ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ ಮಂಜಿನಲ್ಲಿ ‘ಜೆರ್ಸಿ ನಂ.10‘ ಚಿತ್ರೀಕರಣ

Last Updated 14 ಡಿಸೆಂಬರ್ 2020, 11:50 IST
ಅಕ್ಷರ ಗಾತ್ರ

ಚೇತನ್‌ ಎಸ್‌. ನಿರ್ದೇಶಿಸುತ್ತಿರುವ ‘ಜೆರ್ಸಿ ನಂ.10’ ಚಿತ್ರಕ್ಕೆ ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು.

ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಸುನೀಲ್ ಸುಬ್ರಮಣ್ಯ ಹಾಗೂ ವೀಣಾ ಅಚಯ್ಯ, ಬಿ.ಎ. ಹರೀಶ್, ದೀನ್ ಬೋಪಣ್ಣ, ಸತ್ಯಪ್ಪನ್, ವಿಶ್ವನಾಥನ್, ನಂಗಾಯಲ್ ಅವರು ಚಿತ್ರದ ಮುಹೂರ್ತದಲ್ಲಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಾಯಕನಾಗಿ ಆದ್ಯ ಪೂವಣ್ಣ, ಎರಡನೇ ನಾಯಕನಾಗಿ ಚಂದನ್‌ ಆಚಾರ್‌ ಮತ್ತು ಎರಡನೇ ನಾಯಕಿಯಾಗಿ ಅನುಷ್ಕಾ ಹೆಗ್ಡೆ, ಪೋಷಕ ಪಾತ್ರಗಳಲ್ಲಿ ಜೈಜಗದೀಶ್, ಮಂಡ್ ಯರಮೇಶ್, ದತ್ತಣ್ಣ, ಥ್ರಿಲ್ಲರ್ ಮಂಜು, ಟೆನ್ನಿಸ್ ಕೃಷ್ಣ, ಜ್ಯೋತಿ ರೈ, ಹೇಮಂತ್ ಕುಮಾರ್, ಶ್ರೀ ಹರ್ಷವರ್ಧನ್, ಸೌರಬ್, ರಾಘವೇಂದ್ರ, ಜಕ್ಕಪ್ಪ, ಶಂಕರ್ ಅಶ್ವತ್, ಲಕ್ಷ್ಮೀ ಸಿದ್ಧಾರ್ಥ, ಸೌಮ್ಯ, ಚಂದನ್ ಎಂ. ಗೌಡ ಇದ್ದಾರೆ.

ಲಾಲು ತಿಮ್ಮಯ್ಯ ಎಂ.ಪಿ, ಪೂವಣ್ಣ, ಎಂ.ಟಿ, ರಶೀಂ ಸುಬ್ಬಯ್ಯ ಎಂ.ಬಿ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಚಿತ್ರದ ಕಥೆ ಚೋನಂದಕಿ ಚಿನ್ನಯ್ಯ, ಸಂಭಾಷಣೆ ರಾಘವೇಂದ್ರ ವಿ. ಪ್ರಮೋದ್‍ನಾದ್, ಛಾಯಾಗ್ರಹಣ ಉದಯಶಂಕರ್, ಸಂಗೀತ ಜುಬಿನ್ ಪೌಲ್, ಸಾಹಸ ಥ್ರಿಲ್ಲರ್ ಮಂಜು, ಸಂಕಲನ ಸುರೇಶ್‍ಅರಸ್, ಸಾಹಿತ್ಯ ರಾಘವೇಂದ್ರ ಬಿ. ಕೃಷ್ಣ, ನೃತ್ಯ ನರಸಿಂಹ, ಸಹ ನಿರ್ದೇಶನ ಸಂದೇಶ್, ತಾಂತ್ರಿಕ ನಿರ್ದೇಶನ ನಾರಾಯಣದಾಸ್ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT