<p>ಸಚಿನ್ ಚಲುವರಾಯಸ್ವಾಮಿ, ಸಂಗೀತಾ ಭಟ್ ಜೋಡಿಯಾಗಿ ನಟಿಸಿರುವ ‘ಕಮಲ್ ಶ್ರೀದೇವಿ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಶ್ರೀದೇವಿ ಕೊಲೆ ಸುತ್ತ ನಡೆಯುವ ಈ ಕಥೆಗೆ ವಿ.ಎ ಸುನೀಲ್ ಕುಮಾರ್ ನಿರ್ದೇಶನವಿದೆ.</p>.<p>ಸಂಗೀತಾ ಭಟ್ ಚಿತ್ರದಲ್ಲಿ ವೇಶ್ಯೆಯಾಗಿ ಕಾಣಿಸಿಕೊಂಡಿದ್ದು ಆಕೆಯ ಕೊಲೆ ತನಿಖೆಯೇ ಚಿತ್ರದ ಕಥಾಹಂದರ. ಆಕೆ ನಿಜವಾಗಿಯೂ ಕೊಲೆಯಾಗಿದ್ದಾಳಾ ಅಥವಾ ಇಲ್ಲವೇ ಎಂಬುದೇ ಚಿತ್ರದಲ್ಲಿನ ಕುತೂಹಲಕಾರಿ ಸಂಗತಿ ಎಂದು ಟ್ರೇಲರ್ನಿಂದ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. </p>.<p>ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ನಡಿಯಲ್ಲಿ ಬಿ.ಕೆ ಧನಲಕ್ಷ್ಮೀ ನಿರ್ಮಿಸಿದ್ದು, ರಾಜವರ್ಧನ್ ಸಹ ನಿರ್ಮಾಣವಿದೆ. ಕಿಶೋರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ರಮೇಶ್ ಇಂದಿರಾ ಪ್ರಮುಖ ಪಾತ್ರದಲ್ಲಿದ್ದಾರೆ. </p>.<p>‘ವೇಶ್ಯೆಯಾಗಿ ಸಂಗೀತಾ ಭಟ್ ಅಭಿನಯ ಗಮನ ಸೆಳೆಯುತ್ತದೆ. ಅವರು ಎಲ್ಲಾ ಪ್ರಶಸ್ತಿಗಳಿಗೂ ಅರ್ಹ ಎಂಬಂತೆ ನಟಿಸಿದ್ದಾರೆ. ಸೆ.19ರಂದು ಚಿತ್ರ ತೆರೆಗೆ ಬರಲಿದೆ’ ಎಂದರು ರಾಜವರ್ಧನ್. </p>.<p>‘ಇದು ಗೆಲ್ಲುವ, ನಿಲ್ಲುವ ಕಂಟೆಂಟ್ ಹೊಂದಿರುವ ಸಿನಿಮಾ. ಇಲ್ಲಿನ ಕಾಡುವ ಪಾತ್ರಗಳೇ ಚಿತ್ರದ ಜೀವಾಳ. ಖಂಡಿತವಾಗಿಯೂ ಇದೊಂದು ಗುಣಮಟ್ಟದ ಸಿನಿಮಾ. ಚಿತ್ರಮಂದಿತರಗಳಲ್ಲಿಯೇ ನೋಡಿ ಹರಸಿ’ ಎಂದರು ಸಚಿನ್. </p>.<p>‘ಶ್ರೀದೇವಿ ಸಂಕಟ ನನ್ನ ವೃತ್ತಿ ಬದುಕಿಗೆ ತಿರುವು. ಈ ಪಾತ್ರ ರಿಸ್ಕ್ ಆದರೂ, ವೃತ್ತಿಪರತೆ ಮೀರಿಲ್ಲ. ಎಲ್ಲಿಯೂ ಮುಜುಗರ ಮೂಡಿಸದಂತೆ ವೇಶ್ಯೆ ಪಾತ್ರ ನಿಭಾಯಿಸಿದ್ದೇನೆ’ ಎಂದರು ಸಂಗೀತಾ ಭಟ್. <br /><br /></p>.