<p><strong>ತಿರುವನಂತಪುರ</strong>: ತಿರುವನಂತಪುರದಲ್ಲಿ ಗುರುವಾರ ತಡರಾತ್ರಿ ನಡೆದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಖ್ಯಾತ ಮಲಯಾಳ ನಟ ಮಣಿಯನ್ಪಿಳ್ಳ ರಾಜು ಅವರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.</p><p>ಕ್ಲಬ್ನಿಂದ ಹೊರಬಂದಿದ್ದ ನಟ, ಕಾರು ಚಲಾಯಿಸಿದ್ದಾರೆ. ಈ ವೇಳೆ ಬೈಕ್ಗೆ ಕಾರು ಡಿಕ್ಕಿಯಾಗಿದೆ. ಆದರೆ ಕಾರನ್ನು ನಿಲ್ಲಿಸದೆ ಹಾಗೆಯೇ ಮುನ್ನಡೆದಿದ್ದಾರೆ. ಹೀಗಾಗಿ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.</p>.Under-19 WC: ದಾಖಲೆಯ ಆರನೇ ಬಾರಿ ಪ್ರಶಸ್ತಿ ಗೆದ್ದ ಭಾರತ ಯುವಪಡೆ.ಜೆಸಿ: ದಿ ಯೂನಿವರ್ಸಿಟಿ ಸಿನಿಮಾ ವಿಮರ್ಶೆ: ಎಳೆ ರೌಡಿಯ ಪರಿವರ್ತನೆ ಕಥೆ. <p>ಆದರೆ ಈ ಆರೋಪವನ್ನು ನಟ ಮಣಿಯನ್ಪಿಳ್ಳ ರಾಜು ನಿರಾಕರಿಸಿದ್ದಾರೆ. ಭಯದಿಂದ ಕಾರನ್ನು ನಿಲ್ಲಿಸದೆ ಹೊರಟೆ ಹೊರತು ಕುಡಿದಿರಲಿಲ್ಲ. ಕ್ಯಾನ್ಸರ್ನಿಂದ ಬಳಲುತ್ತಿರುವುದರಿಂದ ಮದ್ಯ ಸೇವಿಸಿರಲಿಲ್ಲ ಎಂದು ನಟ ಹೇಳಿದ್ದಾರೆ.</p><p>ಇಂದು (ಶುಕ್ರವಾರ) ಬೆಳಿಗ್ಗೆ ಮಣಿಯನ್ಪಿಳ್ಳ ರಾಜು ಪೊಲೀಸರ ಮುಂದೆ ಶರಣಾದರು. ರಕ್ತದಲ್ಲಿ ಮದ್ಯದ ಅಂಶ ಇರುವುದನ್ನು ಕಂಡು ಹಿಡಿಯಲು ಅವರನ್ನು ರಕ್ತದ ಪರೀಕ್ಷೆಗೆ ಒಳಪಡಿಸಲಾಯಿತು.</p>.ಯುವತಿಯ ಮೊಬೈಲ್ ಕಿತ್ತು ಓಡಿದ್ದ ಆರೋಪಿಗೆ ಸಾರ್ವಜನಿಕರಿಂದ ಥಳಿತ.ತೆಂಗಿನ ಗರಿ ಹಿಡಿದು ಚಿರತೆ ವಿರುದ್ಧ ಹೋರಾಡಿ ಗೆದ್ದ 50 ವರ್ಷದ ಮಹಿಳೆ!. <p>ನಿರ್ಲಕ್ಷ್ಯದ ಚಾಲನೆ ಮತ್ತು ಕಾರನ್ನು ನಿಲ್ಲಿಸದಿದ್ದಕ್ಕಾಗಿ ಭಾರತೀಯ ನ್ಯಾಯ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. </p><p>ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ರಸ್ತೆ ದಾಟುತ್ತಿದ್ದ ರಾಜು ಅವರು ಹಾಗೂ ಬೈಕ್ ಡಿಕ್ಕಿ ಹೊಡೆದಿದೆ. ನಿವೇದಿತ್ ಕೃಷ್ಣನ್ ಮತ್ತು ಸೂರಜ್ ಎಂಬುವವರು ಬೈಕ್ ಸವಾರರು ಎಂದು ಗುರುತಿಸಲಾಗಿದೆ. ಇಬ್ಬರು ಕಾಲು ಮುರಿತ ಹಾಗೂ ಬೆನ್ನುಮೂಳೆ ಗಾಯಗಳಿಂದ ಬಳಲುತ್ತಿದ್ದಾರೆ.</p>.ಅಜೀರ್ಣವೇ...ಹೊಟ್ಟೆ ಸರಿಪಡಿಸಿಕೊಳ್ಳಲು ಇಲ್ಲಿವೆ ಸರಳ ಮನೆಮದ್ದುಗಳು.ನಟಿ ಕಂಗನಾ ರೀತಿ ಸ್ಟೈಲಿಶ್ ಆಗಿ ಸೀರೆ ಉಡಬೇಕೆ?: ಯುವತಿಯರಿಗೆ ಇಲ್ಲಿದೆ ಟಿಪ್ಸ್
