ನಿರ್ಮಾಪಕ ಮಧುಸೂದನ್ ಮಾತನಾಡಿ, ‘ಕಥೆಯೇ ಚಿತ್ರ ನಿರ್ಮಿಸಲು ಪ್ರೇರಣೆ. ಚಿತ್ರದಲ್ಲಿ ನಾಯಕಿ ಸೇರಿ ಐದು ಪಾತ್ರಗಳು ಪ್ರಮುಖವಾಗಿವೆ. ಹಾಗಾಗಿ, ಇಲ್ಲಿ ಕಥೆಯೇ ನಾಯಕನಿದ್ದಂತೆ. ಶಕ್ತಿ ಶೇಖರ್ ಸಿನಿಮಾಟೊಗ್ರಫಿಯಲ್ಲಿ ಚಿತ್ರ ಚನ್ನಾಗಿ ಮೂಡಿ ಬಂದಿದೆ. ಸಿನಿಮಾ ರಾಜ್ಯದಾದ್ಯಂತ 60 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ’ ಎಂದು ಹೇಳಿದರು.