<p><strong>ಬೆಂಗಳೂರು</strong>: ‘ಪುನೀತ್ ರಾಜ್ಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರಬೇಕು ಎಂದು ಸಾಕಷ್ಟು ಪ್ರಯತ್ನಪಟ್ಟಿದ್ದೆ. ಆದರೆ ಅವರು ಒಪ್ಪಲಿಲ್ಲ. ಇದನ್ನು ಇಲ್ಲಿಯವರೆಗೂ ಎಲ್ಲೂ ಹೇಳಿಕೊಂಡಿರಲಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. </p>.<p>ಶನಿವಾರ(ಅ.25) ಸ್ಟಾರ್ ಫ್ಯಾನ್ಡಮ್ನ ಪಿಆರ್ಕೆ ಆ್ಯಪ್ ಅನಾವರಣಗೊಳಿಸಿ ಮಾತನಾಡಿದ ಅವರು, ‘ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನೂ ರಾಜಕೀಯಕ್ಕೆ ಕರೆದಿದ್ದೆ. ಅವರೂ ಒಪ್ಪಿರಲಿಲ್ಲ. ಕುಟುಂಬದ ಹೆಜ್ಜೆಯಂತೆ ನಡೆಯುತ್ತೇನೆ ಎಂದಿದ್ದರು’ ಎಂದು ನೆನಪಿಸಿಕೊಂಡರು. </p>.<p>‘ಪುನೀತ್ ಅವರು ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ಚಿಕ್ಕ ವಯಸ್ಸಿನಲ್ಲೇ ಕೊಟ್ಟು ಹೋಗಿದ್ದಾರೆ. ನಾನೂ ಅಪ್ಪು ಒಂದೇ ಜಿಮ್ಗೆ ಹೋಗುತ್ತಿದ್ದೆವು. ಸುಮಾರು ಹದಿನೈದು ವರ್ಷಗಳ ಪರಿಚಯ. ಅವರು ನನ್ನ ಒಳ್ಳೆಯ ಸ್ನೇಹಿತರಾಗಿದ್ದರು. ಅಪ್ಪು ಅವರನ್ನು ಮುಂದಿನ ಪೀಳಿಗೆಯೂ ನೆನಪಿಸಿಕೊಳ್ಳಬೇಕು. ಅಪ್ಪು ಹೆಸರಿನಲ್ಲಿ ಬಂದಿರುವ ಈ ಆ್ಯಪ್ ರಾಮಾಯಣ, ಮಹಾಭಾರತ ಗ್ರಂಥದಂತೆ ಶಾಶ್ವತವಾಗಿ ಇರಲಿದೆ. ತಾಯಿಯಂತೆ ಅಪ್ಪು ಅವರನ್ನು ಅನೇಕರು ಇಂದಿಗೂ ನೆನಪಿಸಿಕೊಳ್ಳುತ್ತಿದ್ದಾರೆ. ಪುನೀತ್ ಅವರು ಬದುಕಿನಲ್ಲಿ ಮನುಷ್ಯತ್ವಕ್ಕೆ ಹೆಚ್ಚಿನ ಬೆಲೆ ಕೊಟ್ಟವರು. ಎಲ್ಲರ ಹೃದಯವನ್ನು ಈ ಮೂಲಕ ಗೆದ್ದಿದ್ದಾರೆ. ಇವುಗಳೆಲ್ಲವನ್ನೂ ಜನರಿಗೆ ಪರಿಚಯಿಸಲು ಈ ಆ್ಯಪ್ ಸಹಕಾರಿಯಾಗಲಿದೆ’ ಎಂದರು. </p>.<p>ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ಸ್ಟಾರ್ ಫ್ಯಾನ್ಡಮ್ ಸ್ಥಾಪಕ ಸಮರ್ಥ ನಾಗಭೂಷಣಂ ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಪುನೀತ್ ರಾಜ್ಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರಬೇಕು ಎಂದು ಸಾಕಷ್ಟು ಪ್ರಯತ್ನಪಟ್ಟಿದ್ದೆ. ಆದರೆ ಅವರು ಒಪ್ಪಲಿಲ್ಲ. ಇದನ್ನು ಇಲ್ಲಿಯವರೆಗೂ ಎಲ್ಲೂ ಹೇಳಿಕೊಂಡಿರಲಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. </p>.<p>ಶನಿವಾರ(ಅ.25) ಸ್ಟಾರ್ ಫ್ಯಾನ್ಡಮ್ನ ಪಿಆರ್ಕೆ ಆ್ಯಪ್ ಅನಾವರಣಗೊಳಿಸಿ ಮಾತನಾಡಿದ ಅವರು, ‘ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನೂ ರಾಜಕೀಯಕ್ಕೆ ಕರೆದಿದ್ದೆ. ಅವರೂ ಒಪ್ಪಿರಲಿಲ್ಲ. ಕುಟುಂಬದ ಹೆಜ್ಜೆಯಂತೆ ನಡೆಯುತ್ತೇನೆ ಎಂದಿದ್ದರು’ ಎಂದು ನೆನಪಿಸಿಕೊಂಡರು. </p>.<p>‘ಪುನೀತ್ ಅವರು ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ಚಿಕ್ಕ ವಯಸ್ಸಿನಲ್ಲೇ ಕೊಟ್ಟು ಹೋಗಿದ್ದಾರೆ. ನಾನೂ ಅಪ್ಪು ಒಂದೇ ಜಿಮ್ಗೆ ಹೋಗುತ್ತಿದ್ದೆವು. ಸುಮಾರು ಹದಿನೈದು ವರ್ಷಗಳ ಪರಿಚಯ. ಅವರು ನನ್ನ ಒಳ್ಳೆಯ ಸ್ನೇಹಿತರಾಗಿದ್ದರು. ಅಪ್ಪು ಅವರನ್ನು ಮುಂದಿನ ಪೀಳಿಗೆಯೂ ನೆನಪಿಸಿಕೊಳ್ಳಬೇಕು. ಅಪ್ಪು ಹೆಸರಿನಲ್ಲಿ ಬಂದಿರುವ ಈ ಆ್ಯಪ್ ರಾಮಾಯಣ, ಮಹಾಭಾರತ ಗ್ರಂಥದಂತೆ ಶಾಶ್ವತವಾಗಿ ಇರಲಿದೆ. ತಾಯಿಯಂತೆ ಅಪ್ಪು ಅವರನ್ನು ಅನೇಕರು ಇಂದಿಗೂ ನೆನಪಿಸಿಕೊಳ್ಳುತ್ತಿದ್ದಾರೆ. ಪುನೀತ್ ಅವರು ಬದುಕಿನಲ್ಲಿ ಮನುಷ್ಯತ್ವಕ್ಕೆ ಹೆಚ್ಚಿನ ಬೆಲೆ ಕೊಟ್ಟವರು. ಎಲ್ಲರ ಹೃದಯವನ್ನು ಈ ಮೂಲಕ ಗೆದ್ದಿದ್ದಾರೆ. ಇವುಗಳೆಲ್ಲವನ್ನೂ ಜನರಿಗೆ ಪರಿಚಯಿಸಲು ಈ ಆ್ಯಪ್ ಸಹಕಾರಿಯಾಗಲಿದೆ’ ಎಂದರು. </p>.<p>ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ಸ್ಟಾರ್ ಫ್ಯಾನ್ಡಮ್ ಸ್ಥಾಪಕ ಸಮರ್ಥ ನಾಗಭೂಷಣಂ ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>