ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಪ್ತಪದಿ ತುಳಿದ ಧ್ರುವ ಸರ್ಜಾ- ಪ್ರೇರಣಾ ಶಂಕರ್

Last Updated 24 ನವೆಂಬರ್ 2019, 4:48 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ಜೆ.ಪಿ. ನಗರದ ಸಂಸ್ಕೃತ ಬೃಂದಾವನ ಕನ್ವೆಷನ್ ಹಾಲ್‌ನಲ್ಲಿ ಭಾನುವಾರ ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಸಪ್ತಪದಿ ತುಳಿದರು.

ಬೆಳಿಗ್ಗೆ 7.15 ರಿಂದ 7.45ರ ವೃಶ್ಚಿಕ ಶುಭ ಲಗ್ನದಲ್ಲಿ ಈ ಇಬ್ಬರೂ ದಾಂಪತ್ಯ ಜೀವನಕ್ಕೆ ಅಡಿ ಇಟ್ಟರು. ತಿರುಪತಿ ವೆಂಕಟೇಶ್ವರ ಥೀಮ್‌ನಲ್ಲಿ ಮದುವೆ ಮಂಟಪ ಅಲಂಕೃತಗೊಂಡಿತ್ತು. ಬ್ಯಾಕ್ ಡ್ರಾಪ್ ನಲ್ಲಿ ಶಿವ-ಪಾರ್ವತಿ, ಗಣಪ ಮಂಟಪಗಳನ್ನು‌ ನಿರ್ಮಿಸಲಾಗಿತ್ತು.

ಮೊದಲಿಗೆ ಸೋದರ ಮಾವನ ಕೈಯಲ್ಲಿ ವಧುವಿಗೆ ಕಂಕಣ ಧಾರಣೆ ಮಾಡಲಾಯಿತು. ಬಳಿಕ ವರನಿಗೆ ಸೋದರ ಮಾವನಿಂದ ಕಂಕಣ ಧಾರಣೆ ಮಾಡಿಸಲಾಯಿತು. 18 ಪುರೋಹಿತರು ಮದುವೆ ಶಾಸ್ತ್ರಗಳನ್ನು ನಡೆಸಿಕೊಟ್ಟರು. ಗೋಪೂಜೆಗಾಗಿ ಐದು ಹಸುಗಳನ್ನು ತರಿಸಲಾಗಿತ್ತು. ಎರಡು ಕುಟುಂಬದ ಸದಸ್ಯರು, ಧ್ರುವ ಅವರ ಅಭಿಮಾನಿಗಳು ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT