<figcaption>""</figcaption>.<p>‘ಬಂದ್ರಾ ತಗೋಳಿ, ನಾಣ್ಯ ಕೊಡಿ ವಾಪಾಸ್, ಅದೇನ್ ಒಳ್ಳೇದಾಗುತ್ತೋ ನೋಡೋಣ’,<br />‘ಇವರೆಲ್ಲ ಯಾಕ್ ಕೆಲಸ ಮಾಡಲ್ಲ? ಭಿಕ್ಷೆ ಬೇಡಿದ್ರೆ ದುಡ್ಡು ಜಾಸ್ತಿ ಬರುತ್ತೆ ಅಂತ ಇರ್ಬೇಕು’,<br />‘ಪಾಪ ಇವ್ರು ಕೆಲಸ ಮಾಡೋಣ ಅಂದ್ರು ಯಾರು ಕೆಲಸ ಕೊಡಲ್ಲ’,<br />‘ಹೇ ದುಡ್ಡು ಇಲ್ಲ ಏನೂ ಇಲ್ಲ ಹೋಗು ಮುಂದೆ ಹೋಗು’.</p>.<p>– ಇಂಥ ಸಂಭಾಷಣೆಗಳು ನಿತ್ಯ ರೈಲುಗಾಡಿಯಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ, ರಸ್ತೆಯಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ ಕೇಳಿಯೇ ಕೇಳಿರುತ್ತೀರಿ. ನಮ್ಮ ಸಮಾಜ ಮಂಗಳಮುಖಿಯರನ್ನು ನೋಡುವ, ನಡೆಸಿಕೊಳ್ಳುವ ರೀತಿಯನ್ನು ಈ ಮೇಲಿನ ಸಂಭಾಷಣೆಗಳೇ ಹೇಳುತ್ತದೆ.</p>.<p>ಮಂಗಳಮುಖಿಯರ ಬದುಕಿನ ಚಿತ್ರಣವನ್ನು ‘ಮಂಗಳ’ ವೆಬ್ ಸರಣಿಯಾಗಿಸಿಪ್ರೇಕ್ಷಕರ ಮುಂದಿಡಲು ಸಜ್ಜಾಗಿದ್ದಾರೆ ಯುವ ನಿರ್ದೇಶಕಯುವ ನಿರ್ದೇಶಕ ಪೃಥ್ವಿ ಕುಣಿಗಲ್. ಈ ಸರಣಿಯಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುವ ಮೂಲಕ ನಟಿ, ನಿರೂಪಕಿ ಕಾವ್ಯಶಾಸ್ತ್ರಿ ಕೂಡ ವೆಬ್ ಸರಣಿಗೆ ಅಡಿ ಇಟ್ಟಿದ್ದಾರೆ.</p>.<p>ನಿನ್ನೆಯಷ್ಟೇ(ಸೋಮವಾರ) ಅವರ ಹುಟ್ಟುಹಬ್ಬ. ಇದರ ನಿಮಿತ್ತ ‘ಮಂಗಳ’ ವೆಬ್ಸರಣಿಯ ತಂಡ ಪೋಸ್ಟರ್ ಬಿಡುಗಡೆ ಮಾಡಿ, ಕಾವ್ಯಶಾಸ್ತ್ರಿಯವರಿಗೆ ಜನ್ಮದಿನ ಕಾಣಿಕೆ ನೀಡಿದೆ.ಈ ಪೋಸ್ಟರ್ಗೆ ಚಿತ್ರರಂಗದ ಗಣ್ಯರಿಂದ ಒಳ್ಳೆಯ ಪ್ರತಿಕ್ರಿಯೆಯೂ ಬಂದಿದೆಯಂತೆ. ಶೀಘ್ರದಲ್ಲೇ ಒಟಿಟಿ ವೇದಿಕೆಗಳಲ್ಲಿ ‘ಮಂಗಳ’ಯಾನ ವೆಬ್ಸರಣಿ ಬಿಡುಗಡೆಯಾಗುವ ನಿರೀಕ್ಷೆ ಇದೆ.</p>.