಈ ನಿರ್ಧಾರ ಮಾಡಿದ್ದೇನೆ. ನಾಲ್ಕು ವರ್ಷ ಶ್ರಮ ಹಾಕಿ ಸಿನಿಮಾ ಮಾಡಿದ್ದೇನೆ ಎಂದಿದ್ದಾರೆ.</p><p>ಮರಾಠಿ ಕಾದಂಬರಿಕಾರ ಶಿವಾಜಿ ಸಾವಂತ್ ಬರೆದಿರುವ ‘ಛಾವಾ’ ಕೃತಿಯನ್ನು ಆಧರಿಸಿ ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಕುರಿತ ಚಿತ್ರ ಇದಾಗಿದೆ.</p><p>ಸಂಭಾಜಿ ಪಾತ್ರದಲ್ಲಿ ವಿಕ್ಕಿ ಕೌಶಲ್ ಅವರು ಅಭಿನಯಿಸಿದ್ದು, ಸಂಭಾಜಿ ಪತ್ನಿ ‘ಯಶುಬಾಯಿ’ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಇದ್ದಾರೆ. ಬಾಲಿವುಡ್ ನಟ ಅಕ್ಷಯ್ ಖನ್ನಾ ಪ್ರಮುಖ ಪಾತ್ರದಲ್ಲಿದ್ದಾರೆ.</p><p>ಮಡ್ಡೊಕ್ ಫಿಲ್ಮ್ಸ್ನ ದಿನೇಶ್ ವಿಜನ್ ನಿರ್ಮಾಣ ಮಾಡಿದ್ದಾರೆ. ಎ.ಆರ್. ರೆಹಮಾನ್ ಅವರು ಸಂಗೀತ ನೀಡಿದ್ದಾರೆ.</p><p>ಲುಕಾ ಚುಪ್ಪಿ, ಮಿಮಿ ಅಂತಹ ಕಲಾತ್ಮಕ ಸಿನಿಮಾಗಳನ್ನು ನಿರ್ದೇಶಿಸಿದ್ದ ಲಕ್ಷ್ಮಣ ಉಟೇಕರ್ ಅವರು ಇದೀಗ ಐತಿಹಾಸಿಕ ಕಥೆ ಹೊಂದಿರುವ ಬಿಗ್ ಬಜೆಟ್ ಸಿನಿಮಾ ಮೂಲಕ ಬಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.</p><p>ಫೆಬ್ರುವರಿ 14 ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲು ತಯಾರಾಗಿದೆ.</p>.ನಟ ಶಿವರಾಜ್ಕುಮಾರ್ ಆರೋಗ್ಯ ವಿಚಾರಿಸಲು ಬಂದ ನಟ, ನಟಿಯರ, ಗಣ್ಯರ ದಂಡು.VIDEO: ನಟ ಶಿವರಾಜ್ ಕುಮಾರ್ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>