<p>ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರುವ ‘ಶಿವಾರ್ಜುನ ಚಿತ್ರದ ‘ಹಕುನಾ ಮಟಾಟ’ ವಿಡಿಯೋ ಸಾಂಗ್ ಮತ್ತು ಇದೇ ಚಿತ್ರಕ್ಕೆ ಕವಿರಾಜ್ ರಚಿಸಿ, ನಟಿ ಮೇಘನಾ ರಾಜ್ ಹಾಡಿರುವ ‘ಅಲ್ಲೊಂದು ನೀಲಿ ಬಾನು’ ರೊಮ್ಯಾಂಟಿಕ್ ಗೀತೆ ಬಿಡುಗಡೆಯಾಗಿವೆ. ಇವು ಸಿನಿರಸಿಕರ ಗಮನ ಸೆಳೆಯುವಂತಿವೆ.</p>.<p>ಈ ಚಿತ್ರ ಇದೇ 12ರಂದು ತೆರೆ ಕಾಣಲಿದೆ. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಶಿವತೇಜಸ್. ಜತೆಗೆ ಕಥೆ,ಚಿತ್ರಕಥೆಯನ್ನು ಇವರೇ ಬರೆದಿದ್ದಾರೆ. ಈ ಹಿಂದೆ ‘ಮಳೆ’, ‘ಧೈರ್ಯಂ’ ಮತ್ತು ‘ಲೌಡ್ ಸ್ಪೀಕರ್’ ಚಿತ್ರಕ್ಕೆ ಶಿವತೇಜಸ್ ಆ್ಯಕ್ಷನ್ ಕಟ್ ಹೇಳಿದ್ದರು. ಚಿತ್ರಕ್ಕೆ ಸಾಧುಕೋಕಿಲ ಹಿನ್ನೆಲೆ ಸಂಗೀತ ನೀಡಿದ್ದು, ಅವರ ಪುತ್ರ ಸುರಾಗ್ ಹಾಡುಗಳಿಗೆ ಸಂಗೀತ ಸಂಯೋಜಿಸಿ ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗಿದ್ದಾರೆ.</p>.<p>ತಾರಾ ಅವರ ಪುತ್ರ ಶ್ರೀಕೃಷ್ಣ ಈ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ್ದಾನೆ.</p>.<p>ಮೂರು ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ದುಡಿದಿರುವಶಿವಾರ್ಜುನ, ಈ ಚಿತ್ರದ ನಿರ್ಮಾಪಕರು.ಪುತ್ರಿ ಹೆಸರಿನನಿಶ್ಚಿತಾ ಕಂಬೈನ್ಸ್ ಮೂಲಕ ಹಾಗೂ ಪತ್ನಿ ಎಂ.ಬಿ.ಮಂಜುಳಾ ಶಿವಾರ್ಜುನ ಹೆಸರಿನಲ್ಲಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ಮಾಪಕ ಹೆಸರೇ ಚಿತ್ರದ ಶೀರ್ಷಿಕೆಯಾಗಿದೆ. ‘ಇದೇ ಚಿತ್ರತಂಡದೊಂದಿಗೆ ಇನ್ನೊಂದು ಹೊಸ ಚಿತ್ರವನ್ನು ಸದ್ಯದಲ್ಲೇ ಪ್ರಕಟಿಸಲಿದ್ದೇನೆ’ ಎನ್ನುವ ಮಾತು ಸೇರಿಸಿದರು ಶಿವಾರ್ಜುನ.</p>.<p>‘ಸಂಪೂರ್ಣ ಆ್ಯಕ್ಷನ್ಪ್ರಧಾನ ಚಿತ್ರದಲ್ಲಿ ನಟಿಸದ ಕೊರತೆಯೊಂದು ನನ್ನನ್ನು ಕಾಡುತ್ತಿತ್ತು. ಅದನ್ನು ಈ ಚಿತ್ರದಲ್ಲಿ ನೀಗಿಸಿಕೊಂಡಿದ್ದೇನೆ. ಸಿನಿಮಾವನ್ನು ಪ್ರೇಕ್ಷಕನಾಗಿ ನೋಡಿ ತುಂಬಾ ಖುಷಿಪಟ್ಟಿದ್ದೇನೆ. ಇದನ್ನು ಸಂಪೂರ್ಣ ಪೈಸಾ ವಸೂಲ್ ಸಿನಿಮಾ ಎನ್ನಬಹುದು’ ಎಂದರು ನಟ ಚಿರಂಜೀವಿ ಸರ್ಜಾ.