<p><strong>ಬೆಂಗಳೂರು: </strong>2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೆ ‘ಬಿಂಬ’ ಚಿತ್ರವನ್ನು ಆಯ್ಕೆ ಮಾಡದ ಬಗ್ಗೆ ನಟ ಶ್ರೀನಿವಾಸ ಪ್ರಭು ಮತ್ತು ನಿರ್ದೇಶಕ ಜಿ. ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p>‘ಪ್ರಶಸ್ತಿಗೆ ಆಯ್ಕೆ ಮಾಡುವ ಸಮಿತಿಯ ಕೆಲವರು ಒಳ್ಳೆಯ ಅನ್ನ ತಿನ್ನುವ ಕೆಲಸ ಮಾಡಿಲ್ಲ, ಗೊಬ್ಬರ ತಿನ್ನುವ ಕೆಲಸ ಮಾಡಿದ್ದಾರೆ’ ಎಂದು ಮೂರ್ತಿ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.</p>.<p>‘ಪ್ರಶಸ್ತಿಗೆ ಚಲನಚಿತ್ರಗಳನ್ನು, ಕಲಾವಿದರನ್ನು ಆಯ್ಕೆ ಮಾಡುವ ಸಮಿತಿಯು ಬಿಂಬ ಸಿನಿಮಾವನ್ನು ಏಕೆ ಪರಿಗಣಿಸಲಿಲ್ಲ? ವಿಶ್ವದಲ್ಲಿ ಯಾರೂ ಇಂಥದ್ದೊಂದು ಸಿನಿಮಾ ಮಾಡಿಲ್ಲ. ಸಿನಿಮಾವನ್ನು ಹೇಗೆ ನೋಡಬೇಕು ಎಂಬ ಅರಿವೇ ಸಮಿತಿಗೆ ಇಲ್ಲ’ ಎಂದು ಮೂರ್ತಿ ದೂರಿದರು.</p>.<p>‘ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿನಿಮಾಗಳನ್ನು ಆಯ್ಕೆ ಮಾಡುವಾಗ ಸಂಸ ಅವರ ಬಗ್ಗೆ ಗೊತ್ತಿಲ್ಲದವರೇ ನಮ್ಮ ಸಿನಿಮಾ ವೀಕ್ಷಿಸಲು ಬಂದಿದ್ದರು. 2018ನೇ ಸಾಲಿನ ಪ್ರಶಸ್ತಿಗಳಿಗೆ ಆಯ್ಕೆಯಾದವರ ಬಗ್ಗೆ ನಮಗೆ ತಕರಾರು ಇಲ್ಲ. ಅಖಿಲ ಭಾರತ ಮಟ್ಟದಲ್ಲಿ ದಾಖಲೆ ಬರೆದ ಈ ಚಿತ್ರಕ್ಕೆ ಅವರೇ ಕರೆದು ಮನ್ನಣೆ ನೀಡಬೇಕಿತ್ತು. ಆದರೆ, ಚಿತ್ರವನ್ನು ಸ್ಮರಿಸುವ ಸೌಜನ್ಯ ಕೂಡ ಅವರಲ್ಲಿ ಇಲ್ಲ’ ಎಂದು ಪ್ರಭು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ನಮ್ಮ ಸಿನಿಮಾ ಅಷ್ಟೊಂದು ನಿಕೃಷ್ಟವೇ? ಒಂದು ಒಳ್ಳೆಯ ಚಿತ್ರಕ್ಕೆ ಬೆನ್ನು ತಟ್ಟಲು ಕೂಡ ಆಗದೇ? ಪ್ರಯೋಗಶೀಲತೆಗೆ ಬೆಲೆ ಇಲ್ಲವೇ? ಈ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದ್ದಿದ್ದರೆ ಸಂಸ ಅವರ ಬಗ್ಗೆ ಒಂದಿಷ್ಟು ಜನರಿಗೆ ಗೊತ್ತಾಗುತ್ತಿತ್ತು. ಸಂಸ ಅವರ ಕಾರಣಕ್ಕಾಗಿ ನಾವು ಪ್ರಶಸ್ತಿಗೆ ಆಸೆಪಟ್ಟೆವು. ಆಯ್ಕೆ ಸಮಿತಿಯಲ್ಲಿ ಇದ್ದ ಎಷ್ಟು ಜನರಿಗೆ ಸಂಸ ಬಗ್ಗೆ ಗೊತ್ತು ಎಂಬುದನ್ನು ನೋಡಬೇಕು’ ಎಂದು ವ್ಯಂಗ್ಯವಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೆ ‘ಬಿಂಬ’ ಚಿತ್ರವನ್ನು ಆಯ್ಕೆ ಮಾಡದ ಬಗ್ಗೆ ನಟ ಶ್ರೀನಿವಾಸ ಪ್ರಭು ಮತ್ತು ನಿರ್ದೇಶಕ ಜಿ. ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p>‘ಪ್ರಶಸ್ತಿಗೆ ಆಯ್ಕೆ ಮಾಡುವ ಸಮಿತಿಯ ಕೆಲವರು ಒಳ್ಳೆಯ ಅನ್ನ ತಿನ್ನುವ ಕೆಲಸ ಮಾಡಿಲ್ಲ, ಗೊಬ್ಬರ ತಿನ್ನುವ ಕೆಲಸ ಮಾಡಿದ್ದಾರೆ’ ಎಂದು ಮೂರ್ತಿ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.</p>.<p>‘ಪ್ರಶಸ್ತಿಗೆ ಚಲನಚಿತ್ರಗಳನ್ನು, ಕಲಾವಿದರನ್ನು ಆಯ್ಕೆ ಮಾಡುವ ಸಮಿತಿಯು ಬಿಂಬ ಸಿನಿಮಾವನ್ನು ಏಕೆ ಪರಿಗಣಿಸಲಿಲ್ಲ? ವಿಶ್ವದಲ್ಲಿ ಯಾರೂ ಇಂಥದ್ದೊಂದು ಸಿನಿಮಾ ಮಾಡಿಲ್ಲ. ಸಿನಿಮಾವನ್ನು ಹೇಗೆ ನೋಡಬೇಕು ಎಂಬ ಅರಿವೇ ಸಮಿತಿಗೆ ಇಲ್ಲ’ ಎಂದು ಮೂರ್ತಿ ದೂರಿದರು.</p>.<p>‘ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿನಿಮಾಗಳನ್ನು ಆಯ್ಕೆ ಮಾಡುವಾಗ ಸಂಸ ಅವರ ಬಗ್ಗೆ ಗೊತ್ತಿಲ್ಲದವರೇ ನಮ್ಮ ಸಿನಿಮಾ ವೀಕ್ಷಿಸಲು ಬಂದಿದ್ದರು. 2018ನೇ ಸಾಲಿನ ಪ್ರಶಸ್ತಿಗಳಿಗೆ ಆಯ್ಕೆಯಾದವರ ಬಗ್ಗೆ ನಮಗೆ ತಕರಾರು ಇಲ್ಲ. ಅಖಿಲ ಭಾರತ ಮಟ್ಟದಲ್ಲಿ ದಾಖಲೆ ಬರೆದ ಈ ಚಿತ್ರಕ್ಕೆ ಅವರೇ ಕರೆದು ಮನ್ನಣೆ ನೀಡಬೇಕಿತ್ತು. ಆದರೆ, ಚಿತ್ರವನ್ನು ಸ್ಮರಿಸುವ ಸೌಜನ್ಯ ಕೂಡ ಅವರಲ್ಲಿ ಇಲ್ಲ’ ಎಂದು ಪ್ರಭು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ನಮ್ಮ ಸಿನಿಮಾ ಅಷ್ಟೊಂದು ನಿಕೃಷ್ಟವೇ? ಒಂದು ಒಳ್ಳೆಯ ಚಿತ್ರಕ್ಕೆ ಬೆನ್ನು ತಟ್ಟಲು ಕೂಡ ಆಗದೇ? ಪ್ರಯೋಗಶೀಲತೆಗೆ ಬೆಲೆ ಇಲ್ಲವೇ? ಈ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದ್ದಿದ್ದರೆ ಸಂಸ ಅವರ ಬಗ್ಗೆ ಒಂದಿಷ್ಟು ಜನರಿಗೆ ಗೊತ್ತಾಗುತ್ತಿತ್ತು. ಸಂಸ ಅವರ ಕಾರಣಕ್ಕಾಗಿ ನಾವು ಪ್ರಶಸ್ತಿಗೆ ಆಸೆಪಟ್ಟೆವು. ಆಯ್ಕೆ ಸಮಿತಿಯಲ್ಲಿ ಇದ್ದ ಎಷ್ಟು ಜನರಿಗೆ ಸಂಸ ಬಗ್ಗೆ ಗೊತ್ತು ಎಂಬುದನ್ನು ನೋಡಬೇಕು’ ಎಂದು ವ್ಯಂಗ್ಯವಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>