<p>ಮಂಗಳಮುಖಿಯರ ಬಗ್ಗೆಯೇ ಯಾಕೆ ವೆಬ್ ಸರಣಿ ಮಾಡಲು ನಿರ್ಧರಿಸಲಾಯಿತು? ಇದರಲ್ಲಿ ಯಾರೆಲ್ಲ ನಟಿಸಿದ್ದಾರೆ ಎಂಬ ಪ್ರಶ್ನೆಗಳಿಗೆ ಪೃಥ್ವಿ ಇಲ್ಲಿ ಉತ್ತರಿಸಿದ್ದಾರೆ.</p>.<p>‘ನನ್ನಬಾಲ್ಯದ ಜೀವನ ಅಷ್ಟು ಸುಲಭವಾಗಿರಲಿಲ್ಲ. ಮನೆಯ ಆರ್ಥಿಕ ಪರಿಸ್ಥಿತಿಯಿಂದ ಓದುವುದು ಕೂಡ ಕಷ್ಟವೇ ಆಗಿತ್ತು. ಆದರೆ ನನಗೆ ಸಹಾಯ ಹಸ್ತ ಚಾಚಿದ್ದು ಮತ್ತ್ಯಾರು ಅಲ್ಲ ಅವರೊಬ್ಬರು ಮಂಗಳಮುಖಿ. ನನ್ನನ್ನು ಕಂಡ ಕೂಡಲೇ ಪ್ರತಿ ಬಾರಿಯೂ ₹100 ಕೈಗಿಟ್ಟು ತೆರಳುತ್ತಿದ್ದರು. ನನಗೆ ಯಾಕೆ ದುಡ್ಡು ಕೊಡುತ್ತಾರೆ ಎಂಬುದರ ಅರಿವು ಇಲ್ಲದೇ, ಆ ಮಂಗಳಮುಖಿಯೊಬ್ಬರು ನೀಡುತ್ತಿದ್ದ ದುಡ್ಡನ್ನು ಪುಸ್ತಕಗಳನ್ನು ಖರೀದಿಸಲು ಹಾಗೂ ಶಿಕ್ಷಣದ ಇತರ ಖರ್ಚುಗಳನ್ನು ನಿಭಾಯಿಸಲು ಬಳಸುತ್ತಿದ್ದೆ. ನನಗೆ ಸಹಾಯ ಮಾಡಿದ್ದ ಮಂಗಳಮುಖಿಯರನ್ನು ಸಮಾಜ ನೋಡುವ ದೃಷ್ಟಿ ಬದಲಾಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಈ ಕಥೆ ರಚಿಸಿದ್ದೇನೆ’ ಎನ್ನುವ ಸಂಗತಿ ತೆರೆದಿಟ್ಟರು ಪೃಥ್ವಿ.</p>.<p>ಮಂಗಳಮುಖಿಯರ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳು ಹಾಗೂ ಸಮಾಜ ಅವರನ್ನು ಕಾಣುವ ಬಗೆಯನ್ನು ಈ ಸರಣಿಯಲ್ಲಿ ಅನಾವರಣವಾಗಲಿದೆ.‘ಛೇ ಬಂದ್ರು, ಸ್ವಲ್ಪ ದುಡ್ಡು ಕೊಟ್ಟು ಕಳ್ಸೋಣ ಮೊದಲು’ಎನ್ನುವ ಮನೋಭಾವನೆಯನ್ನು ಬದಲಾಯಿಸಲಿದೆ ಈ ‘ಮಂಗಳ’ ಎನ್ನುವುದು ಅವರ ನಿರೀಕ್ಷೆ.</p>.<p>‘ಮಜಾಭಾರತ’ ಖ್ಯಾತಿಯ ರಾಘವೇಂದ್ರ ಮತ್ತು ಮಂಜು ಪಾವಗಡ ಹಾಗೂ ಅಮೃತಾ ಶೆಟ್ಟರ್ ಮಂಗಳಮುಖಿಯರ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಟಿ– ನಿರೂಪಕಿ ಕಾವ್ಯ ಶಾಸ್ತ್ರಿಯವರದು ಪತ್ರಕರ್ತೆಯ ಪಾತ್ರ. ಕೆಜಿಎಫ್, ಅವನೇ ಶ್ರೀಮನ್ನಾರಾಯಾಣ, ಮುಂದುವರಿದ ಅಧ್ಯಾಯ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ವಿನಯ್ ಕೃಷ್ಣಸ್ವಾಮಿ ಈ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಅವರದು ರಾಜಕೀಯ ಮುಖಂಡನ ಪಾತ್ರ. ಇವರ ಪಾತ್ರದ ಸುತ್ತವೇ ಕಥೆ ನಡೆಯುತ್ತದೆ. ಇದೊಂದು ಥ್ರಿಲ್ಲರ್ ಕಥಾವಸ್ತು.</p>.<p>ಛಾಯಾಗ್ರಹಣ ಆನಂದ್ ಸುಂದರೇಶ, ಕಲಾ ನಿರ್ದೇಶನ ಸತೀಶ್, ಸಾಹಿತ್ಯ– ಸಂಭಾಷಣೆ ಪ್ರಮೋದ್ ಮರವಂತೆ,ಸಂಗೀತ ನಿರ್ದೇಶನ ಮುಂಬೈನ ಮಯೂರೇಶ್, ಸಂಕಲನ ಮಹೇಶ್ ತೊಗಟ ಅವರದು.</p>.<div style="text-align:center"><figcaption><strong>‘ಮಂಗಳ’ ಚಿತ್ರದ ಪೋಸ್ಟರ್</strong></figcaption></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p>‘ಬಂದ್ರಾ ತಗೋಳಿ, ನಾಣ್ಯ ಕೊಡಿ ವಾಪಾಸ್, ಅದೇನ್ ಒಳ್ಳೇದಾಗುತ್ತೋ ನೋಡೋಣ’,<br />‘ಇವರೆಲ್ಲ ಯಾಕ್ ಕೆಲಸ ಮಾಡಲ್ಲ? ಭಿಕ್ಷೆ ಬೇಡಿದ್ರೆ ದುಡ್ಡು ಜಾಸ್ತಿ ಬರುತ್ತೆ ಅಂತ ಇರ್ಬೇಕು’,<br />‘ಪಾಪ ಇವ್ರು ಕೆಲಸ ಮಾಡೋಣ ಅಂದ್ರು ಯಾರು ಕೆಲಸ ಕೊಡಲ್ಲ’,<br />‘ಹೇ ದುಡ್ಡು ಇಲ್ಲ ಏನೂ ಇಲ್ಲ ಹೋಗು ಮುಂದೆ ಹೋಗು’.</p>.<p>– ಇಂಥ ಸಂಭಾಷಣೆಗಳು ನಿತ್ಯ ರೈಲುಗಾಡಿಯಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ, ರಸ್ತೆಯಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ ಕೇಳಿಯೇ ಕೇಳಿರುತ್ತೀರಿ. ನಮ್ಮ ಸಮಾಜ ಮಂಗಳಮುಖಿಯರನ್ನು ನೋಡುವ, ನಡೆಸಿಕೊಳ್ಳುವ ರೀತಿಯನ್ನು ಈ ಮೇಲಿನ ಸಂಭಾಷಣೆಗಳೇ ಹೇಳುತ್ತದೆ.</p>.