<p>ಧ್ರುವ ಸರ್ಜಾ ಅಭಿನಯಿಸಿ, ‘ಜೋಗಿ’ ಪ್ರೇಮ್ ನಿರ್ದೇಶಿಸಿರುವ ಬಹುನಿರೀಕ್ಷಿತ ‘ಕೆಡಿ’ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. ಬಹುತಾರೆಯರನ್ನು ಹೊಂದಿರುವ ಈ ಚಿತ್ರದಲ್ಲಿ ಪ್ರೇಮ್ ಬೆಂಗಳೂರಿನ ರಕ್ತಸಿಕ್ತ ಜಗತ್ತಿನ ಕಥೆಯನ್ನು ಹೇಳಲು ಹೊರಟಿದ್ದಾರೆ.</p><p>ಕಥೆಯ ನಾಯಕ ಕಾಳಿದಾಸ ವಿರೋಧಿಗಳ ಪಡೆಯನ್ನು ಹೊಡೆದುರುಳಿಸುವುದೇ ಚಿತ್ರದ ಮುಖ್ಯಕಥೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ರಕ್ತ ಬಸಿಯುತ್ತಿರುವ ಕತ್ತಿಯೊಂದಿಗೆ ನಾಯಕ ಧ್ರುವ ಸರ್ಜಾ ಪ್ರವೇಶಿಸಿದ್ದು, ಟೀಸರ್ ತುಂಬ ಆ್ಯಕ್ಷನ್ ದೃಶ್ಯಗಳು ಮತ್ತು ರಕ್ತವೇ ಕಾಣಿಸುತ್ತದೆ. </p><p>ಢಾಕ್ ದೇವನಾಗಿ ಸಂಜಯ್ ದತ್ ನಟಿಸಿದ್ದಾರೆ. ಇವರು ಕಥೆಯ ಪ್ರಮುಖ ಖಳನಾಯಕ. ರವಿಚಂದ್ರನ್ ಅಣ್ಣಯ್ಯಪ್ಪನಾಗಿ ಕಾಣಿಸಿಕೊಂಡರೆ, ರಮೇಶ್ ಅರವಿಂದ್ ಧರ್ಮನ ಪಾತ್ರದಲ್ಲಿದ್ದಾರೆ. ಮಹಾಲಕ್ಷ್ಮಿಯಾಗಿ ನಾಯಕಿ ರೀಷ್ಮಾ ನಾಣಯ್ಯ ನಟಿಸಿದ್ದು, ಸತ್ಯವತಿ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ಇದ್ದಾರೆ.</p><p>1980ರ ದಶಕದಲ್ಲಿನ ಬೆಂಗಳೂರಿನ ರೌಡಿಸಂ ಕಥೆಯನ್ನು ಚಿತ್ರ ಹೊಂದಿದೆ. ‘ಅವರಿಬ್ಬರದ್ದು ರಕ್ತ ಸಂಬಂಧ. ಆದರೆ ರಕ್ತ ಮೈಯಲ್ಲಿ ಹರಿಯುವುದಿಲ್ಲ’ ಎಂಬ ಡೈಲಾಗ್ ನಾಯಕ ಮತ್ತು ಖಳನಾಯಕನ ನಡುವಿನ ಕಥೆಯನ್ನು ಹೇಳುತ್ತಿದೆ.</p><p>ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, ವಿಲಿಯಂ ಡೇವಿಡ್ ಛಾಯಾಚಿತ್ರಗ್ರಹಣ, ಸಂಕೇತ್ ಆಚಾರ್ ಸಂಕಲನವಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧ್ರುವ ಸರ್ಜಾ ಅಭಿನಯಿಸಿ, ‘ಜೋಗಿ’ ಪ್ರೇಮ್ ನಿರ್ದೇಶಿಸಿರುವ ಬಹುನಿರೀಕ್ಷಿತ ‘ಕೆಡಿ’ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. ಬಹುತಾರೆಯರನ್ನು ಹೊಂದಿರುವ ಈ ಚಿತ್ರದಲ್ಲಿ ಪ್ರೇಮ್ ಬೆಂಗಳೂರಿನ ರಕ್ತಸಿಕ್ತ ಜಗತ್ತಿನ ಕಥೆಯನ್ನು ಹೇಳಲು ಹೊರಟಿದ್ದಾರೆ.</p><p>ಕಥೆಯ ನಾಯಕ ಕಾಳಿದಾಸ ವಿರೋಧಿಗಳ ಪಡೆಯನ್ನು ಹೊಡೆದುರುಳಿಸುವುದೇ ಚಿತ್ರದ ಮುಖ್ಯಕಥೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ರಕ್ತ ಬಸಿಯುತ್ತಿರುವ ಕತ್ತಿಯೊಂದಿಗೆ ನಾಯಕ ಧ್ರುವ ಸರ್ಜಾ ಪ್ರವೇಶಿಸಿದ್ದು, ಟೀಸರ್ ತುಂಬ ಆ್ಯಕ್ಷನ್ ದೃಶ್ಯಗಳು ಮತ್ತು ರಕ್ತವೇ ಕಾಣಿಸುತ್ತದೆ. </p><p>ಢಾಕ್ ದೇವನಾಗಿ ಸಂಜಯ್ ದತ್ ನಟಿಸಿದ್ದಾರೆ. ಇವರು ಕಥೆಯ ಪ್ರಮುಖ ಖಳನಾಯಕ. ರವಿಚಂದ್ರನ್ ಅಣ್ಣಯ್ಯಪ್ಪನಾಗಿ ಕಾಣಿಸಿಕೊಂಡರೆ, ರಮೇಶ್ ಅರವಿಂದ್ ಧರ್ಮನ ಪಾತ್ರದಲ್ಲಿದ್ದಾರೆ. ಮಹಾಲಕ್ಷ್ಮಿಯಾಗಿ ನಾಯಕಿ ರೀಷ್ಮಾ ನಾಣಯ್ಯ ನಟಿಸಿದ್ದು, ಸತ್ಯವತಿ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ಇದ್ದಾರೆ.</p><p>1980ರ ದಶಕದಲ್ಲಿನ ಬೆಂಗಳೂರಿನ ರೌಡಿಸಂ ಕಥೆಯನ್ನು ಚಿತ್ರ ಹೊಂದಿದೆ. ‘ಅವರಿಬ್ಬರದ್ದು ರಕ್ತ ಸಂಬಂಧ. ಆದರೆ ರಕ್ತ ಮೈಯಲ್ಲಿ ಹರಿಯುವುದಿಲ್ಲ’ ಎಂಬ ಡೈಲಾಗ್ ನಾಯಕ ಮತ್ತು ಖಳನಾಯಕನ ನಡುವಿನ ಕಥೆಯನ್ನು ಹೇಳುತ್ತಿದೆ.</p><p>ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, ವಿಲಿಯಂ ಡೇವಿಡ್ ಛಾಯಾಚಿತ್ರಗ್ರಹಣ, ಸಂಕೇತ್ ಆಚಾರ್ ಸಂಕಲನವಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>