ವಾಣಿಜ್ಯ ಉದ್ದೇಶಗಳಿಗೆ ಚಿತ್ರಗೀತೆ, ಭಕ್ತಿಗೀತೆ, ಭಾವಗೀತೆ, ಜನಪದ ಗೀತೆ ಬಳಸಿಕೊಂಡರೆ ಸಂಬಂಧಪಟ್ಟ ಗಾಯಕರಿಗೆ ಗೌರವಧನ ನೀಡುವುದು ಕಾಯ್ದೆ ಅನ್ವಯ ಕಡ್ಡಾಯ. ಆದರೆ, ಎಫ್.ಎಂ. ರೇಡಿಯೊಗಳು, ದೃಶ್ಯಮಾಧ್ಯಮಗಳು, ಬಾರ್ ಅಂಡ್ ರೆಸ್ಟೋರೆಂಟ್ಗಳು ಸೇರಿದಂತೆ ಕೆಲವು ಸಂಸ್ಥೆಗಳು ವ್ಯವಹಾರದ ಉದ್ದೇಶಕ್ಕೆ ಎಗ್ಗಿಲ್ಲದೆ ಹಾಡುಗಳನ್ನು ಬಳಸಿಕೊಳ್ಳುತ್ತಿವೆ. ಆದರೆ, ಗೌರವಧನ ನೀಡುತ್ತಿಲ್ಲ ಎನ್ನುವುದು ಗಾಯಕರ ಆರೋಪ. ಹಾಗಾಗಿ, ರಾಜ್ಯದಲ್ಲಿಯೂ ಇಸ್ರಾದ ಕಾರ್ಯ ಚಟುವಟಿಕೆ ಆರಂಭಿಸಲು ಶುಕ್ರವಾರ ನಡೆದ ಸಂಘದ ಮೊದಲ ಸಭೆಯಲ್ಲಿ ನಿರ್ಧರಿಸಲಾಯಿತು.