<p>ಮಂಗಳಮುಖಿಯರ ಬದುಕಿನ ಚಿತ್ರಣವನ್ನು ‘ಮಂಗಳ’ ವೆಬ್ ಸರಣಿಯಾಗಿಸಿಪ್ರೇಕ್ಷಕರ ಮುಂದಿಡಲು ಸಜ್ಜಾಗಿದ್ದಾರೆ ಯುವ ನಿರ್ದೇಶಕಯುವ ನಿರ್ದೇಶಕ ಪೃಥ್ವಿ ಕುಣಿಗಲ್. ಈ ಸರಣಿಯಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುವ ಮೂಲಕ ನಟಿ, ನಿರೂಪಕಿ ಕಾವ್ಯಶಾಸ್ತ್ರಿ ಕೂಡ ವೆಬ್ ಸರಣಿಗೆ ಅಡಿ ಇಟ್ಟಿದ್ದಾರೆ.</p>.<p>ನಿನ್ನೆಯಷ್ಟೇ(ಸೋಮವಾರ) ಅವರ ಹುಟ್ಟುಹಬ್ಬ. ಇದರ ನಿಮಿತ್ತ ‘ಮಂಗಳ’ ವೆಬ್ಸರಣಿಯ ತಂಡ ಪೋಸ್ಟರ್ ಬಿಡುಗಡೆ ಮಾಡಿ, ಕಾವ್ಯಶಾಸ್ತ್ರಿಯವರಿಗೆ ಜನ್ಮದಿನ ಕಾಣಿಕೆ ನೀಡಿದೆ.ಈ ಪೋಸ್ಟರ್ಗೆ ಚಿತ್ರರಂಗದ ಗಣ್ಯರಿಂದ ಒಳ್ಳೆಯ ಪ್ರತಿಕ್ರಿಯೆಯೂ ಬಂದಿದೆಯಂತೆ. ಶೀಘ್ರದಲ್ಲೇ ಒಟಿಟಿ ವೇದಿಕೆಗಳಲ್ಲಿ ‘ಮಂಗಳ’ಯಾನ ವೆಬ್ಸರಣಿ ಬಿಡುಗಡೆಯಾಗುವ ನಿರೀಕ್ಷೆ ಇದೆ.</p>.<p>ಮಂಗಳಮುಖಿಯರ ಬಗ್ಗೆಯೇ ಯಾಕೆ ವೆಬ್ ಸರಣಿ ಮಾಡಲು ನಿರ್ಧರಿಸಲಾಯಿತು? ಇದರಲ್ಲಿ ಯಾರೆಲ್ಲ ನಟಿಸಿದ್ದಾರೆ ಎಂಬ ಪ್ರಶ್ನೆಗಳಿಗೆ ಪೃಥ್ವಿ ಇಲ್ಲಿ ಉತ್ತರಿಸಿದ್ದಾರೆ.</p>.<p>‘ನನ್ನಬಾಲ್ಯದ ಜೀವನ ಅಷ್ಟು ಸುಲಭವಾಗಿರಲಿಲ್ಲ. ಮನೆಯ ಆರ್ಥಿಕ ಪರಿಸ್ಥಿತಿಯಿಂದ ಓದುವುದು ಕೂಡ ಕಷ್ಟವೇ ಆಗಿತ್ತು. ಆದರೆ ನನಗೆ ಸಹಾಯ ಹಸ್ತ ಚಾಚಿದ್ದು ಮತ್ತ್ಯಾರು ಅಲ್ಲ ಅವರೊಬ್ಬರು ಮಂಗಳಮುಖಿ. ನನ್ನನ್ನು ಕಂಡ ಕೂಡಲೇ ಪ್ರತಿ ಬಾರಿಯೂ ₹100 ಕೈಗಿಟ್ಟು ತೆರಳುತ್ತಿದ್ದರು. ನನಗೆ ಯಾಕೆ ದುಡ್ಡು ಕೊಡುತ್ತಾರೆ ಎಂಬುದರ ಅರಿವು ಇಲ್ಲದೇ, ಆ ಮಂಗಳಮುಖಿಯೊಬ್ಬರು ನೀಡುತ್ತಿದ್ದ ದುಡ್ಡನ್ನು ಪುಸ್ತಕಗಳನ್ನು ಖರೀದಿಸಲು ಹಾಗೂ ಶಿಕ್ಷಣದ ಇತರ ಖರ್ಚುಗಳನ್ನು ನಿಭಾಯಿಸಲು ಬಳಸುತ್ತಿದ್ದೆ. ನನಗೆ ಸಹಾಯ ಮಾಡಿದ್ದ ಮಂಗಳಮುಖಿಯರನ್ನು ಸಮಾಜ ನೋಡುವ ದೃಷ್ಟಿ ಬದಲಾಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಈ ಕಥೆ ರಚಿಸಿದ್ದೇನೆ’ ಎನ್ನುವ ಸಂಗತಿ ತೆರೆದಿಟ್ಟರು ಪೃಥ್ವಿ.