ಹೆಬ್ಬಾಳೆ ಕೃಷ್ಣ, ಅಚ್ಯುತಕುಮಾರ್, ರಾಜೇಶ್ ನಟರಂಗ, ಅವಿನಾಶ್, ಸಿರಿ ಪ್ರಹ್ಲಾದ್, ಮಂಡ್ಯ ರಮೇಶ್ ಮತ್ತು ‘ಮುಖ್ಯಮಂತ್ರಿ’ ಚಂದ್ರು ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಬಂಡವಾಳ ಹೂಡಿರುವುದು ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ಎಂ. ಗೋವಿಂದ. ಅಂದಹಾಗೆ ಇದು ಪಿಆರ್ಕೆ ಪ್ರೊಡಕ್ಷನ್ಸ್ನಡಿ ನಿರ್ಮಾಣವಾಗಿ ತೆರೆಕಂಡಿರುವ ಮೂರನೇ ಚಿತ್ರ.