ಗಾಜಿನಮನೆಯಲ್ಲಿ ಗುರುವಾರ ಸಿನಿಮಾದ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ನಾಗರಾಜ್ ಶಂಕರ್, ‘ಮರಳಿ ಮನಸಾಗಿದೆ ಸಂಗೀತ ಪ್ರಧಾನ ಪ್ರೇಮ ಕಥೆಯನ್ನು ಒಳಗೊಂಡಿದೆ. ವ್ಯಕ್ತಿಯ ಕೊನೆಯವರೆಗೂ ಭಾವನೆ ಇರುತ್ತದೆ ಎಂಬುದನ್ನು ತೋರಿಸುತ್ತಿದ್ದೇವೆ. ಒಂಬತ್ತು ಹಾಡುಗಳಿವೆ. ಮೇ 3ರಿಂದ ದಾವಣಗೆರೆಯಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ. ಗುರುವಾರ ಹಾಗೂ ಶುಕ್ರವಾರ ರಾತ್ರಿ ಗಾಜಿನಮನೆಯಲ್ಲಿ ದೀಪಾಲಂಕಾರದ ನಡುವೆ ಚಿತ್ರೀಕರಣ ಮಾಡಲಾಗುತ್ತಿದೆ. ಬೆಂಗಳೂರು, ದಾವಣಗೆರೆ, ಕಳಸ, ಕಾರವಾರದಲ್ಲಿನ ಪ್ರಕೃತಿ ಸೌಂದರ್ಯವನ್ನು ಸಿನಿಮಾದಲ್ಲಿ ತೋರಿಸಲಾಗುತ್ತಿದೆ’ ಎಂದು ಹೇಳಿದರು.