</p>.<p>ಮಂಗಳಮುಖಿಯರ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳು ಹಾಗೂ ಸಮಾಜ ಅವರನ್ನು ಕಾಣುವ ಬಗೆಯನ್ನು ಈ ಸರಣಿಯಲ್ಲಿ ಅನಾವರಣವಾಗಲಿದೆ.‘ಛೇ ಬಂದ್ರು, ಸ್ವಲ್ಪ ದುಡ್ಡು ಕೊಟ್ಟು ಕಳ್ಸೋಣ ಮೊದಲು’ಎನ್ನುವ ಮನೋಭಾವನೆಯನ್ನು ಬದಲಾಯಿಸಲಿದೆ ಈ ‘ಮಂಗಳ’ ಎನ್ನುವುದು ಅವರ ನಿರೀಕ್ಷೆ.</p>.<p>‘ಮಜಾಭಾರತ’ ಖ್ಯಾತಿಯ ರಾಘವೇಂದ್ರ ಮತ್ತು ಮಂಜು ಪಾವಗಡ ಹಾಗೂ ಅಮೃತಾ ಶೆಟ್ಟರ್ ಮಂಗಳಮುಖಿಯರ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಟಿ– ನಿರೂಪಕಿ ಕಾವ್ಯ ಶಾಸ್ತ್ರಿಯವರದು ಪತ್ರಕರ್ತೆಯ ಪಾತ್ರ. ಕೆಜಿಎಫ್, ಅವನೇ ಶ್ರೀಮನ್ನಾರಾಯಾಣ, ಮುಂದುವರಿದ ಅಧ್ಯಾಯ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ವಿನಯ್ ಕೃಷ್ಣಸ್ವಾಮಿ ಈ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಅವರದು ರಾಜಕೀಯ ಮುಖಂಡನ ಪಾತ್ರ. ಇವರ ಪಾತ್ರದ ಸುತ್ತವೇ ಕಥೆ ನಡೆಯುತ್ತದೆ. ಇದೊಂದು ಥ್ರಿಲ್ಲರ್ ಕಥಾವಸ್ತು.</p>.<p>ಛಾಯಾಗ್ರಹಣ ಆನಂದ್ ಸುಂದರೇಶ, ಕಲಾ ನಿರ್ದೇಶನ ಸತೀಶ್, ಸಾಹಿತ್ಯ– ಸಂಭಾಷಣೆ ಪ್ರಮೋದ್ ಮರವಂತೆ,ಸಂಗೀತ ನಿರ್ದೇಶನ ಮುಂಬೈನ ಮಯೂರೇಶ್, ಸಂಕಲನ ಮಹೇಶ್ ತೊಗಟ ಅವರದು.</p>.<div style="text-align:center"><figcaption><strong>‘ಮಂಗಳ’ ಚಿತ್ರದ ಪೋಸ್ಟರ್</strong></figcaption></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>