<p>ಚಿತ್ರಕ್ಕೆ ಕೀರ್ತನ್ ಸಂಗೀತ, ನಾಗೇಶ್ ವಿ. ಆಚಾರ್ಯ ಛಾಯಾಚಿತ್ರಗ್ರಹಣ, ಜ್ಞಾನೇಶ್ ಬಿ. ಮಠದ್ ಸಂಕಲನವಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಚಿನ್ ಚಲುವರಾಯಸ್ವಾಮಿ, ಸಂಗೀತಾ ಭಟ್ ಜೋಡಿಯಾಗಿ ನಟಿಸಿರುವ ‘ಕಮಲ್ ಶ್ರೀದೇವಿ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಶ್ರೀದೇವಿ ಕೊಲೆ ಸುತ್ತ ನಡೆಯುವ ಈ ಕಥೆಗೆ ವಿ.ಎ ಸುನೀಲ್ ಕುಮಾರ್ ನಿರ್ದೇಶನವಿದೆ.</p>.<p>ಸಂಗೀತಾ ಭಟ್ ಚಿತ್ರದಲ್ಲಿ ವೇಶ್ಯೆಯಾಗಿ ಕಾಣಿಸಿಕೊಂಡಿದ್ದು ಆಕೆಯ ಕೊಲೆ ತನಿಖೆಯೇ ಚಿತ್ರದ ಕಥಾಹಂದರ. ಆಕೆ ನಿಜವಾಗಿಯೂ ಕೊಲೆಯಾಗಿದ್ದಾಳಾ ಅಥವಾ ಇಲ್ಲವೇ ಎಂಬುದೇ ಚಿತ್ರದಲ್ಲಿನ ಕುತೂಹಲಕಾರಿ ಸಂಗತಿ ಎಂದು ಟ್ರೇಲರ್ನಿಂದ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. </p>.<p>ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ನಡಿಯಲ್ಲಿ ಬಿ.ಕೆ ಧನಲಕ್ಷ್ಮೀ ನಿರ್ಮಿಸಿದ್ದು, ರಾಜವರ್ಧನ್ ಸಹ ನಿರ್ಮಾಣವಿದೆ. ಕಿಶೋರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ರಮೇಶ್ ಇಂದಿರಾ ಪ್ರಮುಖ ಪಾತ್ರದಲ್ಲಿದ್ದಾರೆ. </p>.<p>‘ವೇಶ್ಯೆಯಾಗಿ ಸಂಗೀತಾ ಭಟ್ ಅಭಿನಯ ಗಮನ ಸೆಳೆಯುತ್ತದೆ. ಅವರು ಎಲ್ಲಾ ಪ್ರಶಸ್ತಿಗಳಿಗೂ ಅರ್ಹ ಎಂಬಂತೆ ನಟಿಸಿದ್ದಾರೆ. ಸೆ.19ರಂದು ಚಿತ್ರ ತೆರೆಗೆ ಬರಲಿದೆ’ ಎಂದರು ರಾಜವರ್ಧನ್. </p>.<p>‘ಇದು ಗೆಲ್ಲುವ, ನಿಲ್ಲುವ ಕಂಟೆಂಟ್ ಹೊಂದಿರುವ ಸಿನಿಮಾ. ಇಲ್ಲಿನ ಕಾಡುವ ಪಾತ್ರಗಳೇ ಚಿತ್ರದ ಜೀವಾಳ. ಖಂಡಿತವಾಗಿಯೂ ಇದೊಂದು ಗುಣಮಟ್ಟದ ಸಿನಿಮಾ. ಚಿತ್ರಮಂದಿತರಗಳಲ್ಲಿಯೇ ನೋಡಿ ಹರಸಿ’ ಎಂದರು ಸಚಿನ್. </p>.<p>‘ಶ್ರೀದೇವಿ ಸಂಕಟ ನನ್ನ ವೃತ್ತಿ ಬದುಕಿಗೆ ತಿರುವು. ಈ ಪಾತ್ರ ರಿಸ್ಕ್ ಆದರೂ, ವೃತ್ತಿಪರತೆ ಮೀರಿಲ್ಲ. ಎಲ್ಲಿಯೂ ಮುಜುಗರ ಮೂಡಿಸದಂತೆ ವೇಶ್ಯೆ ಪಾತ್ರ ನಿಭಾಯಿಸಿದ್ದೇನೆ’ ಎಂದರು ಸಂಗೀತಾ ಭಟ್. <br /><br /></p>.<p>ಚಿತ್ರಕ್ಕೆ ಕೀರ್ತನ್ ಸಂಗೀತ, ನಾಗೇಶ್ ವಿ. ಆಚಾರ್ಯ ಛಾಯಾಚಿತ್ರಗ್ರಹಣ, ಜ್ಞಾನೇಶ್ ಬಿ. ಮಠದ್ ಸಂಕಲನವಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>