<p><strong>ತಿರುವನಂತಪುರ</strong>: ತಿರುವನಂತಪುರದಲ್ಲಿ ಗುರುವಾರ ತಡರಾತ್ರಿ ನಡೆದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಖ್ಯಾತ ಮಲಯಾಳ ನಟ ಮಣಿಯನ್ಪಿಳ್ಳ ರಾಜು ಅವರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.</p><p>ಕ್ಲಬ್ನಿಂದ ಹೊರಬಂದಿದ್ದ ನಟ, ಕಾರು ಚಲಾಯಿಸಿದ್ದಾರೆ. ಈ ವೇಳೆ ಬೈಕ್ಗೆ ಕಾರು ಡಿಕ್ಕಿಯಾಗಿದೆ. ಆದರೆ ಕಾರನ್ನು ನಿಲ್ಲಿಸದೆ ಹಾಗೆಯೇ ಮುನ್ನಡೆದಿದ್ದಾರೆ. ಹೀಗಾಗಿ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.</p>.Under-19 WC: ದಾಖಲೆಯ ಆರನೇ ಬಾರಿ ಪ್ರಶಸ್ತಿ ಗೆದ್ದ ಭಾರತ ಯುವಪಡೆ.ಜೆಸಿ: ದಿ ಯೂನಿವರ್ಸಿಟಿ ಸಿನಿಮಾ ವಿಮರ್ಶೆ: ಎಳೆ ರೌಡಿಯ ಪರಿವರ್ತನೆ ಕಥೆ. <p>ಆದರೆ ಈ ಆರೋಪವನ್ನು ನಟ ಮಣಿಯನ್ಪಿಳ್ಳ ರಾಜು ನಿರಾಕರಿಸಿದ್ದಾರೆ. ಭಯದಿಂದ ಕಾರನ್ನು ನಿಲ್ಲಿಸದೆ ಹೊರಟೆ ಹೊರತು ಕುಡಿದಿರಲಿಲ್ಲ. ಕ್ಯಾನ್ಸರ್ನಿಂದ ಬಳಲುತ್ತಿರುವುದರಿಂದ ಮದ್ಯ ಸೇವಿಸಿರಲಿಲ್ಲ ಎಂದು ನಟ ಹೇಳಿದ್ದಾರೆ.</p><p>ಇಂದು (ಶುಕ್ರವಾರ) ಬೆಳಿಗ್ಗೆ ಮಣಿಯನ್ಪಿಳ್ಳ ರಾಜು ಪೊಲೀಸರ ಮುಂದೆ ಶರಣಾದರು. ರಕ್ತದಲ್ಲಿ ಮದ್ಯದ ಅಂಶ ಇರುವುದನ್ನು ಕಂಡು ಹಿಡಿಯಲು ಅವರನ್ನು ರಕ್ತದ ಪರೀಕ್ಷೆಗೆ ಒಳಪಡಿಸಲಾಯಿತು.</p>.ಯುವತಿಯ ಮೊಬೈಲ್ ಕಿತ್ತು ಓಡಿದ್ದ ಆರೋಪಿಗೆ ಸಾರ್ವಜನಿಕರಿಂದ ಥಳಿತ.ತೆಂಗಿನ ಗರಿ ಹಿಡಿದು ಚಿರತೆ ವಿರುದ್ಧ ಹೋರಾಡಿ ಗೆದ್ದ 50 ವರ್ಷದ ಮಹಿಳೆ!. <p>ನಿರ್ಲಕ್ಷ್ಯದ ಚಾಲನೆ ಮತ್ತು ಕಾರನ್ನು ನಿಲ್ಲಿಸದಿದ್ದಕ್ಕಾಗಿ ಭಾರತೀಯ ನ್ಯಾಯ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. </p><p>ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ರಸ್ತೆ ದಾಟುತ್ತಿದ್ದ ರಾಜು ಅವರು ಹಾಗೂ ಬೈಕ್ ಡಿಕ್ಕಿ ಹೊಡೆದಿದೆ. ನಿವೇದಿತ್ ಕೃಷ್ಣನ್ ಮತ್ತು ಸೂರಜ್ ಎಂಬುವವರು ಬೈಕ್ ಸವಾರರು ಎಂದು ಗುರುತಿಸಲಾಗಿದೆ. ಇಬ್ಬರು ಕಾಲು ಮುರಿತ ಹಾಗೂ ಬೆನ್ನುಮೂಳೆ ಗಾಯಗಳಿಂದ ಬಳಲುತ್ತಿದ್ದಾರೆ.</p>.ಅಜೀರ್ಣವೇ...ಹೊಟ್ಟೆ ಸರಿಪಡಿಸಿಕೊಳ್ಳಲು ಇಲ್ಲಿವೆ ಸರಳ ಮನೆಮದ್ದುಗಳು.ನಟಿ ಕಂಗನಾ ರೀತಿ ಸ್ಟೈಲಿಶ್ ಆಗಿ ಸೀರೆ ಉಡಬೇಕೆ?: ಯುವತಿಯರಿಗೆ ಇಲ್ಲಿದೆ ಟಿಪ್ಸ್