</p>.<p>ನಾಯಕಿ ಅಮೃತಾ ಅಯ್ಯಂಗಾರ್, ‘ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದೆ.ಸಿನಿಮಾ ಮನರಂಜನಾತ್ಮಕವಾಗಿದೆ. ನನ್ನದು ತುಂಬಾಬೋಲ್ಡ್ ಪಾತ್ರ. ಮಾತು, ಬಟ್ಟೆ, ವರ್ತನೆಯಲ್ಲೂ ಬೋಲ್ಡ್ನೆಸ್ ಇದೆ. ಒಂದು ರೀತಿ ಬಜಾರಿ ಪಾತ್ರ ಎನ್ನಬಹುದು’ ಎಂದರು.</p>.<p>‘ಕುಟುಂಬಗಳು ಸೇರಿ ಮಾಡಿರುವ ಸಿನಿಮಾ ಅಷ್ಟೇ ಅಲ್ಲ, ಮನರಂಜನೆಯಲ್ಲೂ ಪಕ್ಕಾ ಫ್ಯಾಮಿಲಿ ಚಿತ್ರ’ ಎಂದರು ನಟಿ ತಾರಾ ಮತ್ತು ಹಾಸ್ಯ ನಟ ಸಾಧು ಕೋಕಿಲ.</p>.<p>ಸಹ ನಾಯಕಿಯರಾಗಿಅಕ್ಷತಾ ಶ್ರೀನಿವಾಸ್, ಅಕ್ಷಿತಾ ಬಣ್ಣ ಹಚ್ಚಿದ್ದಾರೆ.ತಾರಾಗಣದಲ್ಲಿ ಕಿಶೋರ್, ಸಾಧು ಕೋಕಿಲ, ನಯನ, ಶಿವರಾಜ್.ಕೆ.ಆರ್.ಪೇಟೆ ಮುಂತಾದವರು ನಟಿಸಿದ್ದಾರೆ.</p>.<p>ಛಾಯಾಗ್ರಹಣ ಎಚ್.ಸಿ. ವೇಣು,ಸಂಕಲನ ಕೆ.ಎಂ.ಪ್ರಕಾಶ್, ಸಾಹಸ ರವಿವರ್ಮ, ವಿನೋದ್, ನೃತ್ಯ ಮುರಳಿ, ಗೀತ ಸಾಹಿತ್ಯ ಯೋಗರಾಜ್ ಭಟ್, ಕವಿರಾಜ್, ವಿ. ನಾಗೇಂದ್ರಪ್ರಸಾದ್ ಅವರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರುವ ‘ಶಿವಾರ್ಜುನ ಚಿತ್ರದ ‘ಹಕುನಾ ಮಟಾಟ’ ವಿಡಿಯೋ ಸಾಂಗ್ ಮತ್ತು ಇದೇ ಚಿತ್ರಕ್ಕೆ ಕವಿರಾಜ್ ರಚಿಸಿ, ನಟಿ ಮೇಘನಾ ರಾಜ್ ಹಾಡಿರುವ ‘ಅಲ್ಲೊಂದು ನೀಲಿ ಬಾನು’ ರೊಮ್ಯಾಂಟಿಕ್ ಗೀತೆ ಬಿಡುಗಡೆಯಾಗಿವೆ. ಇವು ಸಿನಿರಸಿಕರ ಗಮನ ಸೆಳೆಯುವಂತಿವೆ.</p>.<p>ಈ ಚಿತ್ರ ಇದೇ 12ರಂದು ತೆರೆ ಕಾಣಲಿದೆ. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಶಿವತೇಜಸ್. ಜತೆಗೆ ಕಥೆ,ಚಿತ್ರಕಥೆಯನ್ನು ಇವರೇ ಬರೆದಿದ್ದಾರೆ. ಈ ಹಿಂದೆ ‘ಮಳೆ’, ‘ಧೈರ್ಯಂ’ ಮತ್ತು ‘ಲೌಡ್ ಸ್ಪೀಕರ್’ ಚಿತ್ರಕ್ಕೆ ಶಿವತೇಜಸ್ ಆ್ಯಕ್ಷನ್ ಕಟ್ ಹೇಳಿದ್ದರು. ಚಿತ್ರಕ್ಕೆ ಸಾಧುಕೋಕಿಲ ಹಿನ್ನೆಲೆ ಸಂಗೀತ ನೀಡಿದ್ದು, ಅವರ ಪುತ್ರ ಸುರಾಗ್ ಹಾಡುಗಳಿಗೆ ಸಂಗೀತ ಸಂಯೋಜಿಸಿ ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗಿದ್ದಾರೆ.</p>.<p>ತಾರಾ ಅವರ ಪುತ್ರ ಶ್ರೀಕೃಷ್ಣ ಈ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ್ದಾನೆ.