<p>ಕೊರೊನಾ ಸೋಂಕಿನ ವಿರುದ್ಧ ಜಾಗೃತಿ ಮೂಡಿಸಲು ಹಾಗೂ ಜನರಲ್ಲಿ ವಿಶ್ವಾಸ ತುಂಬುವುದಕ್ಕಾಗಿ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆ ‘ಬದಲಾಗು ನೀನು ಬದಲಾಯಿಸು ನೀನು‘ ಎಂಬ ಹಾಡನ್ನು ಪ್ರಸ್ತುಪಡಿಸುತ್ತಿದೆ.</p>.<p>ಕನ್ನಡ ಚಿತ್ರರಂಗ ಮತ್ತು ಕ್ರಿಕೆಟ್ ರಂಗದ ಇಪ್ಪತ್ತೆರಡು ತಾರೆಯರು ಈ ಹಾಡಿನ ಆಲ್ಬಂನಲ್ಲಿ ಪಾಲ್ಗೊಂಡಿದ್ದಾರೆ. ಜೂನ್ 5ರ ವಿಶ್ವ ಪರಿಸರ ದಿನದಂದು ಈ ಹಾಡಿನ ಆಲ್ಬಂ ಬಿಡುಗಡೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ.</p>.<p>ನಿರ್ದೇಶಕ ಪವನ್ ಒಡೆಯರ್ ಅವರದ್ದು ಹಾಡಿನ ಪರಿಕಲ್ಪನೆ ಮತ್ತು ನಿರ್ದೇಶನ. ಪ್ರದ್ಯುಮ್ನ ನರಹಳ್ಳಿ ಅವರು ಸಾಹಿತ್ಯ ಬರೆದಿದ್ದು, ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಇಮ್ರಾನ್ ಸರ್ದಾರಿಯ ಕೊರಿಯೊಗ್ರಫಿ ಮಾಡಿದ್ದಾರೆ.</p>.<p>ತಾರೆಯರಾದ ರವಿಚಂದ್ರನ್, ಸುಮಲತಾ ಅಂಬರೀಶ್, ರಮೇಶ್ ಅರವಿಂದ, ಶಿವರಾಜ್ಕುಮಾರ್, ಉಪೇಂದ್ರ, ಗಣೇಶ್,ದರ್ಶನ್, ರಕ್ಷಿತ್ ಶೆಟ್ಟಿ, ನಟಿಯರಾದ ಸುಮಲತಾ ಅಂಬರೀಷ್, ಶಾನ್ವಿ ಶ್ರೀವತ್ಸ, ಆಶಿಕಾ ರಂಗನಾಥ್, ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಸೇರಿದಂತೆ ಸಿನಿಮಾ ಹಾಗೂ ಕ್ರೀಡಾರಂಗದ ಹಲವು ತಾರೆಯರು ಇದ್ದಾರೆ.</p>.<p>‘ಕೊರೊನಾ ವಿರುದ್ಧ ಹೋರಾಟಕ್ಕೆ ಜನರನ್ನು ಅಣಿಯಾಗಲು ಪ್ರೇರೇಪಿಸುವಂತಹ ಹಾಡು ಇದು. ಕೊರೊನಾ ಜತೆಗೆ ಜತೆಗೆ ಜೀವಿಸುವುದನ್ನೂ ಈ ಹಾಡಿನಲ್ಲಿ ವಿವರಿಸಲಾಗಿದೆ. ಚಿತ್ರರಂಗ ಹಾಗೂ ಕ್ರಿಕೆಟ್ ಕ್ಷೇತ್ರದ ಇಪ್ಪತ್ತೆರಡು ಖ್ಯಾತ ತಾರೆಯರು ಈ ಹಾಡಿನ ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ‘ ಎಂದು ವಿವರಿಸಿದರು ನಿರ್ದೇಶಕ ಪವನ್ ಒಡೆಯರ್.</p>.<p>‘ಹದಿನೈದು ದಿನಗಳ ಕಾಲ ಹಾಡಿನ ಚಿತ್ರೀಕರಣ ಮಾಡಿದ್ದೇವೆ. ಬಹುತೇಕ ಎಲ್ಲ ನಟ – ನಟಿಯರ ಮನೆಗೆ ತೆರಳಿ ಶೂಟಿಂಗ್ ಮಾಡಿದ್ದೇವೆ. ಇಡೀ ಚಿತ್ರೀಕರಣ ಬಹಳ ಚೆನ್ನಾಗಿತ್ತು. ಎಲ್ಲರೂ ತುಂಬಾ ಪ್ರೀತಿಯಿಂದ ಚಿತ್ರೀಕರಣಕ್ಕೆ ಸಹಕಾರ ನೀಡಿದರು. ಕೆಲವು ತಾರೆಯರು ಮಾತ್ರ, ಹಾಡಿಗೆ ಬೇಕಾದ ಹಾವಭಾವ, ನಟನೆ ಬಗ್ಗೆ ಮಾಹಿತಿ ಪಡೆದು ಶೂಟ್ ಮಾಡಿಕಳಿಸಿದ್ದಾರೆ‘ ಎಂದರು ಪವನ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊರೊನಾ ಸೋಂಕಿನ ವಿರುದ್ಧ ಜಾಗೃತಿ ಮೂಡಿಸಲು ಹಾಗೂ ಜನರಲ್ಲಿ ವಿಶ್ವಾಸ ತುಂಬುವುದಕ್ಕಾಗಿ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆ ‘ಬದಲಾಗು ನೀನು ಬದಲಾಯಿಸು ನೀನು‘ ಎಂಬ ಹಾಡನ್ನು ಪ್ರಸ್ತುಪಡಿಸುತ್ತಿದೆ.