<p><a href="https://www.prajavani.net/tags/golden-star-ganesh" target="_blank">ಗೋಲ್ಡನ್ ಸ್ಟಾರ್ ಗಣೇಶ್</a> ನಟನೆಯ ಗೀತಾ ಚಿತ್ರದ, ಪವರ್ ಸ್ಟಾರ್ <a href="https://www.prajavani.net/tags/punith-rajkumar" target="_blank">ಪುನೀತ್ ರಾಜ್ಕುಮಾರ್</a> ಹಾಡಿರುವ ‘ಕನ್ನಡ ಕನ್ನಡ ಕನ್ನಡವೇ ಸತ್ಯ’ ಕನ್ನಡ ಜಾಗೃತಿ ಹಾಗೂ ಹೋರಾಟದ ಲಿರಿಕಲ್ಹಾಡನ್ನು ಚಿತ್ರತಂಡವು ಶನಿವಾರ ಬಿಡುಗಡೆ ಮಾಡಿದೆ. ಚಿತ್ರರಂಗದ ಹಲವು ನಟರು ಈ ಹಾಡಿಗೆ ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ನೆಟ್ಟಿಗರು ಹಾಡನ್ನು ಇಷ್ಟಪಟ್ಟು, ಮೆಚ್ಚುಗೆಯ ಮಾತುಗಳನ್ನು ಟ್ವೀಟ್ ಮಾಡಿದ್ದಾರೆ.</p>.<p>ಈ ಹಾಡಿನ ಸಾಹಿತ್ಯವನ್ನು ನಿರ್ದೇಶಕಸಂತೋಷ್ ಆನಂದ್ ರಾಮ್ ಬರೆದಿದ್ದು, ಪುನೀತ್ ರಾಜ್ ಕುಮಾರ್ ಕಂಠ ಮಾಧುರ್ಯದಲ್ಲಿ ಹಾಡು ಸೊಗಸಾಗಿ ಮೂಡಿಬಂದಿದೆ. ಗೋಕಾಕ ಚಳವಳಿಯ ನೆನಪು ಮರುಕಳಿಹಿಸುವಂತೆ ಮಾಡುವ ಈ ಹಾಡನ್ನುಚಿತ್ರ ತಂಡವು ಸ್ವಾಭಿಮಾನಿ ಕನ್ನಡಿಗರಿಗೆ ಅರ್ಪಣೆ ಮಾಡಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/entertainment/cinema/geetha-659605.html" target="_blank">ಗೀತಾ ಚಿತ್ರದ ಹಾಡು ಸ್ವಾಭಿಮಾನಿ ಕನ್ನಡಿಗರಿಗೆ ಅರ್ಪಣೆ</a></p>.<p>‘ಕನ್ನಡ ಕನ್ನಡ ಕನ್ನಡವೇ ಸತ್ಯ..ಕನ್ನಡ ಕನ್ನಡ ಕನ್ನಡವೇ ನಿತ್ಯ...ಕನ್ನಡದ ಗರಿಮೆ, ಹಿರಿಮೆ ಸಾರುತ್ತ, ಮೈ ನವಿರೇಳಿಸುವ ಈ ಹಾಡು ನಮ್ಮೆಲ್ಲಾ ಕೆಚ್ಚೆದೆಯ ಕನ್ನಡ ಹೋರಾಟಗಾರರಿಗೆ, ಗೋಕಾಕ ಹೋರಾಟದಲ್ಲಿ ಹೋರಾಡಿದ ಕಲಿಗಳಿಗೆ, ಸ್ವಾಭಿಮಾನಿ ಕನ್ನಡಿಗ ಬಂಧುಗಳಿಗೆ ಅರ್ಪಣೆ’ ಮಾಡಿದ್ದೇವೆ ಎಂದು ನಟ ಗೋಲ್ಡಾನ್ ಸ್ಟಾರ್ ಗಣೇಶ್ ಟ್ವೀಟ್ ಮಾಡಿದ್ದಾರೆ.</p>.<p>ನಟರಾದ ರಮೇಶ್ ಅರವಿಂದ್, ಪ್ರೇಮ್, ಧೀರೇನ್, ಬಿಗ್ಬಾಸ್ ವಿಜೇತ ಪ್ರಥಮ್, ನಿರ್ದೇಶಕ ನಾಗಶೇಖರ್,ಮಯೂರ್ ರಾಘವೇಂದ್ರ, ಪವನ್ ಒಡೆಯರ್, ಪ್ರಶಾಂತ್ ರೈ, ವಿಜಯ್ ಕಿರಗಂದೂರ್ ಸೇರಿದಂತೆ ಚಿತ್ರರಂಗದ ಹಲವು ಮಂದಿ ಈ ಹಾಡನ್ನು ಮೆಚ್ಚಿ, ಈ ಹಾಡನ್ನು ಆಲಿಸುವಂತೆ ವೀಕ್ಷಕರಿಗೂ ಮನವಿ ಮಾಡಿದ್ದಾರೆ.</p>.