<p><strong>ಚೆನ್ನೈ:</strong> ತಮಿಳು ಚಿತ್ರರಂಗದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಖ್ಯಾತ ಛಾಯಾಗ್ರಾಹಕ ಮತ್ತು ಸಿನಿಮಾ ನಿರ್ದೇಶಕ ಕೆ.ವಿ.ಆನಂದ್(54) ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.</p>.<p>‘ಆನಂದ್ ಅವರು ಇಲ್ಲಿನ ಆಸ್ಪತ್ರೆಯಲ್ಲಿ ಮುಂಜಾನೆ 3 ಗಂಟೆಗೆ ಹೃದಯಾಘಾದಿಂದ ನಿಧನರಾದರು‘ ಎಂದು ಸಿನಿಮಾ ಕ್ಷೇತ್ರದ ಪ್ರಚಾರಕ ರಿಯಾಜ್ ಕೆ ತಿಳಿಸಿದ್ದಾರೆ.</p>.<p>ಫೋಟೊ ಜರ್ನಲಿಸ್ಟ್ ಆಗಿದ್ದ ಆನಂದ್, 1994 ರಲ್ಲಿ ಮಲಯಾಳಂ ಚಲನಚಿತ್ರ 'ತೇನ್ವಿನ್ ಕೊಂಬತ್'ದ ಮೂಲಕ ಸಿನಿಮಾ ಛಾಯಾಗ್ರಹಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಛಾಯಾಗ್ರಹಣ ಮಾಡಿದ ಈ ಮೊದಲ ಸಿನಿಮಾಕ್ಕೆ ರಾಷ್ಟ್ರಮಟ್ಟದ ಉತ್ತಮ ಸಿನಿಮಾ ಛಾಯಾಗ್ರಾಹಕ ಪ್ರಶಸ್ತಿ ಲಭ್ಯವಾಗಿತ್ತು.</p>.<p>ಒಂದು ದಶಕದ ಕಾಲ ಸಿನಿಮಾ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಆನಂದ್, 2005ರಲ್ಲಿ ತಮಿಳು ಚಿತ್ರ 'ಕಾನಾ ಕಾಂಡೆನ್' (2005) ನಿರ್ದೇಶಿಸುವ ಮೂಲಕ ನಿರ್ದೇಶನ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು.</p>.<p>'ಪುಣ್ಯ ಭೂಮಿ ನಾ ದೇಸಂ', 'ಕಾದಲ್ ದೇಸಂ', 'ಚಂದ್ರಲೇಖ', 'ಮುಧಲವನ್', 'ಜೋಶ್', 'ನಾಯಕ್: ದಿ ರಿಯಲ್ ಹೀರೋ', 'ಬಾಯ್ಸ್, 'ಖಾಕಿ', 'ಶಿವಾಜಿ' ಮುಂತಾದ ಚಿತ್ರಗಳಿಗೆ ಆನಂದ್ ಛಾಯಾಗ್ರಹಣ ಮಾಡಿದ್ದಾರೆ.</p>.<p>‘ಕೊ, ಅಯನ್, ಮಾತ್ರನ್, ಆನಗನ್ ಮತ್ತು ಕಾವನ್ ಮತ್ತು ಕಾಪ್ಪಾನ್ – ಇವು ಆನಂದ್ ಅವರು ನಿರ್ದೇಶಿಸಿರುವ ಯಶಸ್ವಿ ಚಲನ ಚಿತ್ರಗಳು.</p>.<p>‘ಆನಂದ್ ಅವರು ಫೋಟೊಜರ್ನಲಿಸ್ಟ್ ಆಗಿ ವೃತ್ತಿ ಬದುಕು ಆರಂಭಿಸಿದರು. ನಂತರ ಸ್ವಂತ ಪರಿಶ್ರಮ ಮತ್ತು ಹಲವು ಪ್ರಯತ್ನಗಳೊಂದಿಗೆ ಸಿನಿಮಾ ಛಾಯಾಗ್ರಹಕರಾಗಿ– ಸಿನಿಮಾ ನಿರ್ದೇಶಕರಾಗಿ ರೂಪುಗೊಂಡರು‘ ಎಂದು ಖ್ಯಾತ ನಟ, ಮಕ್ಕಳ್ ನೀದಿ ಮಯ್ಯಮ್ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ನೆನಪಿಸಿಕೊಂಡಿದ್ದಾರೆ.</p>.<p>‘ಆನಂದ್ ಅವರ ಅಗಲಿಕೆಯಿಂದ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ‘ ಎಂದು ಕಮಲ್ ಸಂತಾಪ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ತಮಿಳು ಚಿತ್ರರಂಗದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಖ್ಯಾತ ಛಾಯಾಗ್ರಾಹಕ ಮತ್ತು ಸಿನಿಮಾ ನಿರ್ದೇಶಕ ಕೆ.ವಿ.ಆನಂದ್(54) ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.</p>.<p>‘ಆನಂದ್ ಅವರು ಇಲ್ಲಿನ ಆಸ್ಪತ್ರೆಯಲ್ಲಿ ಮುಂಜಾನೆ 3 ಗಂಟೆಗೆ ಹೃದಯಾಘಾದಿಂದ ನಿಧನರಾದರು‘ ಎಂದು ಸಿನಿಮಾ ಕ್ಷೇತ್ರದ ಪ್ರಚಾರಕ ರಿಯಾಜ್ ಕೆ ತಿಳಿಸಿದ್ದಾರೆ.</p>.<p>ಫೋಟೊ ಜರ್ನಲಿಸ್ಟ್ ಆಗಿದ್ದ ಆನಂದ್, 1994 ರಲ್ಲಿ ಮಲಯಾಳಂ ಚಲನಚಿತ್ರ 'ತೇನ್ವಿನ್ ಕೊಂಬತ್'ದ ಮೂಲಕ ಸಿನಿಮಾ ಛಾಯಾಗ್ರಹಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಛಾಯಾಗ್ರಹಣ ಮಾಡಿದ ಈ ಮೊದಲ ಸಿನಿಮಾಕ್ಕೆ ರಾಷ್ಟ್ರಮಟ್ಟದ ಉತ್ತಮ ಸಿನಿಮಾ ಛಾಯಾಗ್ರಾಹಕ ಪ್ರಶಸ್ತಿ ಲಭ್ಯವಾಗಿತ್ತು.</p>.<p>ಒಂದು ದಶಕದ ಕಾಲ ಸಿನಿಮಾ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಆನಂದ್, 2005ರಲ್ಲಿ ತಮಿಳು ಚಿತ್ರ 'ಕಾನಾ ಕಾಂಡೆನ್' (2005) ನಿರ್ದೇಶಿಸುವ ಮೂಲಕ ನಿರ್ದೇಶನ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು.</p>.<p>'ಪುಣ್ಯ ಭೂಮಿ ನಾ ದೇಸಂ', 'ಕಾದಲ್ ದೇಸಂ', 'ಚಂದ್ರಲೇಖ', 'ಮುಧಲವನ್', 'ಜೋಶ್', 'ನಾಯಕ್: ದಿ ರಿಯಲ್ ಹೀರೋ', 'ಬಾಯ್ಸ್, 'ಖಾಕಿ', 'ಶಿವಾಜಿ' ಮುಂತಾದ ಚಿತ್ರಗಳಿಗೆ ಆನಂದ್ ಛಾಯಾಗ್ರಹಣ ಮಾಡಿದ್ದಾರೆ.</p>.<p>‘ಕೊ, ಅಯನ್, ಮಾತ್ರನ್, ಆನಗನ್ ಮತ್ತು ಕಾವನ್ ಮತ್ತು ಕಾಪ್ಪಾನ್ – ಇವು ಆನಂದ್ ಅವರು ನಿರ್ದೇಶಿಸಿರುವ ಯಶಸ್ವಿ ಚಲನ ಚಿತ್ರಗಳು.</p>.<p>‘ಆನಂದ್ ಅವರು ಫೋಟೊಜರ್ನಲಿಸ್ಟ್ ಆಗಿ ವೃತ್ತಿ ಬದುಕು ಆರಂಭಿಸಿದರು. ನಂತರ ಸ್ವಂತ ಪರಿಶ್ರಮ ಮತ್ತು ಹಲವು ಪ್ರಯತ್ನಗಳೊಂದಿಗೆ ಸಿನಿಮಾ ಛಾಯಾಗ್ರಹಕರಾಗಿ– ಸಿನಿಮಾ ನಿರ್ದೇಶಕರಾಗಿ ರೂಪುಗೊಂಡರು‘ ಎಂದು ಖ್ಯಾತ ನಟ, ಮಕ್ಕಳ್ ನೀದಿ ಮಯ್ಯಮ್ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ನೆನಪಿಸಿಕೊಂಡಿದ್ದಾರೆ.</p>.<p>‘ಆನಂದ್ ಅವರ ಅಗಲಿಕೆಯಿಂದ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ‘ ಎಂದು ಕಮಲ್ ಸಂತಾಪ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>