</p>.<p>ಕನ್ನಡ ಚಿತ್ರರಂಗ ಮತ್ತು ಕ್ರಿಕೆಟ್ ರಂಗದ ಇಪ್ಪತ್ತೆರಡು ತಾರೆಯರು ಈ ಹಾಡಿನ ಆಲ್ಬಂನಲ್ಲಿ ಪಾಲ್ಗೊಂಡಿದ್ದಾರೆ. ಜೂನ್ 5ರ ವಿಶ್ವ ಪರಿಸರ ದಿನದಂದು ಈ ಹಾಡಿನ ಆಲ್ಬಂ ಬಿಡುಗಡೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ.</p>.<p>ನಿರ್ದೇಶಕ ಪವನ್ ಒಡೆಯರ್ ಅವರದ್ದು ಹಾಡಿನ ಪರಿಕಲ್ಪನೆ ಮತ್ತು ನಿರ್ದೇಶನ. ಪ್ರದ್ಯುಮ್ನ ನರಹಳ್ಳಿ ಅವರು ಸಾಹಿತ್ಯ ಬರೆದಿದ್ದು, ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಇಮ್ರಾನ್ ಸರ್ದಾರಿಯ ಕೊರಿಯೊಗ್ರಫಿ ಮಾಡಿದ್ದಾರೆ.</p>.<p>ತಾರೆಯರಾದ ರವಿಚಂದ್ರನ್, ಸುಮಲತಾ ಅಂಬರೀಶ್, ರಮೇಶ್ ಅರವಿಂದ, ಶಿವರಾಜ್ಕುಮಾರ್, ಉಪೇಂದ್ರ, ಗಣೇಶ್,ದರ್ಶನ್, ರಕ್ಷಿತ್ ಶೆಟ್ಟಿ, ನಟಿಯರಾದ ಸುಮಲತಾ ಅಂಬರೀಷ್, ಶಾನ್ವಿ ಶ್ರೀವತ್ಸ, ಆಶಿಕಾ ರಂಗನಾಥ್, ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಸೇರಿದಂತೆ ಸಿನಿಮಾ ಹಾಗೂ ಕ್ರೀಡಾರಂಗದ ಹಲವು ತಾರೆಯರು ಇದ್ದಾರೆ.</p>.<p>‘ಕೊರೊನಾ ವಿರುದ್ಧ ಹೋರಾಟಕ್ಕೆ ಜನರನ್ನು ಅಣಿಯಾಗಲು ಪ್ರೇರೇಪಿಸುವಂತಹ ಹಾಡು ಇದು. ಕೊರೊನಾ ಜತೆಗೆ ಜತೆಗೆ ಜೀವಿಸುವುದನ್ನೂ ಈ ಹಾಡಿನಲ್ಲಿ ವಿವರಿಸಲಾಗಿದೆ. ಚಿತ್ರರಂಗ ಹಾಗೂ ಕ್ರಿಕೆಟ್ ಕ್ಷೇತ್ರದ ಇಪ್ಪತ್ತೆರಡು ಖ್ಯಾತ ತಾರೆಯರು ಈ ಹಾಡಿನ ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ‘ ಎಂದು ವಿವರಿಸಿದರು ನಿರ್ದೇಶಕ ಪವನ್ ಒಡೆಯರ್.</p>.<p>‘ಹದಿನೈದು ದಿನಗಳ ಕಾಲ ಹಾಡಿನ ಚಿತ್ರೀಕರಣ ಮಾಡಿದ್ದೇವೆ. ಬಹುತೇಕ ಎಲ್ಲ ನಟ – ನಟಿಯರ ಮನೆಗೆ ತೆರಳಿ ಶೂಟಿಂಗ್ ಮಾಡಿದ್ದೇವೆ. ಇಡೀ ಚಿತ್ರೀಕರಣ ಬಹಳ ಚೆನ್ನಾಗಿತ್ತು. ಎಲ್ಲರೂ ತುಂಬಾ ಪ್ರೀತಿಯಿಂದ ಚಿತ್ರೀಕರಣಕ್ಕೆ ಸಹಕಾರ ನೀಡಿದರು. ಕೆಲವು ತಾರೆಯರು ಮಾತ್ರ, ಹಾಡಿಗೆ ಬೇಕಾದ ಹಾವಭಾವ, ನಟನೆ ಬಗ್ಗೆ ಮಾಹಿತಿ ಪಡೆದು ಶೂಟ್ ಮಾಡಿಕಳಿಸಿದ್ದಾರೆ‘ ಎಂದರು ಪವನ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>