<p>ಲಿಂಕ್:https://youtu.be/9lWV_8lbXmE</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><a href="https://www.prajavani.net/tags/golden-star-ganesh" target="_blank">ಗೋಲ್ಡನ್ ಸ್ಟಾರ್ ಗಣೇಶ್</a> ನಟನೆಯ ಗೀತಾ ಚಿತ್ರದ, ಪವರ್ ಸ್ಟಾರ್ <a href="https://www.prajavani.net/tags/punith-rajkumar" target="_blank">ಪುನೀತ್ ರಾಜ್ಕುಮಾರ್</a> ಹಾಡಿರುವ ‘ಕನ್ನಡ ಕನ್ನಡ ಕನ್ನಡವೇ ಸತ್ಯ’ ಕನ್ನಡ ಜಾಗೃತಿ ಹಾಗೂ ಹೋರಾಟದ ಲಿರಿಕಲ್ಹಾಡನ್ನು ಚಿತ್ರತಂಡವು ಶನಿವಾರ ಬಿಡುಗಡೆ ಮಾಡಿದೆ. ಚಿತ್ರರಂಗದ ಹಲವು ನಟರು ಈ ಹಾಡಿಗೆ ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ನೆಟ್ಟಿಗರು ಹಾಡನ್ನು ಇಷ್ಟಪಟ್ಟು, ಮೆಚ್ಚುಗೆಯ ಮಾತುಗಳನ್ನು ಟ್ವೀಟ್ ಮಾಡಿದ್ದಾರೆ.</p>.<p>ಈ ಹಾಡಿನ ಸಾಹಿತ್ಯವನ್ನು ನಿರ್ದೇಶಕಸಂತೋಷ್ ಆನಂದ್ ರಾಮ್ ಬರೆದಿದ್ದು, ಪುನೀತ್ ರಾಜ್ ಕುಮಾರ್ ಕಂಠ ಮಾಧುರ್ಯದಲ್ಲಿ ಹಾಡು ಸೊಗಸಾಗಿ ಮೂಡಿಬಂದಿದೆ. ಗೋಕಾಕ ಚಳವಳಿಯ ನೆನಪು ಮರುಕಳಿಹಿಸುವಂತೆ ಮಾಡುವ ಈ ಹಾಡನ್ನುಚಿತ್ರ ತಂಡವು ಸ್ವಾಭಿಮಾನಿ ಕನ್ನಡಿಗರಿಗೆ ಅರ್ಪಣೆ ಮಾಡಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/entertainment/cinema/geetha-659605.html" target="_blank">ಗೀತಾ ಚಿತ್ರದ ಹಾಡು ಸ್ವಾಭಿಮಾನಿ ಕನ್ನಡಿಗರಿಗೆ ಅರ್ಪಣೆ</a></p>.<p>‘ಕನ್ನಡ ಕನ್ನಡ ಕನ್ನಡವೇ ಸತ್ಯ..ಕನ್ನಡ ಕನ್ನಡ ಕನ್ನಡವೇ ನಿತ್ಯ...ಕನ್ನಡದ ಗರಿಮೆ, ಹಿರಿಮೆ ಸಾರುತ್ತ, ಮೈ ನವಿರೇಳಿಸುವ ಈ ಹಾಡು ನಮ್ಮೆಲ್ಲಾ ಕೆಚ್ಚೆದೆಯ ಕನ್ನಡ ಹೋರಾಟಗಾರರಿಗೆ, ಗೋಕಾಕ ಹೋರಾಟದಲ್ಲಿ ಹೋರಾಡಿದ ಕಲಿಗಳಿಗೆ, ಸ್ವಾಭಿಮಾನಿ ಕನ್ನಡಿಗ ಬಂಧುಗಳಿಗೆ ಅರ್ಪಣೆ’ ಮಾಡಿದ್ದೇವೆ ಎಂದು ನಟ ಗೋಲ್ಡಾನ್ ಸ್ಟಾರ್ ಗಣೇಶ್ ಟ್ವೀಟ್ ಮಾಡಿದ್ದಾರೆ.</p>.<p>ನಟರಾದ ರಮೇಶ್ ಅರವಿಂದ್, ಪ್ರೇಮ್, ಧೀರೇನ್, ಬಿಗ್ಬಾಸ್ ವಿಜೇತ ಪ್ರಥಮ್, ನಿರ್ದೇಶಕ ನಾಗಶೇಖರ್,ಮಯೂರ್ ರಾಘವೇಂದ್ರ, ಪವನ್ ಒಡೆಯರ್, ಪ್ರಶಾಂತ್ ರೈ, ವಿಜಯ್ ಕಿರಗಂದೂರ್ ಸೇರಿದಂತೆ ಚಿತ್ರರಂಗದ ಹಲವು ಮಂದಿ ಈ ಹಾಡನ್ನು ಮೆಚ್ಚಿ, ಈ ಹಾಡನ್ನು ಆಲಿಸುವಂತೆ ವೀಕ್ಷಕರಿಗೂ ಮನವಿ ಮಾಡಿದ್ದಾರೆ.</p>.<p>ಲಿಂಕ್:https://youtu.be/9lWV_8lbXmE</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>