ಹೈದರಾಬಾದ್: 29ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕಿಯಾರ ಅಡ್ವಾಣಿಗೆ ಖ್ಯಾತ ನಿರ್ದೇಶಕ ಶಂಕರ್ ಸಿಹಿ ಸುದ್ದಿ ಕೊಟ್ಟಿದ್ದಾರೆ.
ರಾಮ್ ಚರಣ್ ನಾಯಕರಾಗಲಿರುವ ಹೊಸ ಚಿತ್ರಕ್ಕೆ ಶಂಕರ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ನಾಯಕಿಯಾಗಿ ಕಿಯಾರ ಅಡ್ವಾಣಿ ಆಯ್ಕೆಯಾಗಿದ್ದಾರೆ ಎಂದುವೆಂಕಟೇಶ್ವರ ಕ್ರಿಯೇಷನ್ಸ್ ಸಿನಿಮಾ ನಿರ್ಮಾಣ ಸಂಸ್ಥೆ ಟ್ವೀಟ್ ಮೂಲಕ ತಿಳಿಸಿದೆ.
Joining us on this super exciting journey is the talented and gorgeous @advani_kiara !
— Sri Venkateswara Creations (@SVC_official) July 31, 2021
'ಇದು ನನಗೆ ಸಿಕ್ಕ ಅತ್ಯುತ್ತಮ ಬರ್ತಡೇ ಗಿಫ್ಟ್ಗಳಲ್ಲಿ ಒಂದು. ಇದರಲ್ಲಿ ನಾನು ನಟಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಈ ಸಿನಿಮಾದ ಚಿತ್ರೀಕರಣದ ಆರಂಭಕ್ಕಾಗಿ ಕಾಯುತ್ತಿರುವೆ ಎಂದು ಕಿಯಾರ ಹೇಳಿದ್ದಾರೆ.
ಕಿಯಾರಾ ಅಡ್ವಾಣಿ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದು 'ಭರತ್ ಅನೇ ನೇನು' ಚಿತ್ರದ ಮೂಲಕ. ಇದರಲ್ಲಿ ಪ್ರಿನ್ಸ್ ಮಹೇಶ್ ಬಾಬುಗೆ ಜೋಡಿಯಾಗಿ ಅಭಿನಯಿಸಿದ್ದರು. ಈ ಚಿತ್ರ ಬಾಕ್ಸ್ ಆಫೀಸ್ ಹಿಟ್ ಆಗಿತ್ತು.
ಟಾಲಿವುಡ್ ಸೇರಿದಂತೆ ಕಿಯಾರ್ ಬಾಲಿವುಡ್ನಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ಈಗ ಅವರ ಕೈಯಲ್ಲಿ ಐದು ಸಿನಿಮಾಗಳಿವೆ. ಕಿಯಾರ ಅವರ 29ನೇ ವರ್ಷದ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಸೇರಿದಂತೆ ಟಾಲಿವುಡ್ ಹಾಗೂ ಬಾಲಿವುಡ್ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳನ್ನು ಕೋರುತ್ತಿದ್ದಾರೆ.