ರಾಜ್ ಬಿ. ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರ ‘ಗರುಡಗಮನ ವೃಷಭ ವಾಹನ’ ಜುಲೈ 4ರಂದು ಬಿಡುಗಡೆ ಆಗಲಿದೆ. ಮಂಗಳೂರಿನ ಭೂಗತಲೋಕ, ರೌಡಿಸಂ ವಿಷಯ ಸಂಬಂಧಿಸಿದ ಕಥಾವಸ್ತುವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಮೈಸೂರಿನಲ್ಲಿ ಈ ಚಿತ್ರ ಸೆಟ್ಟೇರಿದೆ. ಮಂಗಳೂರು ಭಾಗದ ಭೂಗತ ಲೋಕದ ವಿಷಯ ಬಲ್ಲವರಿಗೆ ಅಥವಾ ಸುದ್ದಿಗಳನ್ನು ಕೇಳುತ್ತಿದ್ದವರಿಗೆ ಈ ಸಿನಿಮಾ ಹೆಚ್ಚು ಆಪ್ತವಾಗಲಿದೆ ಎಂದು ಚಿತ್ರತಂಡ ಹೇಳಿದೆ.