ಮಂಡಳಿಯ ಅಧ್ಯಕ್ಷ ಡಿ.ಆರ್.ಜೈರಾಜ್ ನೇತೃತ್ವದ ನಿಯೋಗ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ, ‘ಕೋವಿಡ್ ಸಂಬಂಧಿಸಿದ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು. ಚಿತ್ರಮಂದಿರಗಳ ಒಳಗೆ ಹವಾನಿಯಂತ್ರಕ ವ್ಯವಸ್ಥೆಯ ಅವಶ್ಯಕತೆ, ಒಂದು ವೇಳೆ ಹವಾನಿಯಂತ್ರಣ ಇಲ್ಲವಾದರೆ ಅದರಿಂದಾಗುವ ಪರಿಣಾಮಗಳ ಬಗೆಗೂ ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಲಾಯಿತು’ ಎಂದು ನಿಯೋಗದಲ್ಲಿದ್ದ ವಾಣಿಜ್ಯಮಂಡಳಿ ಕಾರ್ಯದರ್ಶಿ ಎನ್.ಎಂ. ಸುರೇಶ್ ಮಾಹಿತಿ ನೀಡಿದರು.