ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗೀತಾ ಚಿತ್ರದ, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಡಿರುವ ‘ಕನ್ನಡ ಕನ್ನಡ ಕನ್ನಡವೇ ಸತ್ಯ’ ಕನ್ನಡ ಜಾಗೃತಿ ಹಾಗೂ ಹೋರಾಟದ ಲಿರಿಕಲ್ಹಾಡನ್ನು ಚಿತ್ರತಂಡವು ಶನಿವಾರ ಬಿಡುಗಡೆ ಮಾಡಿದೆ. ಚಿತ್ರರಂಗದ ಹಲವು ನಟರು ಈ ಹಾಡಿಗೆ ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ನೆಟ್ಟಿಗರು ಹಾಡನ್ನು ಇಷ್ಟಪಟ್ಟು, ಮೆಚ್ಚುಗೆಯ ಮಾತುಗಳನ್ನು ಟ್ವೀಟ್ ಮಾಡಿದ್ದಾರೆ.
Thank you Ramesh sir 😊https://t.co/WMruQAvLgu#Geetha pic.twitter.com/n1gmD5Huwf
— Ganesh (@Official_Ganesh) August 31, 2019
ಈ ಹಾಡಿನ ಸಾಹಿತ್ಯವನ್ನು ನಿರ್ದೇಶಕಸಂತೋಷ್ ಆನಂದ್ ರಾಮ್ ಬರೆದಿದ್ದು, ಪುನೀತ್ ರಾಜ್ ಕುಮಾರ್ ಕಂಠ ಮಾಧುರ್ಯದಲ್ಲಿ ಹಾಡು ಸೊಗಸಾಗಿ ಮೂಡಿಬಂದಿದೆ. ಗೋಕಾಕ ಚಳವಳಿಯ ನೆನಪು ಮರುಕಳಿಹಿಸುವಂತೆ ಮಾಡುವ ಈ ಹಾಡನ್ನುಚಿತ್ರ ತಂಡವು ಸ್ವಾಭಿಮಾನಿ ಕನ್ನಡಿಗರಿಗೆ ಅರ್ಪಣೆ ಮಾಡಿದೆ.
‘ಕನ್ನಡ ಕನ್ನಡ ಕನ್ನಡವೇ ಸತ್ಯ..ಕನ್ನಡ ಕನ್ನಡ ಕನ್ನಡವೇ ನಿತ್ಯ...ಕನ್ನಡದ ಗರಿಮೆ, ಹಿರಿಮೆ ಸಾರುತ್ತ, ಮೈ ನವಿರೇಳಿಸುವ ಈ ಹಾಡು ನಮ್ಮೆಲ್ಲಾ ಕೆಚ್ಚೆದೆಯ ಕನ್ನಡ ಹೋರಾಟಗಾರರಿಗೆ, ಗೋಕಾಕ ಹೋರಾಟದಲ್ಲಿ ಹೋರಾಡಿದ ಕಲಿಗಳಿಗೆ, ಸ್ವಾಭಿಮಾನಿ ಕನ್ನಡಿಗ ಬಂಧುಗಳಿಗೆ ಅರ್ಪಣೆ’ ಮಾಡಿದ್ದೇವೆ ಎಂದು ನಟ ಗೋಲ್ಡಾನ್ ಸ್ಟಾರ್ ಗಣೇಶ್ ಟ್ವೀಟ್ ಮಾಡಿದ್ದಾರೆ.
ನಟರಾದ ರಮೇಶ್ ಅರವಿಂದ್, ಪ್ರೇಮ್, ಧೀರೇನ್, ಬಿಗ್ಬಾಸ್ ವಿಜೇತ ಪ್ರಥಮ್, ನಿರ್ದೇಶಕ ನಾಗಶೇಖರ್,ಮಯೂರ್ ರಾಘವೇಂದ್ರ, ಪವನ್ ಒಡೆಯರ್, ಪ್ರಶಾಂತ್ ರೈ, ವಿಜಯ್ ಕಿರಗಂದೂರ್ ಸೇರಿದಂತೆ ಚಿತ್ರರಂಗದ ಹಲವು ಮಂದಿ ಈ ಹಾಡನ್ನು ಮೆಚ್ಚಿ, ಈ ಹಾಡನ್ನು ಆಲಿಸುವಂತೆ ವೀಕ್ಷಕರಿಗೂ ಮನವಿ ಮಾಡಿದ್ದಾರೆ.
ಲಿಂಕ್:https://youtu.be/9lWV_8lbXmE
Thank you Pawan 😊https://t.co/WMruQAvLgu#Geetha pic.twitter.com/IN6MzT8Oj6
— Ganesh (@Official_Ganesh) August 31, 2019
Thank you my pailwan 😊https://t.co/eVFAhhCmz7#Geetha pic.twitter.com/jfImo4JeJt
— Ganesh (@Official_Ganesh) August 31, 2019
Thank you chethu😊https://t.co/eVFAhhCmz7#Geetha pic.twitter.com/SQhmPDgXCU
— Ganesh (@Official_Ganesh) August 31, 2019
Thank you preethu 😊https://t.co/eVFAhhCmz7#Geetha pic.twitter.com/jAlWSUhcnt
— Ganesh (@Official_Ganesh) August 31, 2019
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.