</p>.<p>ಮೂರು ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ದುಡಿದಿರುವಶಿವಾರ್ಜುನ, ಈ ಚಿತ್ರದ ನಿರ್ಮಾಪಕರು.ಪುತ್ರಿ ಹೆಸರಿನನಿಶ್ಚಿತಾ ಕಂಬೈನ್ಸ್ ಮೂಲಕ ಹಾಗೂ ಪತ್ನಿ ಎಂ.ಬಿ.ಮಂಜುಳಾ ಶಿವಾರ್ಜುನ ಹೆಸರಿನಲ್ಲಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ಮಾಪಕ ಹೆಸರೇ ಚಿತ್ರದ ಶೀರ್ಷಿಕೆಯಾಗಿದೆ. ‘ಇದೇ ಚಿತ್ರತಂಡದೊಂದಿಗೆ ಇನ್ನೊಂದು ಹೊಸ ಚಿತ್ರವನ್ನು ಸದ್ಯದಲ್ಲೇ ಪ್ರಕಟಿಸಲಿದ್ದೇನೆ’ ಎನ್ನುವ ಮಾತು ಸೇರಿಸಿದರು ಶಿವಾರ್ಜುನ.</p>.<p>‘ಸಂಪೂರ್ಣ ಆ್ಯಕ್ಷನ್ಪ್ರಧಾನ ಚಿತ್ರದಲ್ಲಿ ನಟಿಸದ ಕೊರತೆಯೊಂದು ನನ್ನನ್ನು ಕಾಡುತ್ತಿತ್ತು. ಅದನ್ನು ಈ ಚಿತ್ರದಲ್ಲಿ ನೀಗಿಸಿಕೊಂಡಿದ್ದೇನೆ. ಸಿನಿಮಾವನ್ನು ಪ್ರೇಕ್ಷಕನಾಗಿ ನೋಡಿ ತುಂಬಾ ಖುಷಿಪಟ್ಟಿದ್ದೇನೆ. ಇದನ್ನು ಸಂಪೂರ್ಣ ಪೈಸಾ ವಸೂಲ್ ಸಿನಿಮಾ ಎನ್ನಬಹುದು’ ಎಂದರು ನಟ ಚಿರಂಜೀವಿ ಸರ್ಜಾ.</p>.<p>ನಾಯಕಿ ಅಮೃತಾ ಅಯ್ಯಂಗಾರ್, ‘ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದೆ.ಸಿನಿಮಾ ಮನರಂಜನಾತ್ಮಕವಾಗಿದೆ. ನನ್ನದು ತುಂಬಾಬೋಲ್ಡ್ ಪಾತ್ರ. ಮಾತು, ಬಟ್ಟೆ, ವರ್ತನೆಯಲ್ಲೂ ಬೋಲ್ಡ್ನೆಸ್ ಇದೆ. ಒಂದು ರೀತಿ ಬಜಾರಿ ಪಾತ್ರ ಎನ್ನಬಹುದು’ ಎಂದರು.</p>.<p>‘ಕುಟುಂಬಗಳು ಸೇರಿ ಮಾಡಿರುವ ಸಿನಿಮಾ ಅಷ್ಟೇ ಅಲ್ಲ, ಮನರಂಜನೆಯಲ್ಲೂ ಪಕ್ಕಾ ಫ್ಯಾಮಿಲಿ ಚಿತ್ರ’ ಎಂದರು ನಟಿ ತಾರಾ ಮತ್ತು ಹಾಸ್ಯ ನಟ ಸಾಧು ಕೋಕಿಲ.</p>.<p>ಸಹ ನಾಯಕಿಯರಾಗಿಅಕ್ಷತಾ ಶ್ರೀನಿವಾಸ್, ಅಕ್ಷಿತಾ ಬಣ್ಣ ಹಚ್ಚಿದ್ದಾರೆ.ತಾರಾಗಣದಲ್ಲಿ ಕಿಶೋರ್, ಸಾಧು ಕೋಕಿಲ, ನಯನ, ಶಿವರಾಜ್.ಕೆ.ಆರ್.ಪೇಟೆ ಮುಂತಾದವರು ನಟಿಸಿದ್ದಾರೆ.</p>.<p>ಛಾಯಾಗ್ರಹಣ ಎಚ್.ಸಿ. ವೇಣು,ಸಂಕಲನ ಕೆ.ಎಂ.ಪ್ರಕಾಶ್, ಸಾಹಸ ರವಿವರ್ಮ, ವಿನೋದ್, ನೃತ್ಯ ಮುರಳಿ, ಗೀತ ಸಾಹಿತ್ಯ ಯೋಗರಾಜ್ ಭಟ್, ಕವಿರಾಜ್, ವಿ. ನಾಗೇಂದ್ರಪ್ರಸಾದ್ ಅವರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>